ಕುಡುಕ ಗಂಡನನ್ನು ವಿಷಯಿಕ್ಕಿ ಸಾಯಿಸಿದ ಪತ್ನಿ, ಮಂತ್ರವಾದಿ ಸೆರೆ
Team Udayavani, Mar 5, 2018, 4:10 PM IST
ಹೊಸದಿಲ್ಲಿ : ಮಂತ್ರವಾದಿಯ ಸಲಹೆ ಕೇಳಿ ಕುಡುಕ ಗಂಡನನ್ನು ವಿಷಯಿಕ್ಕಿ ಸಾಯಿಸಿದ ಮಹಿಳೆಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮುಖ್ಯ ಆರೋಪಿಯಾದ K V ರಾಮ ಮತ್ತು ಮಂತ್ರವಾದಿ ಶ್ಯಾಮ್ ಸಿಂಗ್ ಅಲಿಯಾಸ್ ಭಗತ್ ಸಿಂಗ್ನನ್ನು ಕೂಡ ಬಂಧಿಸಿದ್ದಾರೆ.
ಪತ್ನಿ ಗೈದ ವಿಷಪ್ರಾಶನದಿಂದ ಮೃತಪಟ್ಟ ಪತಿಯನ್ನು ಡಿ ಶ್ರೀನಿವಾಸ ಮೂರ್ತಿ ಎಂದು ಗುರುತಿಸಲಾಗಿದೆ. ಕಳೆದ ಫೆ.26ರಂದು ಈತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಗೆ ತರಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ; ಆಸ್ಪತ್ರೆಯವರು ಪೊಲೀಸರಿಗೆ ಈತನ ಅಸಹಜ ಸಾವಿನ ಬಗ್ಗೆ ದೂರು ನೀಡಿದ್ದರು.
ಸುದ್ದಿ ತಿಳಿದು ಆಂಧ್ರ ಪ್ರದೇಶದಿಂದ ಧಾವಿಸಿ ಬಂದಿದ್ದ ಮೃತನ ಸಹೋದರ ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿದ್ದ. ಮೃತ ವ್ಯಕ್ತಿ ಶ್ರೀನಿವಾಸ ಮೂರ್ತಿ ಹಣಕಾಸು ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದ. ಆತನ ಪತ್ನಿಗೆ ಸರಕಾರಿ ಉದ್ಯೋಗ ಇದೆ. ಪತಿಯು ಕುಡಕನಾಗಿದ್ದುದರಿಂದ ಇವರ ದಾಂಪತ್ಯ ಸರಿ ಇರಲಿಲ್ಲ.
ಪತಿಗೆ ವಿಷ ಉಣಿಸಿ ಸಾಯಿಸಿರುವುದನ್ನು ಒಪ್ಪಿಕೊಂಡಿರುವ ಮಹಿಳೆಯು, ತಮ್ಮ ಕುಟುಂಬಕ್ಕೆ 10ರಿಂದ 12 ಲಕ್ಷ ರೂ. ಸಾಲ ಇದೆ ಎಂಬುದನ್ನೂ ಹೇಳಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು