ಲಸಿಕೆ ಕೇವಲ 1 ವರ್ಷದ ರಕ್ಷಕ!


Team Udayavani, Nov 25, 2020, 6:15 AM IST

ಲಸಿಕೆ ಕೇವಲ 1 ವರ್ಷದ ರಕ್ಷಕ!

ಗಾಜಿಯಾಬಾದ್‌ನಲ್ಲಿ ಲಸಿಕೆ ಪ್ರಯೋಗಕ್ಕೆ ಒಳ­ಗಾದ ಸ್ವಯಂ ಸೇವಕ.

9- 12 ತಿಂಗಳು ಮಾತ್ರ ನಮ್ಮನ್ನು ಕಾಪಾಡುತ್ತೆ: ಏಮ್ಸ್‌ ಮುಖ್ಯಸ್ಥ
2023ರವರೆಗೂ ಕೊರೊನಾ ಸೋಂಕು ತೊಲಗುವುದೇ ಅನುಮಾನ

ಹೊಸದಿಲ್ಲಿ: ಇನ್ನೇನು ಕೆಲವೇ ತಿಂಗಳು, ಕೊರೊ­ನಾಕ್ಕೆ ಲಸಿಕೆ ಬರುತ್ತೆ. ಒಮ್ಮೆ ಲಸಿಕೆ ತೆಗೆದುಕೊಂಡರೆ ಜೀವನಪರ್ಯಂತ ಅದು ನಮ್ಮನ್ನು ಕೊರೊನಾ­ದಿಂದ ಕಾಪಾಡುತ್ತದೆಯಾ? ಖಂಡಿತಾ ಇಲ್ಲ!

ಲಸಿಕೆ ಕುರಿತಾದ ಈ ಪ್ರಶ್ನೆಗೆ ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಸ್ಪಷ್ಟ ಉತ್ತರ ಮುಂದಿಟ್ಟಿ­ದ್ದಾರೆ. “ಲಸಿಕೆಗಳು ನಮ್ಮನ್ನು ಕೇವಲ 9 ತಿಂಗಳಿಂದ 1 ವರ್ಷಗಳವರೆಗೆ ಮಾತ್ರವೇ ಕೊರೊನಾದಿಂದ ರಕ್ಷಿಸಲು ಸಮರ್ಥವಾಗಿರುತ್ತವೆ’ ಎನ್ನುತ್ತಾರೆ, ಗುಲೇರಿಯಾ.

ಕೊರೊನಾ ಕಣ್ಮರೆಯಾಗದು: “ಕೊರೊನಾ ಜಗತ್ತಿನಿಂದ ಕಣ್ಮರೆ ಆಗುವುದಿಲ್ಲ. ಕೆಲ ವರ್ಷಗಳವರೆಗೂ ಇದನ್ನು ನಾವು ಸಂಪೂರ್ಣ ನಿರ್ಮೂಲನೆ ಮಾಡುವುದು ಅಸಾಧ್ಯ. ಇದೊಂದು ಸೌಮ್ಯ ರೋಗವಾಗಿ ನಮ್ಮೊಂದಿಗೆ ಇರುವ ಸಾಧ್ಯತೆಯೇ ಅಧಿಕ’ ಎಂದಿದ್ದಾರೆ. “2023ರ ವೇಳೆಗೆ ಕೊರೊನಾ ಸಾಂಕ್ರಾಮಿಕ ತಗ್ಗಬಹುದು. ಆದರೂ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ಒ) 2023ಕ್ಕೂ ಮೊದಲೇ ಕೊರೊನಾ ಅಂತ್ಯ ಘೋಷಿ­ಸಲು ಶ್ರಮಪಡುತ್ತಿದೆ’ ಎಂದು ಹೇಳಿದ್ದಾರೆ.

ಭಾರತಕ್ಕೆ ಆಕ್ಸ್‌ಫ‌ರ್ಡ್‌ ಲಸಿಕೆಯೇ ಸೂಕ್ತ?
“ಶೇ.60- 90ರಷ್ಟು ಪರಿಣಾಮಕಾರತ್ವ ಹೊಂದಿರುವ ಆಕ್ಸ್‌ಫ‌ರ್ಡ್‌ ವಿವಿ- ಅಸ್ಟ್ರಾಜೆನೆಕಾ ಲಸಿಕೆ ಭಾರತಕ್ಕೆ ಎಲ್ಲ ರೀತಿಯಿಂದಲೂ ಸೂಕ್ತ. ಆದರೆ, ಇದನ್ನು ಈಗಲೇ ಅಂದಾಜಿಸುವುದು ಕಷ್ಟ’ ಎಂದು ತಜ್ಞರು “ಪಿಟಿಐ’ ಜತೆಗೆ ಅನಿಸಿಕೆ ಹಂಚಿಕೊಂಡಿದ್ದಾರೆ. “ಮಾಡೆರ್ನಾ, ಫೈಜರ್‌ ಅಥವಾ ಸ್ಪುಟ್ನಿಕ್‌-5ಕ್ಕೆ ಹೋಲಿಸಿದಲ್ಲಿ ಆಕ್ಸ್‌ಫ‌ರ್ಡ್‌ ವಿವಿ ಸಿದ್ಧಪಡಿಸುತ್ತಿರುವ ಲಸಿಕೆ ಭಾರತಕ್ಕೆ ಹೆಚ್ಚು ಕಾರ್ಯಸಾಧ್ಯವಾಗುವ ಆಯ್ಕೆ’ ಎಂದಿದ್ದಾರೆ. “ಬೇರೆಲ್ಲ ಲಸಿಕೆಗಳಿಗೆ ಹೋಲಿಸಿದಲ್ಲಿ ಆಕ್ಸ್‌ಫ‌ರ್ಡ್‌ ಲಸಿಕೆಗೆ ಕಡಿಮೆ ದರವಿದೆ. ಅಲ್ಲದೆ ಫೈಜರ್‌- ಬಯೋಎನ್‌ಟೆಕ್‌ ಸಂಗ್ರಹಕ್ಕೆ -70 ಡಿಗ್ರಿ, ಸ್ಪುಟ್ನಿಕ್‌ 5ಕ್ಕೆ -20 ಡಿಗ್ರಿ, ಮಾಡೆರ್ನಾಗೆ -22 ಡಿಗ್ರಿ ಕನಿಷ್ಠ ಉಷ್ಣಾಂಶ ಕಾಪಾಡಿಕೊಳ್ಳಬೇಕು. ಆದರೆ, ಆಕ್ಸ್‌ಫ‌ರ್ಡ್‌ ಲಸಿಕೆಯನ್ನು ಸಾಮಾನ್ಯ ಫ್ರಿಡ್ಜ್ ನಲ್ಲೂ ಸಂರಕ್ಷಿಸಿಟ್ಟುಕೊಳ್ಳಬಹುದು. ಅತ್ಯಂತ ಸುಲಭವಾಗಿ ಸರಬರಾಜು ಮಾಡಬಹುದು’ ಎಂದು ಆಕ್ಸ್‌ಫ‌ರ್ಡ್‌ ವ್ಯಾಕ್ಸಿನ್‌ ಗ್ರೂಪ್‌ನ ನಿರ್ದೇಶಕ ಆ್ಯಂಡ್ರೂ ಪೊಲಾರ್ಡ್‌ ತಿಳಿಸಿದ್ದಾರೆ.

ಕೈದಿಗಳಿಗೆ ಕೊರೊನಾ ತಂದ ಪರೋಲ್‌ ಗಿಫ್ಟ್
ಕೊರೊನಾದಿಂದ ಯಾರಿಗೆ ನಷ್ಟವಾಗಿದೆಯೋ ಗೊತ್ತಿಲ್ಲ, ಆದರೆ ಕೈದಿಗಳಿಗೆ ಮಾತ್ರ ಈ ಬಿಕ್ಕಟ್ಟು ಭರ್ಜರಿ ಗಿಫ್ಟ್ ನೀಡಿದೆ. ಅದರಲ್ಲೂ ಮಧ್ಯಪ್ರದೇಶದಲ್ಲಿ 4 ಸಾವಿರ ಕೈದಿಗಳಿಗೆ ಪರೋಲ್‌ ಅವಧಿಯನ್ನು ಮತ್ತೆ 60 ದಿನಗಳವರೆಗೆ ವಿಸ್ತರಿಸಲಾಗಿದೆ! 2ನೇ ಅಲೆ ಭೀತಿಯಲ್ಲಿರುವ ಮಧ್ಯಪ್ರದೇಶದಲ್ಲಿ ಈಗಾಗಲೇ 4 ಸಾವಿರ ಕೈದಿಗಳನ್ನು ಪರೋಲ್‌ ರಜೆ ಮೇಲೆ ಮನೆಗಳಿಗೆ ಕಳುಹಿಸಲಾಗಿತ್ತು. ಕಳೆದೊಂದು ವಾರದಿಂದ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ 2 ತಿಂಗಳು ಪರೋಲ್‌ ನೀಡಲಾಗಿದೆ.

ಸ್ಪುಟ್ನಿಕ್‌- 5 ಶೇ.95 ಪರಿಣಾಮಕಾರಿ!
“ರಷ್ಯಾ ಸಿದ್ಧಪಡಿಸಿರುವ ಸ್ಪುಟ್ನಿಕ್‌-5 ಲಸಿಕೆ ಶೇ.95 ಪರಿಣಾಮಕಾರಿ’ ಎಂದು ರಷ್ಯನ್‌ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌ ಫ‌ಂಡ್‌ (ಆರ್‌ಡಿಐಎಫ್) ಸಿಇಒ ಕಿರಿಲ್ ಡಿಮಿಟ್ರೀವ್‌ ತಿಳಿಸಿದ್ದಾರೆ. “ಇದು ಕೇವಲ ರಷ್ಯಾಕ್ಕೆ ಮಾತ್ರ ಸಿಹಿಸುದ್ದಿ ಅಲ್ಲ, ವಿಶ್ವಕ್ಕೇ ಮಹಾನ್‌ ಸುದ್ದಿ. ಏಕೆಂದರೆ, ಹೆಚ್ಚು ಪರಿಣಾಮಕಾರಿ­ಯಾಗಿರುವ ಲಸಿಕೆಗಳಲ್ಲಿ ಒಂದಾಗಿರುವ ಸ್ಪುಟ್ನಿಕ್‌-5 ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ’ ಎಂಬ ಭರವಸೆ ನೀಡಿ ದ್ದಾರೆ. ರಷ್ಯಾದ ಗ್ಯಾಮೆಲಿಯಾ ಸಂಶೋ­ಧನಾ ಕೇಂದ್ರ, ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ನ ಸಹಭಾಗಿತ್ವ­ದೊಂದಿಗೆ ಭಾರತದಲ್ಲಿ ಲಸಿಕೆ
ಪ್ರಯೋಗ ನಡೆಸುತ್ತಿದೆ.

ಸೈಡ್‌ ಎಫೆಕ್ಟ್ ತಡೆಗೆ ಎಐಎಫ್ಐ ತಂಡ ರಚಿಸಿ
ಲಸಿಕೆ ಬಂದಾದ ಮೇಲೆ “ಸೈಡ್‌ ಎಫೆಕ್ಟ್’ ಹಾವಳಿ ಇನ್ನೊಂದು ತಲೆನೋವು. ಇದನ್ನು ನಿಯಂತ್ರಿಸಲು ಎಲ್ಲ ರಾಜ್ಯ ಸರಕಾರಗಳು, ಜಿಲ್ಲಾಡಳಿತಗಳು “ರೋಗ ನಿರೋಧಕ ನಂತರದ ಪ್ರತಿಕೂಲ ಘಟನೆಗಳ ಕಣ್ಗಾವಲು ವ್ಯವಸ್ಥೆ’ (ಎಇಎಫ್ಐ) ಜಾರಿಗೆ ತರುವಂತೆ ಆರೋಗ್ಯ ಸಚಿವಾ ಲಯ ಕಾರ್ಯದರ್ಶಿ ಡಾ. ಮನೋಹರ ಅಗ್ನಾನಿ, ಸರಕಾರಗಳಿಗೆ ಪತ್ರ ಬರೆದಿದ್ದಾರೆ. “ಲಸಿಕೆ ತಲುಪುವ ಮೊದಲೇ ಎಇಎಫ್ಐ ತಂಡ ರಚಿಸುವ ಅವಶ್ಯಕತೆ ಬಹಳ ಇದೆ. ನರರೋಗತಜ್ಞರು, ಹೃದ್ರೋಗ ತಜ್ಞರು, ಶ್ವಾಸಕೋಶ ತಜ್ಞರನ್ನೊಳಗೊಂಡ ತಂಡವಿದ್ದರೆ ಲಸಿಕೆ ಅಡ್ಡಪರಿಣಾಮಗಳನ್ನು ನಿಯಂತ್ರಿಸಬಹುದು’ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.