ನಕಲಿ ರೋಗಿ ಕಂಡು ಬೆಚ್ಚಿ ಬಿದ್ದರು
ಸುಮ್ಮನೇ ಸವಾರಿ ಮಾಡುತ್ತಿದ್ದ ಯುವಕರಿಗೆ ಪಾಠ
Team Udayavani, Apr 25, 2020, 6:00 AM IST
ಲಾಕ್ಡೌನ್ ಇದ್ದರೂ ಅದನ್ನು ಉಲ್ಲಂಘಿಸಿ, ಮಾಸ್ಕ್ ಧರಿಸದೆ ಒಂದೇ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ಮೂವರು ಯುವಕರಿಗೆ ಪಾಠ ಕಲಿಸುವ ಸಲುವಾಗಿ ಪೊಲೀಸರು, ನಕಲಿ ಕೋವಿಡ್-19 ರೋಗಿ ಇರುವ ಅಂಬ್ಯುಲೆನ್ಸ್ ಹತ್ತಿಸಿ, ಬುದ್ಧಿ ಕಲಿಸಿದ ಘಟನೆ ತಮಿಳುನಾಡಿನ ತಿರುಪ್ಪೂರ್ನಲ್ಲಿ ನಡೆದಿದೆ.
ಸದ್ಯಕ್ಕೆ ಈ ವಿಡಿಯೊ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೊಲೀಸರು ಆ ಯುವಕರಿಗೆ ತಕ್ಕ ಪಾಠ ಕಲಿಸಿದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೋವಿಡ್-19 ವೈರಸ್ ಹರಡುವುದನ್ನು ತಪ್ಪಿಸಲು ದೇಶವ್ಯಾಪ್ತಿ ಲಾಕ್ಡೌನ್ ಘೋಷಿಸಿದ್ದರೂ, ಅದನ್ನು ಲೆಕ್ಕಿಸದೆ, ಮುಖಕ್ಕೆ ಮಾಸ್ಕ್ ಕೂಡ ಧರಿಸದೆ, ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರನ್ನು ಚೆಕ್ಪೋಸ್ಟ್ನಲ್ಲಿ ಪೊಲೀಸರು ತಡೆದರು.
ಅವರಿಗೆ ಪಾಠ ಕಲಿಸಲು ಅಂಬ್ಯುಲೆನ್ಸ್ ಹತ್ತಿ ಕೂರುವಂತೆ ಸೂಚಿಸಿದ್ದಾರೆ. ಗಾಬರಿಯಲ್ಲಿದ್ದ ಆ ಯುವಕರು ಅಂಬ್ಯುಲೆನ್ಸ್ ಪ್ರವೇಶಿಸಿದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಒಳಗೆ ಹೋಗುತ್ತಿದ್ದಂತೆಯೇ, ಆ ಮೂವರು ಯುವಕರಿಗೆ ಪೊಲೀಸರು ಒಳಗೆ ಕೋವಿಡ್-19 ವೈರಸ್ ತಗುಲಿರುವ ರೋಗಿ ಇದ್ದಾರೆ ಎಂದು ಹೇಳಿದ್ದಾರೆ.
ತಕ್ಷಣವೇ, ಹೆದರಿದ ಆ ಯುವಕರು, ಅಂಬ್ಯುಲೆನ್ಸ್ ನಿಂದ ಹೊರ ಜಿಗಿಯಲು ಪ್ರಯತ್ನಿಸಿದ್ದಾರೆ. ಒಳಗಿದ್ದ ನಕಲಿ ಕೋವಿಡ್-19 ವೈರಸ್ ರೋಗಿ ಕೂಡ ಆ ಯುವಕರ ಬಳಿ ಕೆಮ್ಮುತ್ತಲೇ ಬರಲು ಯತ್ನಿಸುತ್ತಾರೆ. ಆಗ ಕಿಟಕಿಯಿಂದ ಹೊರ ಹಾರಲು ಯತ್ನಿಸುವ ಯುವಕರನ್ನು ಸ್ವಲ್ಪ ಸಮಯ ಅಲ್ಲೇ ಇರುವಂತೆ ಹೇಳುತ್ತಾರೆ. ಕೊನೆಗೆ ಆ ಯುವಕರು ಅಳುವುದನ್ನು ನೋಡಿದ ಬಳಿಕ ವಾಹನದಿಂದ ಕೆಳಗಿಳಿಸುತ್ತಾರೆ. ಇರುವ ಸತ್ಯ ಸಂಗತಿ ವಿವರಿಸಿ, ವಿನಾಕಾರಣ ಹೊರಗೆ ಸುತ್ತಾಡುವುದುನ್ನು ನಿಲ್ಲಿಸಬೇಕು ಎಂದು ಮನವಿ ಮಾಡುವ ಪೊಲೀಸರ ವಿಡಿಯೋ ಈಗ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ