ಚಿದುಗೆ ಚಿಕಿತ್ಸೆ: ಇಂದು ಸಮಿತಿಯಿಂದ ವರದಿ
Team Udayavani, Nov 1, 2019, 7:52 AM IST
ಹೊಸದಿಲ್ಲಿ: ಮಾಜಿ ಸಚಿವ ಪಿ.ಚಿದಂಬರಂ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ವೈದ್ಯರ ಸಮಿತಿ ರಚಿಸಿ, ಶುಕ್ರವಾರ ವರದಿ ಸಲ್ಲಿಸುವಂತೆ ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಿಲ್ಲಿ ಹೈಕೋರ್ಟ್ ಸೂಚನೆ ನೀಡಿದೆ.
ತಿಹಾರ್ ಜೈಲಲ್ಲಿರುವ ಚಿದು ಅವರು ಕರುಳು ಬೇನೆಯಿಂದ ಬಳಲುತ್ತಿರುವುದರಿಂದ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿರುವ ಹೈದರಾಬಾದ್ನ ಡಾಕ್ಟರ್ ನಾಗೇಶ್ವರ ರಾವ್ ಅವರನ್ನು ವೈದ್ಯರ ಸಮಿತಿಯಲ್ಲಿ ಸೇರಿಸಿಕೊಳ್ಳುವಂತೆಯೂ ಹೈಕೋರ್ಟ್ ಸೂಚಿಸಿದೆ.