ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ
Team Udayavani, Nov 29, 2021, 5:14 AM IST
ಹೊಸದಿಲ್ಲಿ: ಮಧುಮೇಹ ಸಮಸ್ಯೆಯು ದುಬಾರಿ ಕಾಯಿಲೆಯಾಗಿ ಪರಿಣಮಿಸಿದೆ. ಹಾಗಾಗಿ, ಕೇಂದ್ರ ಸರಕಾರಗಳು ಮಧುಮೇಹ ಔಷಧಗಳಿಗೆ ಸಬ್ಸಿಡಿ ನೀಡುವಂಥ ಸಹಾಯಗಳನ್ನು ಮಾಡಬಹುದು ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.
ದಿಲ್ಲಿಯ ಕಾರ್ಯಕ್ರಮವೊಂದ ರಲ್ಲಿ ಮಾತನಾಡಿದ ಅವರು, “”ಮಧುಮೇಹ ಜೀವನಪರ್ಯಂತ ಇರುವ ಕಾಯಿಲೆ. ಇದು ದುಬಾರಿಯೂ ಹೌದು. ಬಡವರ ಜೇಬಿಗೆ ಕತ್ತರಿ ಹಾಕುವಂಥದ್ದು. ಹಾಗಾಗಿ, ಮಧುಮೇಹ ಔಷಧಗಳ ಬೆಲೆ ಇಳಿಕೆ ಕುರಿತಾಗಿ ಸರಕಾರ ಗಮನ ಹರಿಸಬೇಕು” ಎಂದಿದ್ದಾರೆ.
ಇದನ್ನೂ ಓದಿ:ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ
“ಭಾರತದಲ್ಲಿರುವ ಮಧುಮೇಹಿಗಳ ಮೇಲೆಯೇ ಪ್ರತ್ಯೇಕವಾಗಿ ಅಧ್ಯಯನಗಳಾಗಬೇಕು” ಎಂದು ಆಶಿಸಿರುವ ಅವರು, “ಇಲ್ಲಿನ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ರೂಪುಗೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಆಯ್ದ ಆರೋಗ್ಯ ಸಿಬಂದಿಗೆ ಸರಕಾರ, ಪ್ರತ್ಯೇಕ ತರಬೇತಿ ಹಾಗೂ ವೃತ್ತಿಪರತೆಯನ್ನು ಕಟ್ಟಿಕೊಡಬೇಕು” ಎಂದು ಆಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Cyber attack: ಭದ್ರತೆ ಹೆಚ್ಚಿಸಲು ಬ್ಯಾಂಕ್ಗಳಿಗೆ ಆರ್ಬಿಐ ಸೂಚನೆ
ED; ದಿಲ್ಲಿ ಲಿಕ್ಕರ್ ಕೇಸ್ ಡೀಲ್ಗೆ ಕೆಸಿಆರ್ ಪುತ್ರಿ ಕವಿತಾ ಸಂಚು
Himachal Pradesh; 6 ಕೈ ಶಾಸಕರ ಅನರ್ಹತೆ ಆದೇಶಕ್ಕೆ ತಡೆ ಇಲ್ಲ: ಸುಪ್ರೀಂ
Gujarat University;ದಾಳಿಯ ಬಳಿಕ ವಿದೇಶಿ ವಿದ್ಯಾರ್ಥಿಗಳ ಸ್ಥಳಾಂತರ: ಭದ್ರತೆ ಬಿಗಿ