ಸಣ್ಣ ಜಮೀನಿಗೆ ಕುಟುಂಬವೇ ನಾಶ
Team Udayavani, Jun 24, 2019, 5:56 AM IST
ಭೋಪಾಲ: ದೊಡ್ಡ ಮಟ್ಟದ ಆಸ್ತಿಗಾಗಿ ಸಹೋದರರು ಖಟ್ಲೆ ಹೂಡುವುದು, ಹೊಡೆದಾಡುವುದು ಗೊತ್ತು. ಆದರೆ 10×10 ಅಡಿ ಜಮೀನಿಗಾಗಿ ವಾಗ್ವಾದ ಬೆಳೆದು, ಗುಂಡು ಹಾರಿಸಿಕೊಂಡು ಮಗು ಸೇರಿ ಒಂದೇ ಕುಟುಂಬದ ಐವರು ಅಸುನೀಗಿದ್ದಾರೆ. ಮಧ್ಯಪ್ರದೇಶ ರಾಜಧಾನಿ ಭೋಪಾಲದ ಛೋಟಿ ಬಜಾರಿಯಾ ಪ್ರದೇಶದಲ್ಲಿ ಶುಕ್ರವಾರ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂದೂ ಕನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾಗ್ವಾದ ಶುರುವಾಗುತ್ತಲೇ ಬಂದೂಕಿಗೆ ಗುಂಡು ತುಂಬಿ ಇರಿಸಿ ಸಿದ್ಧಪಡಿಸಿಟ್ಟು ಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಣ್ಣ ಅಳತೆಯ ಜಮೀನಿಗಾಗಿ ಕುಟುಂಬವೇ ನಾಶವಾಗಿದ್ದು, ಕೇವಲ ನಾಲ್ಕು ವರ್ಷದ ಬಾಲಕಿ ಮಾತ್ರ ಜೀವಂತವಾಗಿದ್ದಾಳೆ. ಮನೆ ನಿರ್ಮಿಸುವ ವಿಚಾರಕ್ಕೆ ಜಗಳ ಶುರುವಾಯಿತು. ಜಮೀನು ವಿಭಜನೆ ಮಾಡಬೇಕು ಎಂದಾಗ, ಪರಿಸ್ಥಿತಿ ವಿಕೋಪಕ್ಕೆ ತೆರಳಿತು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…