ದಿಲ್ಲಿ : ಮಹಿಳೆಯನ್ನು ರೇಪ್ ಮಾಡಿ ಕಟ್ಟಡದಿಂದ ಕೆಳದೂಡಿದ ಪ್ರಿಯಕರ
Team Udayavani, Aug 14, 2017, 11:53 AM IST
ಹೊಸದಿಲ್ಲಿ : ಮಹಿಳೆಯರ ಮೇಲಿನ ದೌರ್ಜನ್ಯದ ಇನ್ನೊಂದು ಆಘಾತಕಾರಿ ಪ್ರಕರಣದಲ್ಲಿ 20ರ ಹರೆಯದ ಮಹಿಳೆಯನ್ನು ರೇಪ್ ಮಾಡಿ ಅರೆ ನಗ್ನ ಸ್ಥಿತಿಯಲ್ಲಿ ಆಕೆಯನ್ನು ವ್ಯಕ್ತಿಯೊಬ್ಬ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಕ್ಕೆಸೆದ ಅಮಾನುಷ ಘಟನೆ ವರದಿಯಾಗಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಈ ಘಟನೆಯು ಆ.10 ಮತ್ತು ಆ.11ರ ನಡುವಿನ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಗುರಿಯಾಗಿ ಕಟ್ಟಡನದಿಂದ ಕೆಳಕ್ಕೆಸೆಯಲ್ಪಟ್ಟ ಮಹಿಳೆಯ ಸ್ಥಿತಿ ಚಿಂತಾಜನಕವಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಆಕೆಯ ಹೇಳಿಕೆಯನ್ನು ಇನ್ನಷ್ಟೇ ದಾಖಲಿಸಿಕೊಳ್ಳಬೇಕಾಗಿದೆ.
ನರಗದ ಪಂಚತಾರಾ ಹೊಟೇಲೊಂದರಲ್ಲಿ ಅಡುಗೆ ಸಹಾಯಕಿಯಾಗಿ ದುಡಿಯುತ್ತಿರುವ ಮಹಿಳೆಯು ತನ್ನ 22ರ ಹರೆಯದ ಪ್ರಿಯಕರನೊಂದಿಗೆ ಹೋಗಿದ್ದಳು. ಮನೆಗೆ ಮರಳುವಾಗ ಆಕೆಯನ್ನು ತಾನು ತನ್ನ ಕಾರಿನಲ್ಲಿ ಮನೆಗೆ ಬಿಡುವೆನೆಂದು ಹೇಳಿದ್ದ. ಆತನ ಸ್ನೇಹಿತನೊಬ್ಬನೂ ಆತನೊಂದಿಗೆ ಸೇರಿಕೊಂಡಿದ್ದ.
ಪೊಲೀಸರು ಹೇಳಿರುವ ಪ್ರಕಾರ ಘಟನೆ ಇಂತಿದೆ :
”ಮಹಿಳೆಯ ಬಾಯ್ ಫ್ರೆಂಡ್ ಮತ್ತು ಆತನ ಸ್ನೇಹಿತ ರಾಮ ವಿಹಾರ್ನಿಂದ ಜತೆಯಾಗಿ ಮಹಿಳೆಯೊಂದಿಗೆ ಆಟೋ ರಿಕ್ಷಾದಲ್ಲಿ ಹೋಗಿದ್ದರು. ಅದಾಗಿ ನಾವು ನೋಡುತ್ತಿದ್ದಂತೆಯೇ ಜನರ ಒಂದು ಗುಂಪು ನಮ್ಮತ್ತ ಧಾವಿಸಿ ಬರುವುದನ್ನು ನಾವು ಕಂಡೆವು. ಯಾರೋ ಒಬ್ಟಾತ ಮಹಿಳೆಯನ್ನು ಕಟ್ಟಡದಿಂದ ಕೆಳದೂಡಿ ಸಾಯಿಸಿದ್ದಾನೆ ಎಂದಾತ ಗುಂಪಿನಲ್ಲಿದ್ದ ಒಬ್ಟಾತ ಹೇಳಿದ”
”ನಾವು ಸ್ಥಳಕ್ಕೆ ಹೋಗಿ ನೋಡಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದಳು. ಒಡನೆಯೇ ನಾವು ಆಕೆಯಯನ್ನು ರೋಹಿಣಿ ಪ್ರದೇಶದಿಲ್ಲರುವ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಸೇರಿಸಿದವು. ಆಕೆಯ ಸ್ಥಿತಿ ಗಂಭೀರವಿದೆ ಎಂದು ವೈದ್ಯರು ನಮಗೆ ತಿಳಿಸಿದರು”.
ಮಹಿಳೆಯರ ಮನೆಯವರು ಹೇಳಿರುವ ಪ್ರಕಾರ ಆಕೆಯ ಪ್ರಿಯಕರ ಮತ್ತು ಆತನ ಓರ್ವ ಸ್ನೇಹಿತ ಕೂಡಿಕೊಂಡು ಈ ಕೃತ್ಯ ಎಸಗಿದ್ದಾರೆ.
ಪೊಲೀಸರು 22ರ ಹರೆಯದ ಪ್ರಿಯಕರನನ್ನು ಬಂಧಿಸಿ ಆತನ ವಿರುದ್ಧ ರೇಪ್, ಅಪಹರಣ ಮತ್ತು ಕೊಲೆ ಯತ್ನದ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ