ಅಮರನಾಥ ಯಾತ್ರೆ ವೇಳೆ ಭದ್ರತೆಯೊಂದಿಗೆ ಸಿಆರ್ಪಿಎಫ್ ಪರಿಸರ ಉಳಿಸಿ ಆಂದೋಲನ
Team Udayavani, Jun 18, 2019, 3:20 PM IST
ಜಮ್ಮು : ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯ ಯಾತ್ರೆಯ ವೇಳೆ ಯಾತ್ರಿಕರಿಗೆ ಭದ್ರತೆ ಒದಗಿಸುವ ತನ್ನ ಪ್ರಾಥಮಿಕ ಕರ್ತವ್ಯದೊಂದಿಗೆ ಸಿಆರ್ಪಿಎಫ್ ಈ ಬಾರಿ ಪರಿಸರ ಉಳಿಸಿ ಆಂದೋಲನವನ್ನು ಕೂಡ ಕೈಗೊಳ್ಳಲಿದೆ.
ಮುಂದಿನ ತಿಂಗಳ ಜು.1 ರಂದು ಆರಂಭವಾಗುವ ಪವಿತ್ರ ಅಮರನಾಥ ಪುಣ್ಯ ಕ್ಷೇತ್ರ ಯಾತ್ರೆಯು ಆಗಸ್ಟ್ 15ರಂದು ರಕ್ಷಾ ಬಂಧನ ದಿನದಂದು ಕೊನೆಗೊಳ್ಳಲಿದೆ.
46 ದಿನಗಳ ಈ ಯಾತ್ರೆ ಎರಡು ಮಾರ್ಗಗಳ ಮೂಲಕ ನಡೆಯುತ್ತದೆ. ಮೊದಲನೇಯದ್ದು ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ ಪಹಲ್ಗಾಂವ್ ಮೂಲಕ ಮತ್ತು ಇನ್ನೊಂದು ಕಡಿಮೆ ದೂರದ ಗುಂದೇರ್ಬಾಲ್ ಜಿಲ್ಲೆಯ ಬಾಲ್ತಾಲ್ ಮಾರ್ಗದ ಮೂಲಕ.
ವರ್ಷಂಪ್ರತಿಯ ಅಮರನಾಥ ಯಾತ್ರೆಗೆ ಸಿಆರ್ಪಿಎಫ್ ಮಾತ್ರವಲ್ಲದೆ ಸೇನೆ, ಸ್ಥಳೀಯ ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳು ಕೂಡ ಯಾತ್ರಿಕರಿಗೆ ಭದ್ರತಾ ಸೇವೆ ನೀಡುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ