24×7ಲಸಿಕೆ ವಿತರಣೆಗೆ ಸಲಹೆ


Team Udayavani, Jun 11, 2021, 7:00 AM IST

Untitled-1

ಕೋಲ್ಕತಾದ ರಸ್ತೆಯೊಂದರಲ್ಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ತಾಯಿ ಮತ್ತು ಮಕ್ಕಳ ಪ್ರತಿಮೆಗೆ ಮಾಸ್ಕ್ ಹಾಕಿಸಿರುವುದು ಗಮನ ಸೆಳೆಯಿತು.

ನವದೆಹಲಿ: ದೇಶದ ಆರ್ಥಿಕ ಪ್ರಗತಿ ಏರುಮುಖದಲ್ಲಿ ಸಾಗಬೇಕೆಂದರೆ, ಸೆಪ್ಟಂಬರ್‌ ವೇಳೆಗೆ 70 ಕೋಟಿ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಬೇಕಿದೆ. ಹೀಗೆಂದು ಕೇಂದ್ರ ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ದೇಶದ ಶೇ.80ರಷ್ಟು ಮಂದಿಯ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾದರೆ ಮಾತ್ರವೇ ಸಾಮೂಹಿಕ ರೋಗನಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ಉತ್ಪತ್ತಿಯಾಗಲು ಸಾಧ್ಯ. ಎಷ್ಟು ಬೇಗ ನಾವು ಈ ಸಾಮೂಹಿಕ ರೋಗನಿರೋಧಕ ಶಕ್ತಿಯನ್ನು ಗಳಿಸುತ್ತೇವೊ ಅಷ್ಟು ಬೇಗ ದೇಶದ ಆರ್ಥಿಕತೆ ಹಳಿಗೆ ಬರಲು ಸಾಧ್ಯ ಎಂದು ಈ ವರದಿ ಅಭಿಪ್ರಾಯಪಟ್ಟಿದೆ.

ಕೊರೊನಾ ಸೋಂಕಿನ ಎರಡನೇ ಅಲೆಯು ಆರ್ಥಿಕ ಚೇತರಿಕೆಗೆ ತಡೆಯೊಡ್ಡಿದೆ. ಈ ಬಾರಿಯೂ ವಾಡಿಕೆ ಮಳೆಯಾಗಲಿರುವ ಕಾರಣ ಆಹಾರ ವಸ್ತುಗಳ ಹಣದುಬ್ಬರದ ಒತ್ತಡ ಕಡಿಮೆಯಾಗಬಹುದಾದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕುಗಳ ದರ ಹೆಚ್ಚಳ ಮತ್ತು ಅಧಿಕ ಸಾಗಣೆ ವೆಚ್ಚವು ದೇಶೀಯ ಉತ್ಪಾದನೆ ಮತ್ತು ಸೇವಾ ವಲಯಕ್ಕೆ ಹೊಡೆತ ನೀಡುವ ಸಾಧ್ಯತೆಯಿದೆ. ಸ್ಥಳೀಯ ಮಟ್ಟದ ನಿರ್ಬಂಧಗಳು ಜಾರಿಯಲ್ಲಿರುವ ಕಾರಣ ಪೂರೈಕೆ ಸರಪಳಿಗೆ ತೊಂದರೆಯಾಗಿದೆ. ಇದು, ಮೂಲ ಹಣದುಬ್ಬರ(ಆಹಾರ ಮತ್ತು ಇಂಧನ ಹೊರತುಪಡಿಸಿ)ದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಈ ವರದಿ ತಿಳಿಸಿದೆ.

ಸರಕಾರವೇನು ಮಾಡಬೇಕು?: ಹರ್ಡ್‌ ಇಮ್ಯೂನಿಟಿ ಸೃಷ್ಟಿಯಾಗಬೇಕೆಂದರೆ ಲಸಿಕೆ ವಿತರಣೆ ಪ್ರಕ್ರಿಯೆ ವೇಗ ಪಡೆಯಬೇಕು. ಹಾಗಾಗಬೇಕೆಂದರೆ ಸೆಪ್ಟಂಬರ್‌ ವೇಳೆಗೆ 113 ಕೋಟಿ ಡೋಸ್‌ ಲಸಿಕೆಗಳು ಬೇಕೇ ಬೇಕು. ಪ್ರತೀ ದಿನ ಸುಮಾರು 93 ಲಕ್ಷ ಮಂದಿಗೆ ಲಸಿಕೆ ಹಾಕಬೇಕು (ಈವರೆಗೆ ಹಾಕಲಾದ ದೈನಂದಿನ ಗರಿಷ್ಠ ಲಸಿಕೆಯೆಂದರೆ 42.65 ಲಕ್ಷ). ಇದನ್ನು ಸಾಧಿಸಲು ಸರಕಾರವು, ಆಗಸ್ಟ್‌ ಹಾಗೂ ಸೆಪ್ಟಂಬರ್‌ ತಿಂಗಳಲ್ಲಿ ಎರಡೆರಡು ಪಾಳಿಯಲ್ಲಿ ದಿನದ 24 ಗಂಟೆಯೂ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಯುದೊœàಪಾದಿಯಲ್ಲಿ ನಡೆಸಬೇಕು. ಸೂಕ್ತ ಯೋಜನೆ, ಲಸಿಕೆಗಳ ಸಾಗಣೆ, ದಾಸ್ತಾನು ಸಾಮರ್ಥ್ಯ ಹೆಚ್ಚಳ, ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮತ್ತಿತರ ಕೆಲಸಗಳನ್ನೂ ಸರಕಾರ ನಡೆಸಬೇಕು ಎನ್ನುತ್ತದೆ ಈ ಆರ್ಥಿಕ ಮುನ್ನೋಟ ವರದಿ.

ಬಿಹಾರ ಮೃತರ ಸಂಖ್ಯೆ ಪರಿಷ್ಕರಣೆ; ದೇಶದಲ್ಲಿ ಒಂದೇ ದಿನ 6,148 ಸಾವು :

ಹೊಸದಿಲ್ಲಿ: ಬಿಹಾರದಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆಯನ್ನು ಆರೋಗ್ಯ ಇಲಾಖೆಯು ಪರಿಷ್ಕರಿಸಿ, ಹೊಸ ಸಂಖ್ಯೆಯನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿನ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಈ ವರೆಗೆ 5500 ಕ್ಕಿಂತಲೂ ಕಡಿಮೆ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದೇ ಬಿಹಾರ ಹೇಳಿಕೊಂಡು ಬಂದಿತ್ತು. ಆದರೆ, ಗುರುವಾರ ಇದಕ್ಕೆ 3,951 ಹೆಚ್ಚುವರಿ ಸಾವನ್ನು(ಈ ಸಾವುಗಳು ಯಾವಾಗ ಸಂಭವಿಸಿವೆ ಎಂಬ ಮಾಹಿತಿ ಇಲ್ಲ) ಸೇರಿಸಿ, ಹೊಸ ಅಂಕಿಅಂಶ ಬಿಡುಗಡೆ ಮಾಡಿದ ಅಲ್ಲಿನ ಆರೋಗ್ಯ ಇಲಾಖೆ, ಈವರೆಗೆ ಸೋಂಕಿಗೆ ಬಲಿಯಾದವರ ನೈಜ ಸಂಖ್ಯೆ 9,429 ಎಂದು ಘೋಷಿಸಿತು. ಇದರ ಪರಿಣಾಮವೆಂಬಂತೆ, ದೇಶಾದ್ಯಂತ 24 ಗಂಟೆಗಳಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6,148 ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಜತೆಗೆ, ಈ ಅವಧಿಯಲ್ಲಿ 94,052 ಮಂದಿಗೆ ಸೋಂಕು ದೃಢಪಟ್ಟಿದೆ. ಗುಣಮುಖ ಪ್ರಮಾಣ ಶೇ.94.77ಕ್ಕೇರಿದೆ.

ಭಾರತಕ್ಕೆ ಸಿಗಲಿದೆ 8 ಕೋಟಿ ಡೋಸ್‌ ಲಸಿಕೆ :

ವಾಷಿಂಗ್ಟನ್‌/ಸಿಯೋಲ್‌: ಮುಂದಿನ  ಎರಡು ವರ್ಷಗಳಲ್ಲಿ ಅಮೆರಿಕ ಸರಕಾರ ಜಗತ್ತಿನ ವಿವಿಧ ದೇಶಗಳಿಗೆ ಫೈಜರ್‌ ಕಂಪೆನಿಯಿಂದ 500 ಮಿಲಿಯ ಡೋಸ್‌ ಲಸಿಕೆ ಖರೀದಿಸಿ ವಿತರಿಸಲಿದೆ. ಈ ಪೈಕಿ ಭಾರತಕ್ಕೆ ಎಂಟು ಕೋಟಿ ಡೋಸ್‌ ಲಸಿಕೆ ಸಿಗಲಿದೆ. ವಿಶ್ವಸಂಸ್ಥೆ ಪ್ರಾಯೋಜಿತ ಜಾಗತಿಕ ಕೊವ್ಯಾಕ್ಸ್‌ ಲಸಿಕೆ ಹಂಚಿಕೆ ಯೋಜನೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.2ರಂದು ತನ್ನ ಪಾಲಿನಿಂದ ಜಗತ್ತಿಗೆ ಶೇ.75ರಷ್ಟು ಲಸಿಕೆ ವಿತರಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರಕಟಿಸಿದ್ದರು. ಅದರನ್ವಯ ಭಾರತಕ್ಕೆ ಮಾಸಾಂತ್ಯದ ಒಳಗಾಗಿ 8 ಕೋಟಿ ಡೋಸ್‌ ಲಸಿಕೆ ಸಿಗಲಿದೆ. ಕೆಲವು ದಿನಗಳ ಹಿಂದಷ್ಟೇ ಫೈಜರ್‌ ಲಸಿಕೆಯ ಮೊದಲ ಕಂತು ಮುಂದಿನ ತಿಂಗಳ ಮೊದಲ ವಾರದಲ್ಲಿ ಲಭ್ಯವಾಗಲಿದೆ ಎಂದು ಪ್ರಕಟಿಸಿತ್ತು. ಅಮೆರಿಕ ಸರಕಾರದ ನಿರ್ಧಾರವನ್ನು ಏಷ್ಯಾ ಖಂಡದ ದೇಶಗಳ ಸರಕಾರಗಳು ಸ್ವಾಗತಿಸಿವೆ.

ಸಂಕಷ್ಟ ಮೊದಲ ತ್ತೈಮಾಸಿಕಕ್ಕೆ ಸೀಮಿತ :

ಕೊರೊನಾ ಸೋಂಕಿನ 2ನೇ ಅಲೆಯು ದೇಶದ ಆರ್ಥಿಕತೆಗೆ ಸ್ವಲ್ಪಮಟ್ಟಿಗೆ ಪೆಟ್ಟು ಕೊಟ್ಟಿದ್ದರೂ, ಅದು ಪ್ರಸಕ್ತ ವಿತ್ತ ವರ್ಷದ ಮೊದಲ ತ್ತೈಮಾಸಿಕಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂದೂ ವಿತ್ತ ಸಚಿವಾಲಯದ ಮಾಸಿಕ ವರದಿ ಹೇಳಿದೆ. ಜತೆಗೆ, ಲಸಿಕೆ ನೀಡುವಿಕೆ ಪ್ರಕ್ರಿಯೆಯು ಸಮರೋಪಾದಿಯಲ್ಲಿ ನಡೆದರೆ ಮತ್ತು ಬಜೆಟ್‌ನ ಘೋಷಣೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರೆ, ಎರಡನೇ ತ್ತೈಮಾಸಿಕದಲ್ಲಿ ಆರ್ಥಿಕತೆ ಜಿಗಿತುಕೊಳ್ಳಲಿದೆ ಎಂದೂ ವರದಿ ತಿಳಿಸಿದೆ.

ಫೈಜರ್‌ ಲಸಿಕೆಗೆ ಆಂಶಿಕ ರಕ್ಷಣೆ? :

ಹೊಸದಿಲ್ಲಿ: ಅಮೆರಿಕದ ಬಯಾನ್‌ಟೆಕ್‌ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಫೈಜರ್‌ ಲಸಿಕೆಗೆ ಭಾರತದಲ್ಲಿ ಆಂಶಿಕ ರಕ್ಷಣೆ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಲಸಿಕೆಯಿಂದ ಯಾವುದೇ ಪ್ರತಿಕೂಲ ಪರಿಣಾಮ ಉಂಟಾದರೆ ಲಸಿಕಾ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರಿಂದ ರಕ್ಷಣೆ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ. ಫೈಜರ್‌ಗೆ ಸರಕಾರ ಇಂಥ ವಿನಾಯ್ತಿ ನೀಡಿದರೆ, ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಲಸಿಕೆಗಳು ಭಾರತಕ್ಕೆ ಲಗ್ಗೆಯಿಡುವ ಸಾಧ್ಯತೆಯಿದೆ. ಫೈಜರ್‌ಗೆ ಭಾರತದಲ್ಲಿ ಸುಮಾರು 730 ರೂ. ದರ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.