ಕಾಶ್ಮೀರದಲ್ಲಿ ತಗ್ಗಿದ ಉಗ್ರಕೃತ್ಯ
Team Udayavani, Jul 23, 2018, 10:40 AM IST
ಜೂ.16ರಿಂದ ಜು.15ರ ವರೆಗಿನ ಪರಿಸ್ಥಿತಿ ಬಗ್ಗೆ ಮಾಹಿತಿ ಬಿಡುಗಡೆ
ಒಂದು ತಿಂಗಳ ಅವಧಿಯಲ್ಲಿ ನಡೆದದ್ದು 47 ಪ್ರಕರಣ
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೂ.19ರಂದು ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಪತನವಾಗಿ ರಾಜ್ಯಪಾಲರ ಆಳ್ವಿಕೆ ಬಂದ ಬಳಿಕ ಉಗ್ರರ ಹಿಂಸಾಕೃತ್ಯಗಳು ಕಡಿಮೆಯಾಗಿವೆ. ಹೀಗೆಂದು ಕೇಂದ್ರ ಗೃಹ ಸಚಿವಾಲಯದ ದಾಖಲೆಗಳು ಪುಷ್ಟೀಕರಿಸುತ್ತಿವೆ. ಜೂ.16ರಿಂದ ಜು.15ರ ವರೆಗಿನ ಮಾಹಿತಿ ಪ್ರಕಾರ ರಮ್ಜಾನ್ ಅವಧಿಯಲ್ಲಿ ಉಗ್ರರ ದಾಳಿ ತಗ್ಗಿದ್ದವು. ಈ ಅವಧಿಯಲ್ಲಿ ಕೇಂದ್ರ ಸರಕಾರ ಕೂಡ ಸೀಮಿತ ಕದನ ವಿರಾಮ ಘೋಷಣೆ ಮಾಡಿತ್ತು.
ಜೂ.20ರಂದು ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿತ್ತು. ಒಂದು ತಿಂಗಳ ಅವಧಿಯಲ್ಲಿ 47 ಉಗ್ರ ದಾಳಿ ಪ್ರಕರಣಗಳು ನಡೆದಿವೆ. ಆದರೆ ಸೀಮಿತ ಕದನ ವಿರಾಮ ಮತ್ತು ರಾಜ್ಯಪಾಲರ ಆಳ್ವಿಕೆಗಿಂತ ಮೊದಲಿನ ಒಂದು ತಿಂಗಳ ಅವಧಿಯಲ್ಲಿ ಗ್ರೆನೇಡ್ ದಾಳಿ, ಮನಬಂದಂತೆ ಉಗ್ರರಿಂದ ಗುಂಡು ಹಾರಾಟ ಸೇರಿದಂತೆ ಒಟ್ಟು 80 ಪ್ರಕರಣಗಳು ವರದಿಯಾಗಿದ್ದವು.
14 ಭಯೋತ್ಪಾದಕರು ಮತ್ತು ಐವರು ಭದ್ರತಾ ಸಿಬಂದಿ ಒಂದು ತಿಂಗಳ ಅವಧಿಯಲ್ಲಿ ಅಸುನೀಗಿದ್ದಾರೆ. ಅದರ ಹಿಂದಿನ ಅವಧಿಯಲ್ಲಿ 24 ಉಗ್ರರು ಮತ್ತು 10 ಭದ್ರತಾ ಸಿಬಂದಿ ಅಸುನೀಗಿದ್ದರು. ರಾಜ್ಯಪಾಲರ ಆಳ್ವಿಕೆ ಅವಧಿಯಲ್ಲಿ 95 ಕಲ್ಲೆಸೆತ, 90 ಕದನವಿರಾಮ ಉಲ್ಲಂಘನೆಯ ಪ್ರಕರಣಗಳು ನಡೆದಿವೆ. ಜತೆಗೆ ಏಳು ಮಂದಿ ನಾಗರಿಕರೂ ಕೊಲ್ಲಲ್ಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ