ನೋಟು ಅಮಾನ್ಯದಿಂದ ತೆರಿಗೆ ವ್ಯಾಪ್ತಿ ವಿಸ್ತಾರ
Team Udayavani, Nov 9, 2018, 5:36 AM IST
ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ (2016 ನ.8) ಪ್ರಧಾನಿ ಮೋದಿ ಘೋಷಣೆ ಮಾಡಿದ್ದ 500 ರೂ., 1 ಸಾವಿರ ರೂ. ನೋಟುಗಳ ಅಮಾನ್ಯೀಕರಣವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಇದರಿಂದಾಗಿ ತೆರಿಗೆ ವ್ಯಾಪ್ತಿ ವಿಸ್ತಾರವಾಗಿದೆ ಮತ್ತು ಸಂಗ್ರಹ ಹೆಚ್ಚಿದೆ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಸಹಿತ ಹಲವು ವಿಪಕ್ಷಗಳು ನೋಟು ಅಮಾನ್ಯ ಎಂಬುದು ವಿಫಲ ಕ್ರಮ ಎಂದು ಟೀಕಿಸಿವೆ.
ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ನೋಟು ಅಮಾನ್ಯ ಕ್ರಮ 2 ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಫೇಸ್ ಬುಕ್ನಲ್ಲಿ ಬರೆದುಕೊಂಡ ವಿತ್ತ ಸಚಿವ ಅರುಣ್ ಜೇಟ್ಲಿ, ಆರ್ಥಿಕತೆಯನ್ನು ಸುವ್ಯವಸ್ಥೆಗೊಳಿಸಲು ಇದು ಅಗತ್ಯ ಕ್ರಮವಾಗಿತ್ತು ಎಂದಿದ್ದಾರೆ. ಅದು ಜನರ ಕೈಯಲ್ಲಿದ್ದ ನಗದನ್ನು ವಶಪಡಿಸಲು ಕೈಗೊಂಡ ಕ್ರಮವಲ್ಲ; ಅರ್ಥ ವ್ಯವಸ್ಥೆ ಕ್ರಮ ಬದ್ಧಗೊಳಿಸುವುದು ಅದರ ಉದ್ದೇಶ ಎಂದಿದ್ದಾರೆ. ದೇಶದ ಹೊರಗಿರುವ ಕಪ್ಪು ಹಣವನ್ನು ಮೊದಲು ಸರಕಾರ ಟಾರ್ಗೆಟ್ ಮಾಡಿತ್ತು. ತೆರಿಗೆ ದಂಡದ ಮೂಲಕ ಈ ಹಣ ವಾಪಸ್ ಭಾರತಕ್ಕೆ ಬಂದಿದೆ. ಹಣವನ್ನು ಭಾರತಕ್ಕೆ ತರಲಾಗದವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿದೆ ಎಂದು ಅರುಣ್ ಜೇಟ್ಲಿ ಫೇಸ್ಬುಕ್ನಲ್ಲಿ ವಿವರಿಸಿದ್ದಾರೆ. ಭಾರತದ ಆರ್ಥಿಕತೆಯನ್ನು ನೋಟು ಅಮಾನ್ಯವು ಹೆಚ್ಚಿಸಿದೆ. ಕಾಂಗ್ರೆಸ್ ಯಾಕೆ ಈ ಹೆಸರಿನಲ್ಲಿ ದೇಶವನ್ನು ಹೀಗಳೆಯುತ್ತಿದೆ ಮತ್ತು ಜನರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಈ ಮಧ್ಯೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಇದೊಂದು ಹಣ ದುರ್ಬಳಕೆ ಸ್ಕೀಮ್ ಆಗಿತ್ತು ಎಂದಿದ್ದಾರೆ. ನೋಟು ಅಮಾನ್ಯದ ಯಾವ ಗುರಿಯೂ ಪೂರೈಸಿಲ್ಲ. ಜಿಎಸ್ಟಿ ಕಲೆಕ್ಷನ್ ಹಾಗೂ ನೇರ ತೆರಿಗೆ ಸಂಗ್ರಹವು ಅಂದಾಜಿಗಿಂತಲೂ ಕಡಿಮೆಯಾಗಿದೆ. ವಿತ್ತೀಯ ಕೊರತೆ ನೀಗಿಸಲೂ ಸಾಧ್ಯವಾಗಿಲ್ಲ ಎಂದಿದ್ದಾರೆ. 2016ರಲ್ಲಿ ನೋಟು ಅಮಾನ್ಯದಿಂದ ಆದ ಗಾಯಗಳು ಇನ್ನಷ್ಟು ತೀವ್ರವಾಗುತ್ತಿವೆ. ನೋಟು ಅಮಾನ್ಯದ ಪರಿಣಾಮ ಈಗಲೂ ಆರ್ಥಿಕತೆಯ ಮೇಲೆ ಕಾಣಿಸುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಆಕ್ಷೇಪಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನೋಟು ಅಮಾನ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಯನ್ನೂ ನಡೆಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
MUST WATCH
ಹೊಸ ಸೇರ್ಪಡೆ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ