ರೈಲಲ್ಲೂ ಕಾರ್ಗಿಲ್ ನೆನಪು
ವಿಜಯ ಸ್ಮರಿಸುವ ಮೊದಲ ರೈಲಿಗೆ ಹಸಿರು ನಿಶಾನೆ
Team Udayavani, Jul 16, 2019, 5:48 AM IST
ಹೊಸದಿಲ್ಲಿ: ಕಾರ್ಗಿಲ್ ವಿಜಯಕ್ಕೆ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೈಲುಗಳ ಮೇಲೆ ಯುದ್ಧದ ಕುರಿತಾದ ಮಾಹಿತಿ ಹಾಗೂ ಚಿತ್ರಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ.
ಈ ನಿಟ್ಟಿನಲ್ಲಿ ಮೊದಲು ದಿಲ್ಲಿ-ವಾರಾಣಸಿ ಕಾಶಿ ವಿಶ್ವನಾಥ ಎಕ್ಸ್ಪ್ರೆಸ್ ಮೇಲೆ ಕಾರ್ಗಿಲ್ ವಿಜಯವನ್ನು ಸ್ಮರಿಸುವ ಚಿತ್ರ ಪ್ರದರ್ಶಿಸಲಾಗುತ್ತದೆ. ಇದಕ್ಕಾಗಿ ಈ ರೈಲಿಗೆ ವಿನೈಲ್ ಹಾಳೆಗಳನ್ನು ಅಂಟಿಸಲಾಗುತ್ತದೆ. ಅದರ ಮೇಲೆ ಯುದ್ಧದ ಚಿತ್ರಗಳನ್ನು ಚಿತ್ರಿಸಲಾಗುತ್ತದೆ ಹಾಗೂ ಕಾರ್ಗಿಲ್ ವಿಜಯ್ ದಿವಸ ಎಂದು ಬರೆಯಲಾಗುತ್ತದೆ. ಇದೇ ರೀತಿ 10 ರೈಲುಗಳ ಮೇಲೂ ಪ್ರದರ್ಶಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೀತಿಯಾಗಿ ಪ್ರದರ್ಶಿಸಿದ ದಿಲ್ಲಿ-ವಾರಾಣಸಿ ಕಾಶಿ ವಿಶ್ವನಾಥ ರೈಲಿಗೆ ಸೋಮವಾರ ಕೇಂದ್ರ ಸಚಿವ ಹರ್ಷವರ್ಧನ್, ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಹಾಗೂ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಹೊಸದಿಲ್ಲಿಯಲ್ಲಿ ಹಸಿರು ನಿಶಾನೆ ತೋರಿದರು.