ರೈಲು ಅಪಘಾತದಲ್ಲಿ ಇಳಿಕೆ: ಈ ಯಶಸ್ಸಿಗೆ ಕಾರಣವೇನು?
Team Udayavani, Dec 5, 2019, 7:45 PM IST
ಹೊಸದಿಲ್ಲಿ: ಗಣನೀಯವಾಗಿದ್ದ ರೈಲು ಅಪಘಾತ ಇದೇ ಮೊದಲ ಬಾರಿಗೆ ಈ ವರ್ಷದಲ್ಲಿ ಇಳಿಕೆಯಾಗಿದೆ. ಇದಕ್ಕೆ ಕಾರಣವಾಗಿರುವುದು ರೈಲ್ವೇ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿರುವುದು. ಕಳೆದೊಂದು ವರ್ಷದಲ್ಲಿ ಅಪಘಾತದ ಪ್ರಮಾಣ ಇಳಿಕೆ ಕಂಡಿರುವುದು ಗೋಚರಿಸಿದೆ. ಇದನ್ನು ಕೇಂದ್ರ ರೈಲ್ವೇ ಸಚಿವ ಪೀಯೂಶ್ ಗೋಯೆಲ್ ಅವರು ಲೋಕಸಭೆಗೆ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.
ಅವರ ಪ್ರಕಾರ, 2018-19ರ ಅವಧಿಯಲ್ಲಿ 59 ರೈಲು ಅಪಘಾತಗಳು ವರದಿಯಾಗಿವೆ. ಇವುಗಳಲ್ಲಿ 46 ಹಳಿ ತಪ್ಪಿದ ಪ್ರಕರಣಗಳು ನಡೆದಿವೆ. ಮಾನವ ಸಹಿತ ಲೆವೆಲ್ ಕ್ರಾಸಿಂಗ್ನಲ್ಲಿ 3, ಮಾನವ ರಹಿತ ಲೆವೆಲ್ ಕ್ರಾಸಿಂಗ್ನಲ್ಲಿ 3, 6 ಬೆಂಕಿ ಅವಘಡಗಳು, 1 ಇತರ ಅವಘಡ ಸಂಭವಿಸಿದೆ.
ಅಪಘಾತಗಳು ಗಣನೀಯವಾಗಿ ಇಳಿಕೆಯಾಗಲು ಕಾರಣ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ರೈಲ್ವೇ ಅಳವಡಿಸಿಕೊಂಡಿರುವುದಾಗಿದೆ. ರೈಲು ಸುರಕ್ಷತೆ ಎಚ್ಚರಿಕೆ ವ್ಯವಸ್ಥೆ, ಆಕ್ಸಿಲರಿ ಎಚ್ಚರಿಕೆ ವ್ಯವಸ್ಥೆ, ವಿಜಿಲೆನ್ಸ್ ಕಂಟ್ರೋಲ್ ಯಂತ್ರ, ಜಿಪಿಎಸ್ ಟ್ರ್ಯಾಕರ್ಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ರಾಷ್ಟ್ರೀಯ ರೈಲ್ ಸಂರಕ್ಷ ಕೋಶ್ 2017-18ರ ಅವಧಿಯಲ್ಲಿ ಸ್ಥಾಪಿಸಲಾಗಿದ್ದು, ಈ ಮೂಲಕ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಸುರಕ್ಷತೆಗೆ ಬೇಕಾದ ವ್ಯವಸ್ಥೆಗಳನ್ನು ಸುಧಾರಣೆ ಮಾಡಲು ಉದ್ದೇಶಿಸಲಾಗಿದೆ. ಇದರೊಂದಿಗೆ ಇತರ ಹಲವು ಯೋಜನೆಗಳನ್ನು ರೈಲ್ವೇ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ