ದಾವೂದ್ನ ಆಪ್ತ ಫಾರೂಕ್ ಹತ್ಯೆ
Team Udayavani, Jan 16, 2019, 12:30 AM IST
ಮುಂಬಯಿ: ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಡದ ಎರಡನೇ ದಾವೂದ್ ಎಂದೇ ಗುರುತಿಸಲ್ಪಟ್ಟಿದ್ದ ಫಾರೂಕ್ ದೇವಿವಾಲಾ(41)ನನ್ನು ಪಾಕಿಸ್ಥಾನದ ಕರಾಚಿಯಲ್ಲಿ ದಾವೂದ್ನ ಸಹಚರರೇ ಗುಂಡಿಟ್ಟು ಹತ್ಯೆ ಗೈದಿದ್ದಾರೆ. ದಾವೂದ್ ವಿರುದ್ಧವೇ ಸಂಚೊಂದನ್ನು ರೂಪಿಸಿದ್ದ ಹಿನ್ನೆಲೆಯಲ್ಲಿ ತಂಡದ ಮತ್ತೂಬ್ಬ ಪಾತಕಿ ಛೋಟಾ ಶಕೀಲ್ನ ಸೂಚನೆಯ ಮೇರೆಗೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.
ಫಾರೂಕ್ ದೇವಿವಾಲಾ ಮೂಲತಃ ಮುಂಬಯಿಯ ಜೋಗೇಶ್ವರಿ ಪ್ರಾಂತ್ಯದವನು. ಹಲವಾರು ಪ್ರಕರಣಗಳಲ್ಲಿ ಈತ ಭಾರತದ ತನಿಖಾ ಸಂಸ್ಥೆಗಳಿಗೂ ಬೇಕಾಗಿದ್ದ. ಕಳೆದ ವರ್ಷ ದುಬಾೖಯಲ್ಲಿ ಈತನ ಬಂಧನವಾದ ಸುದ್ದಿ ಹೊರ ಬೀಳುತ್ತಲೇ ತಮಗೆ ಹಸ್ತಾಂತರಿಸುವಂತೆ ಭಾರತವು ದುಬಾೖ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಇದಕ್ಕೆ ಅಡ್ಡಗಾಲು ಹಾಕಿದ್ದ ಪಾಕಿಸ್ಥಾನವು ಫಾರೂಕ್ ತನ್ನ ದೇಶದ ಪ್ರಜೆ ಎಂದು ತಗಾದೆ ತೆಗೆದಿತ್ತು. ಆ ಸಂದರ್ಭ ಆತನನ್ನು ವಿಚಾರಣೆಗೊಳ ಪಡಿಸಿದ್ದ ಭಾರತದ ತನಿಖಾಧಿಕಾರಿಗಳ ಮುಂದೆ ದಾವೂದ್ನನ್ನು ಹಿಡಿದು ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ. ಈ ವಿಚಾರ ದಾವೂದ್ ತಂಡಕ್ಕೆ ಗೊತ್ತಾಗಿ ಶಕೀಲ್ ಈ ಬಗ್ಗೆ ಕೇಳಿದ್ದ ಎನ್ನಲಾಗಿದೆ. ಶಕೀಲ್ ಮುಂದೆ ತಪ್ಪನ್ನು ಫಾರೂಕ್ ಒಪ್ಪಿ ಕೊಂಡ ಬಳಿಕ ಈತನನ್ನು ಮುಗಿಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಆದರೆ ಫಾರೂಕ್ ಹತ್ಯೆಯ ಸುದ್ದಿಯನ್ನು ಭಾರತದ ಯಾವುದೇ ತನಿಖಾಧಿಕಾರಿಗಳು ದೃಢಪಡಿಸಿಲ್ಲ. ಉಗ್ರಗಾಮಿ ಕೃತ್ಯ ಸಹಿತ ಭಾರತದಲ್ಲಿ ಈತನ ವಿರುದ್ಧ ಹಲವಾರು ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ