ಪಿಒಕೆ ಕುರಿತು 1971ರಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ರಾಜನಾಥ್ ಸಿಂಗ್
ಆಗ ಇಂದಿರಾ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದರು...
Team Udayavani, Sep 26, 2022, 6:22 PM IST
ಹಮೀರ್ಪುರ : 1971ರಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವಿನ ಯುದ್ಧದ ವೇಳೆ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.
ಇದನ್ನೂ ಓದಿ : ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ : ಮಹಾರಾಷ್ಟ್ರ ಸಿಎಂ ಶಿಂಧೆ
ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯ ನಾದೌನ್ನಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಕ್ಷಣಾ ಸಚಿವರು,”ನಾವು ಇತ್ತೀಚೆಗೆ 1971 ರ ಯುದ್ಧದ ವಿಜಯದ ಸುವರ್ಣ ಮಹೋತ್ಸವವನ್ನು ಗುರುತಿಸಿದ್ದೇವೆ. ಆಸ್ತಿ ಅಥವಾ ಅಧಿಕಾರದ ಬದಲಿಗೆ ಮಾನವೀಯತೆಗಾಗಿ ಹೋರಾಡಿರುವುದಕ್ಕೆ 1971 ರ ಯುದ್ಧವನ್ನು ಇತಿಹಾಸದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.ಒಂದೇ ವಿಷಾದವೆಂದರೆ ಆ ಸಮಯದಲ್ಲಿಯೇ ಪಿಒಕೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿತ್ತು” ಎಂದರು.
1971 ಭಾರತ ಮತ್ತು ಪಾಕಿಸ್ಥಾನದ ನಡುವಿನ ಮಿಲಿಟರಿ ಮುಖಾಮುಖಿಯಾಗಿದ್ದು, ಪೂರ್ವ ಪಾಕಿಸ್ಥಾನ (ಬಾಂಗ್ಲಾದೇಶ) ವಿಮೋಚನಾ ಯುದ್ಧದ ಸಮಯದಲ್ಲಿ 3 ಡಿಸೆಂಬರ್ 1971 ರಿಂದ 16 ಡಿಸೆಂಬರ್ 1971 ರಂದು ಢಾಕಾದಲ್ಲಿ ಪಾಕಿಸ್ಥಾನ ಶರಣಾಗುವವರೆಗೆ ನಡೆದಿತ್ತು. ಆಗ ಇಂದಿರಾ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್