ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್
ಜಾಮೀಯಾ ಯೂನಿರ್ವಸಿಟಿ ಆವರಣದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ದೆಹಲಿ ಗಲಭೆ ಸಂಚನ್ನು ರೂಪಿಸಲಾಗಿತ್ತು
Team Udayavani, Aug 14, 2020, 6:10 PM IST
ನವದೆಹಲಿ:ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿಯ ಪಿಎಚ್ ಡಿ ವಿದ್ಯಾರ್ಥಿ, ಆರೋಪಿ ಮೀರಾನ್ ಹೈದರ್ ಹಲವಾರು ಕಟು ಸತ್ಯವನ್ನು ಬಹಿರಂಗಗೊಳಿಸಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ರಾಷ್ಟ್ರೀಯ ಜನತಾ ದಳದ ದಿಲ್ಲಿ ಯುವ ಘಟಕದ ಅಧ್ಯಕ್ಷನಾಗಿರುವ ಮೀರಾನ್ ಹೈದರ್ ದಿಲ್ಲಿ ಗಲಭೆ ಕುರಿತು ತನಿಖಾಧಿಕಾರಿಗಳ ಮುಂದೆ, ಜಾಮೀಯಾ ಹಿಂಸಾಚಾರದ ನಂತರ ದೆಹಲಿ ಗಲಭೆ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂದು ತಿಳಿಸಿದ್ದಾನೆ.
ಫೆಬ್ರುವರಿ ತಿಂಗಳಿನಲ್ಲಿ ದಿಲ್ಲಿಯಲ್ಲಿ ನಡೆದ ಭಾರೀ ದೊಡ್ಡ ಪ್ರಮಾಣದ ಕೋಮು ಹಿಂಸಾಚಾರ ಪ್ರಕರಣದ ಸಂಚಿನ ಆರೋಪದಲ್ಲಿ ದಿಲ್ಲಿ ಪೊಲೀಸರು ಮೀರಾನ್ ಹೈದರ್ ನನ್ನು ಮೊದಲು ಬಂಧಿಸಿರುವುದಾಗಿ ವರದಿ ಹೇಳಿದೆ.
ಜಾಮೀಯಾ ಯೂನಿರ್ವಸಿಟಿ ಆವರಣದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ದೆಹಲಿ ಗಲಭೆ ಸಂಚನ್ನು ರೂಪಿಸಲಾಗಿತ್ತು ಎಂದು ಮೀರಾನ್ ದೆಹಲಿ ಪೊಲೀಸರ ತನಿಖೆ ವೇಳೆಯಲ್ಲಿ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಪೂರ್ವ ಯೋಜನೆಯಂತೆ ಆರೋಪಿ ಮೀರಾನ್ ಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಜನರನ್ನು ಸೇರಿಸುವ ಟಾಸ್ಕ್ ನೀಡಲಾಗಿತ್ತು. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾನೆ. ದೆಹಲಿಯಲ್ಲಿ ಕೋಮು ಗಲಭೆಯ ಕಿಚ್ಚು ಹಚ್ಚಿಸಲು ಪಿಎಫ್ ಐ ಹಣಕಾಸಿನ ನೆರವು ನೀಡಿತ್ತು. ಅಲ್ಲದೇ ಪ್ರತಿಭಟನೆ ವೇಳೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬ್ಯಾನರ್ ಹಿಡಿದುಕೊಂಡಿರುವುದಾಗಿ ಹೇಳಿದ್ದ. ಗಲಭೆ ನಡೆಸಲು ಹೈದರ್ ಐದು ಲಕ್ಷ ರೂಪಾಯಿ ಹಣ ಸಂಗ್ರಹಿಸಿರುವುದಾಗಿ ಒಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಝಫರಾಬಾದ್ ಮತ್ತು ಸೀಲಂಪುರ್ ಪ್ರದೇಶದಲ್ಲಿ ಮೊದಲು ಗಲಭೆ ಆರಂಭಿಸಲಾಗಿತ್ತು. ಬಳಿಕ ಮೀರಾನ್ ಮತ್ತು ಇತರರು ಪೆಟ್ರೋಲ್ ಹಾಗೂ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ.
ದಿಲ್ಲಿಯಲ್ಲಿ ಗಲಭೆ ನಡೆಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಪ್ರಕರಣದಲ್ಲಿ ಮೀರಾನ್ ನನ್ನು ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.
(ಸುದ್ದಿಮೂಲ: ಜೀ ನ್ಯೂಸ್ ಇಂಗ್ಲಿಷ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ