ತೌಕ್ತೇ ಚಂಡಮಾರುತ ಅಬ್ಬರ: ನೌಕಾಪಡೆಯಿಂದ ಬಾರ್ಜ್ ನಲ್ಲಿ ಸಿಲುಕಿದ್ದ 132 ಮಂದಿ ರಕ್ಷಣೆ
ಸವಾಲಿನ ನಡುವೆಯೂ ಕಾರ್ಯಾಚರಣೆ ನಡೆಸುವುವ ಮೂಲಕ ಬಾರ್ಜ್ ಪಿ305ರಲ್ಲಿದ್ದ ಒಟ್ಟು 132 ಮಂದಿಯನ್ನು ರಕ್ಷಿಸಲಾಗಿದೆ
Team Udayavani, May 18, 2021, 9:16 AM IST
ಮುಂಬಯಿ:ತೌಕ್ತೇ ಚಂಡಮಾರುತ ಮುಂಬಯಿ ಸಮೀಪದ ಅರಬ್ಬಿ ಸಮುದ್ರವನ್ನು ಹಾದು ಹೋಗುವ ಒಂದು ಗಂಟೆ ಮೊದಲು ಎರಡು ಬಾರ್ಜ್ ನಲ್ಲಿ ಸಿಲುಕಿದ್ದ 146 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿರುವ ಘಟನೆ ನಡೆದಿದೆ. ಗಂಟೆಗೆ 185 ಕಿಲೋ ಮೀಟರ್ ವೇಗದಲ್ಲಿ ತೌಕ್ತೇ ಚಂಡಮಾರುತ ತೀವ್ರವಾಗಿ ಗುಜರಾತ್ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಿರುವುದಾಗಿ ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಗಂಗಾವತಿ: ಕುರಿಹಟ್ಟಿಯ ಮೇಲೆ ಮೂರು ಚಿರತೆಗಳ ದಾಳಿ; 32 ಕುರಿಗಳ ಸಾವು
ಮುಂಬಯಿ ಕರಾವಳಿಯಲ್ಲಿ ಎರಡು ಬಾರ್ಜ್ ಗಳಲ್ಲಿ ಸುಮಾರು 410 ಮಂದಿ ಇದ್ದು, ಅಪಾಯದಲ್ಲಿ ಸಿಲುಕಿರುವ ಬಗ್ಗೆ ಸೋಮವಾರ ನೌಕಾಪಡೆಗೆ ಸಂದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ನೌಕಾಪಡೆ ಕಾರ್ಯಾಚರಣೆ ನಡೆಸಲು ಐಎನ್ ಎಸ್ ಕೊಚ್ಚಿ, ಐಎನ್ ಎಸ್ ಕೋಲ್ಕತ್ತಾ ಮತ್ತು ಐಎನ್ ಎಸ್ ತಲ್ವಾರ್ ಸೇರಿದಂತೆ ಮೂರು ಯುದ್ಧನೌಕೆಗಳನ್ನು ನಿಯೋಜಿಸಿರುವುದಾಗಿ ವರದಿ ವಿವರಿಸಿದೆ.
ಸಮುದ್ರದ ರಕ್ಕಸ ಅಲೆಗಳ ಸವಾಲಿನ ನಡುವೆಯೂ ಕಾರ್ಯಾಚರಣೆ ನಡೆಸುವುವ ಮೂಲಕ ಬಾರ್ಜ್ ಪಿ305ರಲ್ಲಿದ್ದ ಒಟ್ಟು 132 ಮಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ವಕ್ತಾರ ಮಂಗಳವಾರ ತಿಳಿಸಿದ್ದಾರೆ.
#CycloneTauktae
In response to another SOS received from Barge ‘GAL Constructor’ with 137 people onboard about 8NM from #Mumbai, INS Kolkata has been sailed with despatch to render assistance. @indiannavy @SpokespersonMoD @DDNewslive @ANI pic.twitter.com/aWI9qR73V9— PRO Defence Mumbai (@DefPROMumbai) May 17, 2021
ಎಂಜಿನ್ ತೊಂದರೆಯಿಂದಾಗಿ ಮುಂಬೈ ಕರಾವಳಿ ಪ್ರದೇಶದಿಂದ ಸುಮಾರು ಎಂಟು ನಾಟಿಕಲ್ ಮೈಲು ದೂರದ ಕೊಲಾಬಾ ಪಾಯಿಂಟ್ ನಲ್ಲಿ ಮತ್ತೊಂದು ಬಾರ್ಜ್ ಸಿಲುಕಿದ್ದು, ಇದರಲ್ಲಿ 137 ಮಂದಿ ಇದ್ದು, ಇವರನ್ನು ರಕ್ಷಿಸಲು ಹೆಲಿಕಾಪ್ಟರ್ ಕಾರ್ಯಾಚರಣೆ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!