ಕನ್ಹಯ್ಯ ವಿರುದ್ಧ ಕಾನೂನು ಕ್ರಮ: ಅನುಮತಿಗೆ ಫೆ.28 ಡೆಡ್ಲೈನ್
Team Udayavani, Feb 6, 2019, 6:52 AM IST
ಹೊಸದಿಲ್ಲಿ : ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರರ ವಿರುದ್ಧದ 2016 ದೇಶದ್ರೋಹದ ಕೇಸಿನಲ್ಲಿ ಕಾನೂನು ಕ್ರಮ ಜರುಗಿಸುವುದಕ್ಕೆ ಅವಶ್ಯವಿರುವ ಅನುಮತಿಯನ್ನು ಪಡೆಯುವುದಕ್ಕೆ ದಿಲ್ಲಿ ನ್ಯಾಯಾಲಯವು ದಿಲ್ಲಿ ಪೊಲೀಸರಿಗೆ ಫೆ.28ರ ವರೆಗೆ ಅಂತಿಮ ಕಾಲಾವಕಾಶ ನೀಡಿದೆ.
ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಅಗತ್ಯವಿರುವ ಮಂಜೂರಾತಿಯು ಪ್ರಕೃತ ದಿಲ್ಲಿ ಸರಕಾರದ ಕೈಯಲ್ಲಿ ಬಾಕಿ ಉಳಿದಿದ್ದು ಇನ್ನೆರಡು ದಿನಗಳ ಒಳಗಾಗಿ ಅದು ಸಿಗುವ ಸಾಧ್ಯತೆ ಇದೆ ಎಂದು ದಿಲ್ಲಿ ಪೊಲೀಸರು ಇಂದು ಬುಧವಾರ ಕೋರ್ಟಿಗೆ ತಿಳಿಸಿದರು.
‘ಅಧಿಕಾರಿಗಳು ಅನಿರ್ದಿಷ್ಟ ಕಾಲ ಕಡತವನ್ನು ಕುಂಡೆ ಅಡಿಗೆ ಹಾಕಿ ಕುಳಿತಿರುತ್ತಾರೆ; ಆದುದರಿಂದ ನೀವೇ ಮುತುವರ್ಜಿ ವಹಿಸಿ ಮಂಜೂರಾತಿಯನ್ನು ಪಡೆದುಕೊಳ್ಳಿ’ ಎಂದು ನ್ಯಾಯಾಲಯ ಗರಂ ಆಗಿ ದಿಲ್ಲಿ ಪೊಲೀಸರಿಗೆ ಹೇಳಿತು.
ಈ ಮೊದಲು ನ್ಯಾಯಾಲಯ, ದಿಲ್ಲಿ ಸರಕಾರದಿಂದ ಅಗತ್ಯ ಮಂಜೂರಾತಿ ಪಡೆಯದೇ ಚಾರ್ಜ್ ಶೀಟ್ ಸಲ್ಲಿಸಿದ್ದ ದಿಲ್ಲಿ ಪೊಲೀಸರು ತರಾಟೆಗೆ ತೆಗೆದುಕೊಂಡು, ಅಗತ್ಯ ಅನುಮತಿ ಪಡೆದುಕೊಳ್ಳುವುದಕ್ಕೆ ಫೆ.6ರ ವರೆಗೆ ಕಾಲಾವಕಾಶ ನೀಡಿತ್ತು.
ಇಂದಿಗೆ ಅದು ಮುಗಿದರೂ ದಿಲ್ಲಿ ಪೊಲೀಸರಿಗೆ ದಿಲ್ಲಿ ಸರಕಾರದಿಂದ ಅನುಮತಿ ಮಂಜೂರಾಗಿಲ್ಲ. ಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿ ಅಂತಿಮ ಕಾಲಾವಕಾಶವನ್ನು ಫೆ.28ರ ವರೆಗೆ ವಿಸ್ತರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
MUST WATCH
ಹೊಸ ಸೇರ್ಪಡೆ
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!
Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ