ಜೀವ ಬೆದರಿಕೆ: ಪೊಲೀಸ್ ರಕ್ಷಣೆ ಕೋರಿದ ಹನಿಪ್ರೀತ್ ಮಾಜಿ ಪತಿ
Team Udayavani, Sep 28, 2017, 4:38 PM IST
ಕರ್ನಾಲ್ : ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಮತ್ತು ಆತನ ದತುಪುತ್ರಿ ಹನಿಪ್ರೀತ್ ಇನ್ಸಾನ್ ನಡುವಿನ ಅಕ್ರಮ ಲೈಂಗಿಕ ಸಂಬಂಧಗಳನ್ನು ಬಹಿರಂಗಗೊಳಿಸಿರುವ ನನಗೆ ಈಗ ಡೇರಾ ಗೂಂಡಾಗಳಿಂದ ಜೀವ ಬೆದರಿಕೆ ಬರುತ್ತಿದೆ ಹನಿಪ್ರೀತ್ ಳ ಮಾಜಿ ಪತಿ ವಿಶ್ವಾಸ್ ಗುಪ್ತಾ ದೂರು ನೀಡಿ ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ.
ವಿಶ್ವಾಸ್ ಗುಪ್ತಾ ಅವರು ಇಂದು ಗುರುವಾರ ತನ್ನ ತಂದೆ ಮಹೇಂದ್ರ ಗುಪ್ತಾ ಜತೆಗೆ ಕರ್ನಾಲ್ ಪೊಲೀಸ್ ಠಾಣೆಗೆ ತೆರಳಿ ತನಗೆ ಡೇರಾ ಗೂಂಡಾಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು ತನಗೆ ಪೊಲೀಸ್ ರಕ್ಷಣೆ ಬೇಕು ಎಂದು ಕೋರಿ ದೂರು ದಾಖಲಿಸಿದ್ದಾರೆ.
ಹನಿಪ್ರೀತ್ಳನ್ನು ವಿಶ್ವಾಸ್ ಗುಪ್ತಾ 1991ರಲ್ಲಿ ವಿವಾಹವಾಗಿದ್ದರು. ಅನಂತರ ಆಕೆ ಡೇರಾ ಮುಖ್ಯಸ್ಥನ ಸಂಪರ್ಕಕ್ಕೆ ಬಂದಿದ್ದಳು. ಗುರ್ಮಿತ್ ಸಿಂಗ್ ಆಕೆಯನ್ನು ತನ್ನ ದತ್ತು ಪುತ್ರಿಯಾಗಿ ಸ್ವೀಕರಿಸಿಯೂ ಆಕೆಯಿಂದ ಗಂಡು ಮಗುವನ್ನು ಪಡೆದು ಅದನ್ನು ಡೇರಾ ಉತ್ತರಾಧಿಕಾರಿಯಾಗಿ ಮಾಡುವ ಹಂಬಲ ಹೊಂದಿದ್ದ. ಹಾಗಾಗಿ ಗುರ್ಮಿತ್ ಮತ್ತು ಹನಿಪ್ರೀತ್ ನಡುವಿನ ಸಂಬಂಧ ತಂದೆ – ಮಗಳ ಸಂಬಂಧವಾಗಿರದೆ ಆಕೆ ಆತನ ಪ್ರೇಯಿಸಿಯಾಗಿ ಆತನೊಂದಿಗೆ ಹಾಸಿಗೆ ಹಂಚಿಕೊಂಡಿದ್ದಳು ಎಂದು ವಿಶ್ವಾಸ್ ಗುಪ್ತಾ ಹೇಳಿದ್ದರು.
ಗುರ್ಮಿತ್ ರಾಮ್ ರಹೀಮ್ ಸಿಂಗ್ ಮತ್ತು ಹನಿಪ್ರೀತ್ ನಡುವಿನ ಅಕ್ರಮ ಸಂಬಂಧವನ್ನು ಬಯಲಿಗೆಳೆದು ಗುರ್ಮಿತ್ನ ಪ್ರತಿಷ್ಠೆಗೆ ಮಸಿ ಬಳಿದ ಕಾರಣಕ್ಕೆ ತನಗೆ ಡೇರಾ ದ ಕುರ್ಬಾನಿ ದಳದಿಂದ ಜೀವ ಬೆದರಿಕೆಗಳು ಬರುತ್ತಿವೆ ಎಂದು ವಿಶ್ವಾಸ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ