ಬೆದರಿಕೆ : ತ್ರಿಪುರಾ ಸಿಎಂ ಕೊಂದವರಿಗೆ 5 ಲಕ್ಷ ಇನಾಮು!
Team Udayavani, Aug 18, 2017, 3:15 PM IST
ಅಗರ್ತಲಾ : ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶ್ವ ಕಮ್ಯುನಿಷ್ಟ್ ವಿರೋಧಿ ಸಭೆಗೂ ಮುನ್ನ ಫೇಸ್ಬುಕ್ನ ನಕಲಿ ಖಾತೆ ಯಿಂದ ಬೆದರಿಕೆ ಹಾಕಲಾಗಿದ್ದು, ಯಾರಾದರು ಮಾಣಿಕ್ ಸರ್ಕಾರ್ರನ್ನು ಹತ್ಯೆಗೈದರೆ 5 ಲಕ್ಷ ರೂಪಾಯಿ ಇನಾಮು ನೀಡುವುದಾಗಿ ಬರೆಯಲಾಗಿದೆ.
ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಾಗಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ಸಿಪಿಐ(ಎಂ) ಹಿರಿಯ ಮುಖಂಡರಾಗಿರುವ 68 ಹರೆಯದ ಸರ್ಕಾರ್ ಅವರು 1998 ರಿಂದ ನಿರಂತರ 19 ವರ್ಷಗಳಿಂದ ತ್ರಿಪುರಾ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.