ತಿರುಪತಿ ತಿಮ್ಮಪ್ಪನ ಚಿನ್ನಕ್ಕೂ ಕೋವಿಡ್ ಬಿಕ್ಕಟ್ಟು!
Team Udayavani, Oct 8, 2020, 7:54 AM IST
ತಿರುಪತಿ: ಚೆನ್ನೈನ ಇಂಡಿಯನ್ ಓವರ್ ಸೀಸ್ ಬ್ಯಾಂಕ್(ಐಒಬಿ) ನಲ್ಲಿ ತಾನು ಇಟ್ಟಿರುವ ಚಿನ್ನದ ಠೇವಣಿಯನ್ನು ಹಿಂದಿರುಗಿಸುವ ವಿಚಾರದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ಬ್ಯಾಂಕ್ಗೆ ಇನ್ನೂ ಆರು ತಿಂಗಳುಗಳ ಕಾಲಾವಕಾಶ ನೀಡಿದೆ.
ಮೂರು ಠೇವಣಿಗಳು: ಬ್ಯಾಂಕ್ನ ಚೆನ್ನೈ ಶಾಖೆಯಲ್ಲಿ ಮೂರು ಚಿನ್ನದ ಠೇವಣಿಗಳನ್ನು ಇಟ್ಟಿದೆ. ಮೊದಲ ಠೇವಣಿಯಲ್ಲಿ 409.252 ಕೆಜಿ ಚಿನ್ನವಿದ್ದು, ಈ ಠೇವಣಿಯ ಅವಧಿ 2020ರ ಜೂ. 19ರಂದು ಮುಗಿದಿದೆ. ಇನ್ನೊಂದರಲ್ಲಿ 1118.730 ಕೆಜಿ ಚಿನ್ನವಿದ್ದು, ಅದರ ಅವಧಿ 2020ರ ಜೂ. 19ರಂದು ಮುಗಿದಿದೆ. ಮತ್ತೂಂದರಲ್ಲಿ, 33.412 ಕೆಜಿ ಚಿನ್ನವಿದ್ದು ಅದರ ಅವಧಿ ಆ. 2ರಂದು ಮುಗಿದಿದೆ. ಆದರೆ, ಕೊರೊನಾ ಬಿಕ್ಕಟ್ಟಿನಿಂದಾದ ನಷ್ಟದ ಹಿನ್ನೆಲೆಯಲ್ಲಿ ಐಒಬಿಗೆ ಠೇವಣಿ ಅವಧಿ ಮುಗಿದಾದ ಅನಂತರ ಸಕಾಲದಲ್ಲಿ ಬ್ಯಾಂಕ್ ನಿಂದ ಚಿನ್ನವನ್ನು ಹಿಂದಿರುಗಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ಬೆಂಗಳೂರು ಈಗ ಕೋವಿಡ್ ರಾಜಧಾನಿ: ಮಹಾನಗರಗಳ ಪೈಕಿ ಬೆಂಗಳೂರಲ್ಲೇ ಹೆಚ್ಚು ವೈರಸ್!
ಬ್ಯಾಂಕ್ ಸಮರ್ಥನೆ ಏನು?: ಟಿಟಿ ಡಿಗೆ ಮಾಹಿತಿ ನೀಡಿರುವ ಬ್ಯಾಂಕ್, ಜೂ. 17ರಂದು ಮುಕ್ತಾಯವಾಗಿರುವ ಠೇವಣಿಯಲ್ಲಿರುವ 409.252 ಕೆಜಿ ಚಿನ್ನ ವನ್ನು ಬಡ್ಡಿ ಸಮೇತ ಪೂರ್ತಿ ಯಾಗಿ ಹಿಂದಿರುಗಿಸುವುದಾಗಿ ಹೇಳಿತ್ತು. ಆದರೆ, 1118.730 ಕೆಜಿಯಲ್ಲಿ ಸದ್ಯಕ್ಕೆ 575 ಕೆಜಿ ನೀಡುವುದಾಗಿ ಹೇಳಿದ್ದು, ಆ ಠೇವಣಿಯಲ್ಲಿರುವ ಉಳಿದ ಚಿನ್ನ ಹಾಗೂ ಮೂರನೇ ಠೇವಣಿಯಲ್ಲಿರುವ ಪೂರ್ತಿ ಚಿನ್ನವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಿಳಿಸಿದೆ. ಹಾಗಾಗಿ, ಟಿಟಿ ಡಿಯು ಸಂಪೂರ್ಣ ಚಿನ್ನವನ್ನು ಹಿಂದಿರುಗಿಸಲು ಆರು ತಿಂಗಳುಗಳ ಕಾಲಾವಕಾಶ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ