ದೀದಿ-ಸೋನಿಯಾ ಭೇಟಿ :ಮುನಿಸು ಮರೆತು ಬೆರೆತರು
Team Udayavani, Jul 29, 2021, 7:10 AM IST
ಹೊಸದಿಲ್ಲಿ: ಪಶ್ಚಿಮ ಬಂಗಾಲ ವಿಧಾನಸಭೆಯಲ್ಲಿ ಮುನಿಸಿಕೊಂಡಿದ್ದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಮತ್ತೆ ಮೈತ್ರಿಯತ್ತ ಸಾಗಿವೆ. ಹೊಸದಿಲ್ಲಿಯಲ್ಲಿ ಬುಧವಾರ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ನ ಮಧ್ಯಾಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನಡುವಿನ ಭೇಟಿ ಮತ್ತು ಮಾತುಕತೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಇಬ್ಬರು ಪ್ರಮುಖ ನಾಯಕಿಯರ ಭೇಟಿ ವೇಳೆ, ವಯನಾಡ್ ಸಂಸದ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು.
ಅನಂತರ ಮಾತನಾಡಿದ ಮಮತಾ ಬ್ಯಾನರ್ಜಿ “ಸೋನಿಯಾ ಜಿ ಚಹಾ ಸೇವಿಸಲು ಆಹ್ವಾನಿಸಿದ್ದರು. ಅದಕ್ಕನುಸಾರವಾಗಿ ಭೇಟಿ ನೀಡಿದ್ದೆ’ ಎಂದರು. ವಿಪಕ್ಷಗಳೆಲ್ಲವೂ ಒಟ್ಟಾಗಬೇಕಾದ ಬಗ್ಗೆ ನಾವಿಬ್ಬರು ಚರ್ಚೆ ನಡೆಸಿದೆವು. ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಟ್ಟಾಗಬೇಕು ಮತ್ತು ಕೆಲಸ ಮಾಡಬೇಕು ಎಂಬ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು ಎಂದು ಹೇಳಿದ್ದಾರೆ. ಒಟ್ಟು 45 ನಿಮಿಷಗಳ ಕಾಲ ನಡೆದಿದ್ದ ಸಭೆಯು ಫಲಪ್ರದ ಎಂದು ಬಣ್ಣಿಸಿದರು ದೀದಿ. ಮುಂದಿನ ದಿನಗಳಲ್ಲಿ ಇದರ ಫಲಿತಾಂಶ ಧನಾತ್ಮಕವಾಗಿಯೇ ಇರಲಿದೆ ಎಂದು ಟಿಎಂಸಿ ಅಧಿನಾಯಕಿ ಹೇಳಿಕೊಂಡರು. ಮಮತಾ ಬ್ಯಾನರ್ಜಿ ಒಟ್ಟು ಐದು ದಿನಗಳ ಕಾಲ ರಾಷ್ಟ್ರ ರಾಜಧಾನಿಯ ಪ್ರವಾಸದಲ್ಲಿದ್ದಾರೆ. ಸೋನಿಯಾ ಭೇಟಿ ಬಳಿಕ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜತೆಗೂ ಮಾತುಕತೆ ನಡೆಸಿದ್ದಾರೆ.
ಜೋತಿಷಿ ಅಲ್ಲ:
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ 2024ರ ಚುನಾವಣೆಗೆ ಆಟ ಶುರುವಾಗಿದೆ ಎಂದರು. ಪಶ್ಚಿಮ ಬಂಗಾಲಕ್ಕೆ ಸೀಮಿತವಾಗಿದ್ದ ಆಟ ಇನ್ನು ದೇಶಕ್ಕೇ ವಿಸ್ತರಿಸಲಿದೆ ಎಂದರು. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ರಚನೆಗೊಳ್ಳಲಿರುವ ವಿಪಕ್ಷಗಳ ಒಕ್ಕೂಟವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಮುಂಚಿತವಾಗಿ ತಿಳಿಸಲು ನಾನು ಜೋತಿಷಿ ಅಲ್ಲ ಎಂದು ಹೇಳಿದ್ದಾರೆ. ಅದನ್ನು ಸಮಯಕ್ಕನು ಸಾರ ವಾಗಿಯೇ ನಿರ್ಧರಿಸಬೇಕಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳಿಗಿಂತ ಸತ್ಯದ ದಿನಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.
ಯಾರಾದರೂ ತೊಂದರೆ ಇಲ್ಲ:
ವಿಪಕ್ಷಗಳ ಒಕ್ಕೂಟವನ್ನು ಯಾರು ಮುನ್ನಡೆಸಿದರೂ ಸ್ವಾಗತವೇ ಎಂದು ಹೇಳಿಕೊಂಡರು ಪಶ್ಚಿಮ ಬಂಗಾಲ ಮುಖ್ಯಮಂತ್ರಿ. ವಿಪಕ್ಷಗಳ ಮುಖಂಡರೆಲ್ಲ ಒಟ್ಟಾಗಿ ಕುಳಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರು ಸಮರ್ಥ ನಾಯಕ ಎಂದು ನಿರ್ಧರಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಚುನಾವಣೆ ಯಲ್ಲಿ ಸ್ಪರ್ಧಿಸಲಿದ್ದರೆ, ಅದು ದೇಶದೊಂದಿಗಿನ ಸ್ಪರ್ಧೆಯೇ ಆಗಿರಲಿದೆ ಎಂದು ಹೇಳಿದ್ದಾರೆ. ಪೆಗಾಸಸ್ ವಿವಾದದ ಬಗ್ಗೆ ಮಾತನಾಡಿದ ದೀದಿ, ದೇಶದಲ್ಲಿ ಈಗ ತುರ್ತುಪರಿಸ್ಥಿತಿ ಅವಧಿಯಲ್ಲಿ ಇದ್ದ ದಿನಗಳಿಗಿಂತ ಗಂಭೀರವಾಗಿಯೇ ಇದೆ ಎಂದರು. ಜತೆಗೆ ನನ್ನ ಫೋನ್ ಕೂಡ ನಿಗಾಕ್ಕೆ ಒಳಗಾಗಿದೆ ಎಂದು ಹೇಳಿಕೊಂಡರು.
ನಿಗದಿತ ಉದ್ದೇಶದಿಂದ ವಿಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಕೊರೊನಾ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸುವ ಬದಲು ಪೆಗಾಸಸ್ ವಿಚಾರದ ಬಗ್ಗೆ ಚರ್ಚಿಸಲು ಒತ್ತಾಯ ಮಂಡಿಸಲಾಗುತ್ತಿದೆ. ಅವರ ಧೋರಣೆ ಸರಿಯಲ್ಲ.-ಸಂಭಿತ್ ಪಾತ್ರಾ, ಬಿಜೆಪಿ ವಕ್ತಾರ
ದಾಖಲೆ ಹರಿದೆಸೆದರು :
ಲೋಕಸಭೆಯಲ್ಲಿ ಪೆಗಾಸಸ್ ವಿವಾದ ಮತ್ತು ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೋಲಾಹಲವೇ ಉಂಟಾಗಿತ್ತು. ಬೆಳಗ್ಗೆ 11ರಿಂದ 12ಗಂಟೆಯ ವರೆಗೆ ಪ್ರತಿಭಟನೆಯ ಘೋಷಣೆಗಳ ನಡುವೆ, ಕಲಾಪ ಮುಂದೂಡದೆ ಪ್ರಶ್ನೋತ್ತರ ವೇಳೆಯ ಕಲಾಪಗಳು ನಡೆದದ್ದೇ ಒಂದು ಪ್ರಧಾನ ಅಂಶ. ಅನಂತರ ಸಂಸದ ರಾಜೇಂದ್ರ ಅಗರ್ವಾಲ್ ಸ್ಪೀಕರ್ ಸ್ಥಾನದಲ್ಲಿ ಕುಳಿತು ಕಲಾಪ ನಿರ್ವಹಿಸಲು ಬಂದರು. ಈ ಸಂದರ್ಭದಲ್ಲಿ ಸದನದ ಕಲಾಪದ ವಿವರಗಳ ದಾಖಲೆಗಳನ್ನು ಮತ್ತು ಪ್ರತಿಭಟನೆಗಾಗಿ ಫಲಕಗಳನ್ನು ಹರಿದು ಸ್ಪೀಕರ್ ಮತ್ತು ಆಡಳಿತ ಪಕ್ಷದ ಸದಸ್ಯರತ್ತ ಕಾಂಗ್ರೆಸ್ ಸಂಸದರಾಗಿರುವ ಗುರ್ಜೀತ್ ಅಜುಜಾ, ಟಿ.ಎನ್.ಪ್ರತಾಪನ್, ಹಿಬಿ ಇಡೆನ್ ಮತ್ತು ಇತರರು ಎಸೆದಿದ್ದಾರೆ. ಅವರನ್ನು ಮುಂಗಾರು ಅಧಿವೇಶನದ ಉಳಿದ ಕಲಾಪದಿಂದ ಅಮಾ ನತು ಮಾಡಬೇಕು ಎಂದು ಕೇಂದ್ರ ಸರಕಾರ ಗೊತು ¤ವಳಿ ಮಂಡಿಸುವ ಸಾಧ್ಯತೆ ಇದೆ. ಈ ಗದ್ದಲದ ನಡುವೆಯೇ ದಿವಾಳಿ ತಿದ್ದುಪಡಿ ಮಸೂದೆಯನ್ನು ಚರ್ಚೆ ಇಲ್ಲದೆಯೇ ಲೋಕಸಭೆ ಯಲ್ಲಿ ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ಕೂಡ ಕಲಾಪ ನಡೆಸಲು ವಿಪಕ್ಷಗಳು ಪದೇ ಪದೆ ಅಡ್ಡಿಪಡಿಸಿದವು. ಹೀಗಾಗಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು