ಅಂತ್ಯಸಂಸ್ಕಾರಕ್ಕಾಗಿ ದಲಿತ ವ್ಯಕ್ತಿ ಶವ ಸೇತುವೆ ಮೇಲಿಂದ ಕೆಳಗಿಳಿಸಿದ್ದೇಕೆ? ವೈರಲ್ ವೀಡಿಯೋ
Team Udayavani, Aug 22, 2019, 3:52 PM IST
ಚೆನ್ನೈ:ಸ್ಮಶಾನಕ್ಕೆ ತೆರಳಲು ದಾರಿ ಕೊಡುವುದಿಲ್ಲ ಎಂದು ಮೇಲ್ಜಾತಿ ಜನರು ಅಡ್ಡಿಪಡಿಸಿದ ಪರಿಣಾಮ ದಲಿತ ವ್ಯಕ್ತಿಯ ಶವವನ್ನು ಸೇತುವೆ ಮೇಲಿಂದ ಹಗ್ಗ ಕಟ್ಟಿ ಕೆಳಗಿಳಿಸಿ ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುತ್ತಿರುವ ಘಟನೆ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿ ನಡೆದಿದ್ದು, ಈ ವೀಡಿಯೋ ತುಣುಕು ಇದೀಗ ಭಾರೀ ವೈರಲ್ ಆಗಿದೆ.
ಹಗ್ಗದ ಮೂಲಕ ಸ್ಟ್ರೇಚರ್ ಸಹಿತ ದಲಿತ ವ್ಯಕ್ತಿ ಶವವನ್ನು ಸುಮಾರು 20 ಅಡಿ ಆಳದ ಸೇತುವೆ ಮೇಲಿನಿಂದ ನಿಧಾನಕ್ಕೆ ಕೆಳಗಿಳಿಸುತ್ತಿದ್ದು, ಈ ಸಂದರ್ಭದಲ್ಲಿ ಶವದ ಮೇಲೆ ಹಾಕಿದ್ದ ಹೂವಿನ ಹಾರ ತುಂಡಾಗಿ ಕೆಳಗೆ ಬೀಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಕೆಲವು ದಿನಗಳ ಹಿಂದೆ ಅಪಘಾತದಲ್ಲಿ ಕುಪ್ಪನ್(65ವರ್ಷ) ದಲಿತ ವ್ಯಕ್ತಿ ಸಾವನ್ನಪ್ಪಿದ್ದರು. ಇದೀಗ ಘಟನೆ ಕುರಿತ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಸೇತುವೆ ಕೆಳಗೆ ನಿಂತಿದ್ದ ಜನರ ಶವವನ್ನು ಇಳಿಸಿಕೊಂಡು ಅಂತ್ಯಸಂಸ್ಕಾರ ನಡೆಸುವ ಸ್ಥಳದತ್ತ ಕೊಂಡೊಯ್ಯುತ್ತಿರುವ ಘಟನೆ ವೆಲ್ಲೂರಿನ ನಾರಾಯಣಪುರಂ ಗ್ರಾಮದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಸೆರೆಹಿಡಿದಿದ್ದ ವೀಡಿಯೋ ತುಣುಕು ಆನ್ ಲೈನ್ ತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಾಣಿಯಂಬಾಡಿ ತಾಲೂಕಿನಲ್ಲಿರುವ ದಲಿತ ಕಾಲೋನಿಗೆ ಅಂತ್ಯ ಸಂಸ್ಕಾರ ನಡೆಸಲು ಯಾವುದೇ ಸ್ಮಶಾನ ಇಲ್ಲ. ಇದೇ ನಮ್ಮ ಸ್ಮಶಾನ. ಹೀಗಾಗಿ ಪ್ರತಿ ಬಾರಿ ನಾವು ಶವವನ್ನು ಸೇತುವೆ ಮೇಲಿನಿಂದ ಕೆಳಗಿಳಿಸಿ ಅಂತ್ಯಸಂಸ್ಕಾರ ನಡೆಸುತ್ತೇವೆ ಎಂದು ಮೃತ ಸಂಬಂಧಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
The garlands fall off the dead body as the stretcher is lowered. No dignity in death for Kuppan, a Dalit man from Vellore. His body cannot be taken on the road to the crematorium other dominant castes use. Details here- https://t.co/kg9qIXcG1O pic.twitter.com/7SpJaY5AOA
— Dhanya Rajendran (@dhanyarajendran) August 22, 2019
ಇಲ್ಲಿರುವ ಸ್ಮಶಾನಕ್ಕೆ ತೆರಳಲು ಮೇಲ್ವರ್ಗದ ಜನರ ಜಾಗದಿಂದ ತೆರಳಬೇಕು. ಆದರೆ ಈಗ ಆ ಜಾಗದ ಸುತ್ತ ಬೇಲಿಯನ್ನು ನಿರ್ಮಿಸಿದ್ದಾರೆ. ನಾವು ಕೇಳಿದರೂ ನಮಗೆ ದಾರಿ ಕೊಡುವುದಿಲ್ಲ ಎಂಬುದು ಮೇಲ್ವರ್ಗದ ಜನರ ವಾದವಾಗಿದೆ. ಈ ನಿಟ್ಟಿನಲ್ಲಿ ನಮಗೆ ಬೇರೆ ದಾರಿ ಇಲ್ಲದೆ ಸೇತುವೆ ಮೇಲಿನಿಂದ ಶವ ಕೆಳಗಿಸಿ ಹೊತ್ತೊಯ್ಯುವುದಾಗಿ ಮತ್ತೊಬ್ಬ ಗ್ರಾಮಸ್ಥ ವಿಜಯ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್