ನಿವಾರ್ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ’
ಸಮುದ್ರ ಪಾಲಾಗಿರುವ ದೇಗುಲ ಚಿನ್ನ ಪಡೆಯಲು ಜನವೋ ಜನ
Team Udayavani, Nov 28, 2020, 9:25 PM IST
ಹೈದರಾಬಾದ್: ಆಂಧ್ರಪ್ರದೇಶದ ಕಾಕಿನಾಡ ಕರಾವಳಿ ಪ್ರದೇಶದಲ್ಲಿ “ಚಿನ್ನದ ಶೋಧನೆ’ ಶುರುವಾಗಿದೆ. ಅಂದ ಹಾಗೆ ಇದು ಕೇಂದ್ರ ಸರ್ಕಾರದ ವತಿಯಿಂದ ಕೈಗೊಳ್ಳಲಾಗಿರುವ ಶೋಧನೆ ಅಲ್ಲ. ವಿಚಾರವೇನೆಂದರೆ ನಿವಾರ್ ಸೈಕ್ಲೋನ್ನಿಂದಾಗಿ ಧಾರಾಕಾರ ಮಳೆಯಿಂದಾಗಿ ಉಪ್ಪಡ ಮತ್ತು ಸುರದಪೇಟ ಗ್ರಾಮದ ವ್ಯಾಪ್ತಿಯಲ್ಲಿನ ಕೆಲವು ದೇಗುಲಗಳು ಸಮುದ್ರ ಪಾಲಾಗಿದ್ದವು. ಹೀಗಾಗಿ, ದೇವರಿಗೆ ಹಾಕಲಾಗಿರುವ ಚಿನ್ನವೇನಾದರೂ ಸಿಗುತ್ತದೆಯೋ ಎಂದು ನೂರಾರು ಮಂದಿ ಮರಳನ್ನು ಬಗೆದು ನೋಡುತ್ತಿದ್ದಾರೆ. ಎರಡು ದಿನಗಳಿಂದ ಈ ಶೋಧನೆ ನಡೆಯುತ್ತಿದೆ. ಅದೂ ಬಿರು ಚಳಿಯನ್ನು ಲೆಕ್ಕಿಸದೆ.
“ನಾಲ್ಕರಿಂದ ಐದು ಮಂದಿ ಮೀನುಗಾರರಿಗೆ ಶುಕ್ರವಾರ ಸಮುದ್ರ ಕಿನಾರೆಯಲ್ಲಿ ಚಿನ್ನದ ತುಂಡುಗಳು ಸಿಕ್ಕಿದವು. ಅದನ್ನು ಮಾರಿ ಅವರು ಹಣ ಪಡೆದುಕೊಂಡಿದ್ದಾರೆ. ಈ ಸುದ್ದಿ ಎಲ್ಲರಿಗೂ ಗೊತ್ತಾಗಿ ನೂರಾರು ಮಂದಿ ಬಂದು ಚಿನ್ನಕ್ಕಾಗಿ ಶೋಧಿಸುತ್ತಿದ್ದಾರೆ’ ಎಂದು ಯು ಕೋಥಪಲ್ಲಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ. ಲೋವ ರಾಜು “ಹಿಂದುಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.
ಮೀನು ಹಿಡಿಯುವ ಬಲೆ, ಬಟ್ಟೆ ಸೇರಿದಂತೆ ಹಲವು ಸಾಧನಗಳ ಮೂಲಕ ಜನರು ಚಿನ್ನಕ್ಕಾಗಿ ಮುಗಿ ಬಿದ್ದಿದ್ದಾರೆ. ಕೆಲವರಿಗೆ ಮಾತ್ರ ಚಿನ್ನದ ತುಂಡುಗಳು ಸಿಕ್ಕಿದ್ದರೂ, ಹುಡುಕಾಡುವವರು ಇನ್ನೂ ಆಶಾಭಾವನೆ ಹೊಂದಿದ್ದಾರೆ. ಇದರ ಜತೆಗೆ ದೇಗುಲಗಳಿಗೆ ಬಂದಿದ್ದ ಭಕ್ತರು ಸಮುದ್ರ ಸ್ನಾನ ಮಾಡುವಾಗ ಅವರು ಧರಿಸಿದ್ದ ಆಭರಣಗಳೂ ಕಳೆದು ಹೋಗಿರುವುದು ಕೆಲವರಿಗೆ ಸಿಕ್ಕಿರುವ ಸಾಧ್ಯತೆಗಳೂ ಇವೆ ಎನ್ನುತ್ತಾರೆ ಆ ಪೊಲೀಸ್ ಅಧಿಕಾರಿ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಸ್ವಾತಂತ್ರ್ಯ ಸೇನಾನಿ “ಅಹ್ಮದುಲ್ಲಾ ಶಾ’ ಹೆಸರು
ರೈತರು ಕೃಷಿ ಕಾನೂನುಗಳನ್ನು ಮುರಿಯುತ್ತಾರೆ : ಶರದ್ ಪವಾರ್
ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣಕ್ರಮ ಕೈಗೊಳ್ಳಲು ರಾಜ್ಯಕ್ಕೆ ಕೇಂದ್ರ ಸೂಚನೆ
ಉತ್ತರ ಭಾರತದಲ್ಲಿ ಮುಂದುವರಿದ ಹಿಮಪಾತ; ಕೆಲವೆಡೆ ಆರೆಂಜ್ ಅಲರ್ಟ್
ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ “AAP” ಅಖಾಡಕ್ಕೆ; 160 ಅಭ್ಯರ್ಥಿ ಹೆಸರು ಘೋಷಣೆ