ಆಧ್ಯಾತ್ಮದತ್ತ ಮಗನ ಒಲವು, ಡಿಪ್ರೆಷನ್ ನತ್ತ ಪಾತಕಿ ದಾವೂದ್!
Team Udayavani, Nov 26, 2017, 6:55 AM IST
ಥಾಣೆ: ದೇಶವನ್ನೇ ತನ್ನ ದುಷ್ಕೃತ್ಯಗಳಿಂದ ನಡುಗಿಸಿದ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಈಗ ಕೌಟುಂಬಿಕ ಸಮಸ್ಯೆ ಕಾಡುತ್ತಿದೆ. ತನ್ನ ಏಕೈಕ ಪುತ್ರ ಮೊಯಿನ್ ನವಾಜ್ ಮೌಲ್ವಿಯಾಗಲು ಹೊರಟಿರುವುದು ಮಾನಸಿಕ ಖನ್ನತೆಗೆ ಕಾರಣವಾಗಿದೆಯಂತೆ. ದಾವೂದ್ ಆಪ್ತ ಇಕ್ಬಾಲ್ ಕಸ್ಕರ್ ವಿಚಾರಣೆಯ ವೇಳೆ ಈ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಕೌಟುಂಬಿಕ ಸಮಸ್ಯೆ ನಿವಾರಿಸಲಾಗದ ಅಸಹಾಯಕ ಸ್ಥಿತಿಯನ್ನು ದಾವೂದ್ ತಲು ಪಿದ್ದಾನೆ. ತಂದೆಯ ಕುಕೃತ್ಯದ ಬಗ್ಗೆ ಮಗನಿಗೆ ದ್ವೇಷ ಭಾವವಿದೆ. ಇಡೀ ಜಗತ್ತಿನಲ್ಲೇ ನಮ್ಮ ಕುಟುಂಬ ತಲೆತಗ್ಗಿಸುವಂತಾಗಿದೆ ಎಂದು ಮೊಯಿನ್ ಭಾವಿಸಿದ್ದಾನೆ. ದಾವೂದ್ ಅಪಾರ ಆಸ್ತಿಯ ವಾರಸುದಾರನಾಗಲೂ ಆತ ಒಪ್ಪುತ್ತಿಲ್ಲ ಎನ್ನಲಾಗಿದೆ. ದಾವೂದ್ ಸೋದರ ಅನೀಸ್ ಕಸ್ಕರ್ ಆರೋಗ್ಯ ಕ್ಷೀಣಿ ಸುತ್ತಿದ್ದು, ದಾವೂದ್ ವಹಿವಾಟುಗಳನ್ನು ನೋಡಿಕೊಳ್ಳಲು ಶಕ್ತನಾಗಿಲ್ಲ.
ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ವ್ಯಾಸಂಗ ಮಾಡಿರುವ ಮೊಯಿನ್, ಆರಂಭದಲ್ಲಿ ದಾವೂದ್ ವಹಿ ವಾಟುಗಳನ್ನು ನೋಡಿಕೊಳ್ಳು ತ್ತಿದ್ದ. ಆದರೆ ಕಾಲಕ್ರಮೇಣ ಧಾರ್ಮಿಕ ಚಟುವಟಿಕೆಗಳತ್ತ ಹೆಚ್ಚು ವಾಲಿದ್ದಾನೆ. ಈಗ ತಂದೆ, ಮಗನ ಮಧ್ಯೆ ಮಾತುಕತೆ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ. ಆದರೆ ತಂದೆಯ ಐಶ್ವರ್ಯಯುತ ಜೀವನವನ್ನು ತೊರೆದು ಕರಾಚಿಯಲ್ಲಿನ ಮಸಿದಿ ಯೊಂದರಲ್ಲಿ ಮೌಲ್ವಿಯಾಗಿ, ಮಸೀದಿಯ ಆಡಳಿತ ಮಂಡಳಿ ನೀಡಿದ ಸಣ್ಣ ನಿವಾಸದಲ್ಲಿ ಪತ್ನಿ ಸಾನಿಯಾ ಹಾಗೂ ಮಕ್ಕಳ ಜತೆ ವಾಸವಿದ್ದಾನೆ. ಮಸೀದಿಯಲ್ಲಿ ವಿದ್ಯಾರ್ಥಿಗಳಿಗೆ ಕುರಾನ್ ಬೋಧನೆ ಹಾಗೂ ಇತರ ಧಾರ್ಮಿಕ ಕಾರ್ಯಗಳಲ್ಲೇ ಮೊಯಿನ್ ತೊಡಗಿಸಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್