ದಲಿತರ ವಿವಾಹ: ಆದಾಯ ಮಿತಿ ರದ್ದು
Team Udayavani, Dec 7, 2017, 6:50 AM IST
ಹೊಸದಿಲ್ಲಿ: ದಲಿತ ಸಮುದಾಯದ ಯುವಕ ಅಥವಾ ಯುವತಿಯರ ಜತೆಗೆ ವಿವಾಹವಾಗುವವರಿಗೆ ಪ್ರೋತ್ಸಾಹ ಧನ ನೀಡಲು ವಿಧಿಸಲಾಗಿದ್ದ ವಾರ್ಷಿಕ ಆದಾಯ ಮಿತಿ ತೆಗೆದು ಹಾಕಲಾಗಿದೆ. ಅಕ್ಟೋಬರ್ನಲ್ಲಿ ಈ ಬಗ್ಗೆ ಪರಿಷ್ಕೃತ ಆದೇಶ ಹೊರಡಿಸಲಾಗಿತ್ತು. ಅದರಲ್ಲಿ ಆದಾಯ ಮಿತಿ ವಿವರಣೆ ಪ್ರಸ್ತಾಪಿಸಿರಲಿಲ್ಲ. ಈ ರೀತಿ ವಿವಾಹವಾಗುವವರಿಗೆ 2.5 ಲಕ್ಷ ರೂ. ನೀಡಲಾಗುತ್ತದೆ.
2013ರಲ್ಲಿ ಆರಂಭಿಸಲಾಗಿದ್ದ “ಡಾ.ಅಂಬೇಡ್ಕರ್ ಸಾಮಾಜಿಕ ಏಕೀಕರಣಕ್ಕಾಗಿ ಅಂತರ್ಜಾತೀಯ ವಿವಾಹ ಯೋಜನೆ’ ವ್ಯಾಪ್ತಿಯಲ್ಲಿ ಈ ಪ್ರಸ್ತಾಪ ಬರುತ್ತದೆ. ಅದರ ಅನ್ವಯ ಪ್ರತಿ ವರ್ಷ 500 ಅಂತರ್ ಜಾತಿ ವಿವಾಹ ನಡೆಸಲು ಗುರಿ ಹಾಕಿಕೊಳ್ಳ ಲಾಗಿತ್ತು. 3 ವರ್ಷಗಳಲ್ಲಿ ಕೇವಲ 116 ಜೋಡಿಗಳಿಗೆ ಮಾತ್ರ ಇದರ ಅನ್ವಯ ನೆರವು ಸಿಕ್ಕಿದೆ. ಹಾಲಿ ವರ್ಷ 499 ಪ್ರಸ್ತಾಪಗಳು ಸಲ್ಲಿಕೆಯಾಗಿವೆ.
ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಎರಡು ಕಂತುಗಳಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. ಹೊಸ ನಿಯಮ ಪ್ರಕಾರ, ನವಜೋಡಿಗೆ 1.5 ಲಕ್ಷ ರೂ. ಸಿಗುತ್ತದೆ. ಅದಕ್ಕಾಗಿ ಸಾಮಾಜಿಕ ನ್ಯಾಯ ಖಾತೆಯ ಡಾ.ಅಂಬೇಡ್ಕರ್ ಪ್ರತಿಷ್ಠಾನ ಪರಿಶೀಲಿಸಿ ಅನುಮೋದನೆ ನೀಡಬೇಕು. 1 ಲಕ್ಷ ರೂ.ಮೊತ್ತವನ್ನು ದಂಪತಿ ಹೆಸರಲ್ಲಿರುವ ಜಂಟಿ ಖಾತೆಯಲ್ಲಿ ಠೇವಣಿ ಇರಿಸಲಾಗುತ್ತದೆ. ಮೂರು ವರ್ಷಗಳ ಬಳಿಕ ಅದನ್ನು ವಿಥ್ಡ್ರಾ ಮಾಡಲು ಅವಕಾಶ ಉಂಟು. ಅದಕ್ಕೆ ಕೂಡ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ