ಹೊಲಕ್ಕೆ ಬಂದ ಭಾರೀ ಗಾತ್ರದ ಮೊಸಳೆಯ ರಕ್ಷಣೆ; ಮತ್ತೆ ನದಿಗೆ
Team Udayavani, Jun 18, 2019, 4:33 PM IST
ವಡೋದರ : ಗುಜರಾತ್ನ ವಡೋದರ ಜಿಲ್ಲೆಯಲ್ಲಿ ಹೊಲವೊಂದಕ್ಕೆ ಮಧ್ಯರಾತ್ರಿಯ ವೇಳೆಗೆ ನಾಲ್ಕೂವರೆ ಅಡಿ ಉದ್ದದ ಭಾರೀ ಮೊಸಳೆಯೊಂದು ಬಂದು ಅತಂಕ ಸೃಷ್ಟಿಸಿತು.
ಇಟೋಲ ಗ್ರಾಮದ ಕೃಷಿಕ ಸಂಜಯ್ ಪಟೇಲ್ ಅವರ ನಾಯಿ ಹೊಲದಲ್ಲಿ ಬೊಬ್ಬಿಡುತ್ತಿದ್ದುದು ಕೇಳಿ ಬಂದಾಗ ಅವರು ಒಡನೆಯೇ ಹೊಲದ ಕಡೆಗೆ ಧಾವಿಸಿದರು. ಅಲ್ಲಿ ಬಾಯಿ ತೆರೆದ ಭಾರೀ ಗಾತ್ರದ ಮೊಸಳೆ ಇರುವುದನ್ನು ಕಂಡು ದಿಗಿಲಾದರು.
ಒಡನೆಯೇ ಪಟೇಲ್ ವನ್ಯಮೃಗ ಸಂರಕ್ಷಣ ದಳಕ್ಕೆ ಫೋನ್ ಮಾಡಿದರು. ಧಾವಿಸಿ ಬಂದ ತಂಡ ಅರ್ಧ ತಾಸೊಳಗೆ ಮೊಸಳೆಯನ್ನು ಹಿಡಿದು ಅರಣ್ಯ ರಕ್ಷಕರಿಗೆ ಒಪ್ಪಿಸಿದರು.
ಅರಣ್ಯ ರಕ್ಷಕರು ಮೊಸಳೆಯನ್ನು ಬಳಿಕ ವಿಶ್ವಾಮಿತ್ರಿ ನದಿಗೆ ಬಿಟ್ಟರು. ಪಟೇಲ್ ಅವರ ಹೊಲಕ್ಕೆ ಸಮೀಪವೇ ಹರಿಯುತ್ತಿರುವ ಧಧರ್ ನದಿಯಲ್ಲಿ ಹಲವಾರು ಮೊಸಳೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು