ನಿಲ್ಲದ ಕೋವಿಡ್ ಮಹಾ ಮಾರುತ
Team Udayavani, Feb 27, 2021, 7:00 AM IST
ಮುಂಬಯಿ/ ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಸತತ 2ನೇ ದಿನವೂ 8 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ಗಳು ದೃಢಪಟ್ಟಿದೆ. ಗುರುವಾರದ 24 ಗಂಟೆಗಳಲ್ಲಿ 8,702 ಮಂದಿಗೆ ಹೆಮ್ಮಾರಿ ತಗುಲಿದ್ದು, 56 ಸೋಂಕಿತರು ಜೀವತೆತ್ತಿದ್ದಾರೆ. 119 ದಿನಗಳ ಅನಂತರ ಮುಂಬಯಿ ಒಂದರಲ್ಲೇ 1,145 ಪ್ರಕರಣ ದಾಖಲಾಗಿದೆ.
ಸಚಿವರಿಗೆ ಕಂಟಕ: ಮಹಿಳೆ ಆತ್ಮಹತ್ಯೆ ಪ್ರಕರಣ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ದರ್ಶನ ಕೊಟ್ಟಿದ್ದ ಸಚಿವ, ಶಿವಸೇನೆ ಮುಖಂಡ ಸಂಜಯ್ ರಾಥೋಡ್ಗೆ ಕಂಟಕ ಎದುರಾಗಿದೆ. ಕರಾಂಜದ ಪೊಹರಾದೇವಿ ದೇಗುಲಕ್ಕೆ ಸಚಿವ ಭೇಟಿ ನೀಡಿದ್ದ ವೇಳೆ, ಒಬ್ಬ ಅರ್ಚಕ ಸೇರಿದಂತೆ 18 ಭಕ್ತರಿಗೆ ಪಾಸಿಟಿವ್ ದೃಢಪಟ್ಟಿರುವುದು ತಿಳಿದುಬಂದಿದೆ. 8 ಜಿಲ್ಲೆಗಳಲ್ಲಿನ ಲಾಕ್ಡೌನ್ ಅನ್ನು ರಾಜ್ಯಾದ್ಯಂತ ವಿಸ್ತರಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಬದಲಾಗಿ, ರೈಲು- ಬಸ್ಗಳ ಸಂಖ್ಯೆ ಕಡಿತಗೊಳಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ- ತರಗತಿಗಳನ್ನು ಆನ್ಲೈನ್ ಮೂಲಕ ಮುಂದುವರಿಸಲು ನಿರ್ಧರಿಸಿದೆ.
ಬ್ರೆಜಿಲ್ಗೆ 2 ಕೋಟಿ ವ್ಯಾಕ್ಸಿನ್ :
ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯ 2 ಕೋಟಿ ಡೋಸ್ಗಳ ಖರೀದಿ ಒಪ್ಪಂದಕ್ಕೆ ಬ್ರೆಜಿಲ್ ಆರೋಗ್ಯ ಸಚಿವಾಲಯ ಸಹಿ ಹಾಕಿದೆ. ಮಾರ್ಚ್ ಅಥವಾ ಮೇ ವೇಳೆಗೆ ಭಾರತ ಲಸಿಕೆ ಪೂರೈಸಲಿದೆ. ಒಪ್ಪಂದದ ಒಟ್ಟು ಮೊತ್ತ 21.15 ಕೋಟಿ ರೂ. ಆಗಿದ್ದು, ಮಾರ್ಚ್ನಲ್ಲಿ ಮೊದಲ 80 ಲಕ್ಷ ಡೋಸ್ಗಳು ಬ್ರೆಜಿಲ್ ತಲುಪಲಿದೆ.
ಕೋವಿಡ್ ಪತ್ತೆಗೆ ಚಿಪ್ ರೆಡಿ :
ಕೋವಿಡ್ ಸೋಂಕು ದೃಢಪಡಿಸಲು ವಿಜ್ಞಾನಿಗಳು ಸ್ಟಾಂಪ್ ಗಾತ್ರದ ಚಿಪ್ ಸಿದ್ಧಗೊಳಿಸಿದ್ದು, ಸ್ಮಾರ್ಟ್ಫೋನ್ ಮೂಲಕ ಕೇವಲ 55 ನಿಮಿಷಗಳಲ್ಲಿ ಇದು ಫಲಿತಾಂಶ ಪ್ರಕಟಿಸುತ್ತದೆ. ಚಿಪ್ನಲ್ಲಿನ ಎಲೆಕ್ಟ್ರೊಕೆಮಿಕಲ್ ಸೆನ್ಸಾರ್ ಬಯೋಮಾರ್ಕರ್ಗೆ ಅಂಟಿಕೊಂಡ ವ್ಯಕ್ತಿಯ ರಕ್ತದ ಕಣವನ್ನು ಸ್ಕ್ಯಾನ್ ಮಾಡುವ ಮೂಲಕ ಕೊರೊನಾ ವೈರಾಣುವನ್ನು ದೃಢಪಡಿಸುತ್ತವೆ ಅಮೆರಿಕದ ರೈಸ್ ವಿವಿಯ ವಿಜ್ಞಾನಿಗಳ ಸಮರ್ಥನೆ.
ಮತ್ತೆ ಎದ್ದ ಕೋವಿಡ್ ಭೀತಿ :
ಕೇರಳ: ಗುರುವಾರದ 24 ಗಂಟೆಗಳಲ್ಲಿ 3,677 ಪ್ರಕರಣಗಳು ದೃಢಪಟ್ಟಿವೆ.
ಒಡಿಶ್ಸಾ: ಕೇರಳ, ಕರ್ನಾಟಕ ಸೇರಿದಂತೆ 12 ರಾಜ್ಯಗಳ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಕಡ್ಡಾಯ: ಒಡಿಸ್ಸಾ
ರಾಜಸ್ಥಾನ: ಮಹಾರಾಷ್ಟ್ರ, ಕೇರಳದಿಂದ ಆಗಮಿಸುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದೆ.
ತಮಿಳುನಾಡು: ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಒಂದು ವಾರ ಕ್ವಾರಂಟೈನ್
ಮೋದಿ ಕೊಂಡಾಡಿದ ಡಬ್ಲ್ಯುಎಚ್ಒ :
“ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವದ 60ಕ್ಕೂ ಅಧಿಕ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದೆ. ಜಗತ್ತಿನ ಇತರ ರಾಷ್ಟ್ರಗಳೂ ಭಾರತವನ್ನು ಅನುಸರಿಸಬೇಕು’ ಎಂದು ಡಬ್ಲ್ಯುಎಚ್ಒ ಪ್ರಧಾನ ನಿರ್ದೇಶಕ ಟೆಡ್ರಾಸ್ ಅಧಾನಾಮ್ ಘೆಬ್ರೆಯೆಸುಸ್ ಟ್ವೀಟ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ