ವಿವಾಹೇತರ ಲೈಂಗಿಕ ಸಂಬಂಧ: ಪತಿ, ಪತ್ನಿ ವಿಷ ಸೇವಿಸಿ ಆತ್ಮಹತ್ಯೆ
Team Udayavani, Jul 27, 2017, 3:47 PM IST
ಧೋಲ್ಪುರ, ರಾಜಸ್ಥಾನ : ವಿವಾಹೇತರ ಲೈಂಗಿಕ ಸಂಬಂಧದ ವಿಷಯದಲ್ಲಿನ ಮಾತಿನ ಜಗಳದ ಪರಾಕಾಷ್ಠೆಯಲ್ಲಿ ವಿಷ ಸೇವಿಸಿದ ಪತಿ ಆನಂದ್ (40), ಪತ್ನಿ ಪ್ರೀತಿ (38) ಮೃತಪಟ್ಟ ಘಟನೆ ನಡೆದಿದೆ.
ಈ ಘಟನೆಯಲ್ಲಿ ಇವರೊಂದಿಗೆ ವಿಷ ಸೇವಿಸಿದ ಮೂರನೇ ವ್ಯಕ್ತಿಯಾಗಿರುವ ಆನಂದ್ ಅವರ ಸೋದರ ಸಂಬಂಧಿ ರೂಪೇಶ್ (29) ಆಸ್ಪತ್ರೆಯಲ್ಲೀಗ ಸಾವು ಬದುಕಿನ ಹೋರಾಟದಲ್ಲಿ ಇದ್ದಾನೆ ಎಂದು ತಿಳಿದು ಬಂದಿದೆ.
ಈ ಮೂವರು ನಿನ್ನೆ ಬುಧವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಯ ಕೋಣೆಯೊಂದರಲ್ಲಿ ಬಿದ್ದುಕೊಂಡಿದ್ದುದನ್ನು ರೂಪೇಶನ ತಂದೆ ಗಮನಿಸಿ ಒಡನೆಯೇ ಅವರೆಲ್ಲರನ್ನೂ ಸಮೀಪದ ಆಗ್ರಾದಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪತಿ ಆನಂದ್ ಮತ್ತು ಪತ್ನಿ ಪ್ರೀತಿ ಕೊನೆಯುಸಿರೆಳೆದರು.
ಪೊಲೀಸರು ನಡೆಸಿರುವ ಪ್ರಾಥಮಿಕ ಪರೀಕ್ಷೆ ಪ್ರಕಾರ ಪ್ರೀತಿಗೆ ಕಳೆದ ಐದು ವರ್ಷಗಳಿಂದ ರೂಪೇಶ್ ಜತೆಗೆ ವಿವಾಹೇತರ ಲೈಂಗಿಕ ಸಂಬಂಧ ಇತ್ತು. ರೂಪೇಶ್ ಈ ತಿಂಗಳ ಆದಿಯಲ್ಲಿ ಮದುವೆಯಾಗಿದ್ದ. ಆದರೂ ಪ್ರೀತಿ ಜತೆಗಿನ ಆತನ ಲೈಂಗಿಕ ಸಂಬಂಧ ಮುಂದುವರಿದೇ ಇತ್ತು. ರೂಪೇಶ್ ನ ಮಡದಿ ಪೂಜಾಗೆ ತನ್ನ ಪತಿಯ ಈ ವಿವಾಹೇತರ ಲೈಂಗಿಕ ಸಂಬಂಧ ತಿಳಿದು ಆಕೆ ತವರಿಗೆ ಹೋಗಿದ್ದಳು.
ಈ ನಡುವೆ ಈ ಅನೈತಿಕ ಸಂಬಂಧದ ಬಗ್ಗೆ ಆನಂದ್, ಪ್ರೀತಿ ಮತ್ತು ರೂಪೇಶ್ ನಡುವೆ ಮಾತಿನ ಜಗಳ ತಾರಕಕ್ಕೇರಿತ್ತು. ಪರಿಣಾಮವಾಗಿ ಅವರೆಲ್ಲರೂ ವಿಷ ಸೇವಿಸಿದರು ಎಂದು ಎಸ್ಪಿ ರಾಜೇಶ್ ಸಿಂಗ್ ತಿಳಿಸಿದ್ದಾರೆ.
ಮೃತ ಪತಿ ಆನಂದ್ ಮತ್ತು ಪತ್ನಿ ಪ್ರೀತಿ ಅವರ ಶವಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿ ಶವಗಳನ್ನು ಕುಟುಂಬದವರಿಗೆ ಬಿಟ್ಟುಕೊಡಲಾಗಿದೆ. ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!