ಫಡ್ನವೀಸ್ ಭೇಟಿಯಾಗಲಿರುವ ಉದ್ಧವ್ ಠಾಕ್ರೆ
Team Udayavani, Feb 15, 2018, 4:31 PM IST
ಮುಂಬಯಿ: ಭವಿಷ್ಯತ್ತಿನ ಚುನಾವಣೆಗಳನ್ನು ತಾನು ಏಕಾಂಗಿಯಾಗಿ ಹೋರಾಡುವೆ ಎನ್ನುವ ಮೂಲಕ ಬಿಜೆಪಿ ಜತೆಗಿನ ಸಂಬಂಧಗಳನ್ನು ಕಡಿದುಕೊಂಡ ಕೇಲವೇ ದಿನಗಳಲ್ಲಿ ಶಿವಸೇನೆಯ ನೇತಾರ ಉದ್ಧವ್ ಠಾಕ್ರೆ ಅವರಿಂದು ಸಂಜೆ 7 ಗಂಟೆಯ ಸುಮಾರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ.
ವರದಿಗಳ ಪ್ರಕಾರ ಉದ್ಧವ್ ಮತ್ತು ಫಡ್ನವೀಸ್ ಅವರ ಭೇಟಿಯ ವೇಳೆ ಅನ್ಯರು ಇರುವುದಿಲ್ಲ.
ಆದರೆ ಶಿವಸೇನೆಯೆ ಜತೆಗೆ ರತ್ನಾಗಿರಿ ಕರಾವಳಿ ಜಿಲ್ಲೆಯ ನಿಯೋಗವೊಂದು ಇರುತ್ತದೆ ಎಂದು ಕೆಲವು ವರದಿಗಳು ತಿಳಿಸಿವೆ. ರತ್ನಾಗಿರಿ ಜಿಲ್ಲೆಯಲ್ಲಿ ಮೈದಳೆಯಲಿರುವ ತೈಲ ಸಂಸ್ಕರಣ ಘಟಕವನ್ನು ಅಲ್ಲಿನ ಜನರು ವಿರೋಧಿಸುತ್ತಾರೆ.
ಆ ವಿರೋಧಕ್ಕೆ ಶಿವಸೇನೆಯ ಬೆಂಬಲವೂ ಇದೆ. ಈ ವಿಷಯವೇ ಶಿವಸೇನೆ ಮತ್ತು ಆಳುವ ಬಿಜೆಪಿ ನಡುವೆ ಕಗ್ಗಂಟಿನ ವಿಷಯವಾಗಿ ಪರಿಣಮಿಸಿದೆ ಎಂದು ವರದಿಗಳು ಹೇಳಿವೆ.