‘ಗೋಮಾಂಸ ತಿನ್ನುವ ಬುದ್ಧಿಜೀವಿಗಳು ನಾಯಿ ಮಾಂಸ ತಿನ್ನಲಿ’
Team Udayavani, Nov 6, 2019, 12:22 AM IST
ಊರ್ದುವಾನ್: ಗೋಮಾಂಸ ತಿನ್ನುವ ಬುದ್ಧಿಜೀವಿಗಳು, ನಾಯಿ ಮಾಂಸವನ್ನೂ ತಿನ್ನಲಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬುರ್ಧ್ವಾನ್ನಲ್ಲಿ ನಡೆದ ಗೋಪಾಷ್ಟಮಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿರುವ ಅವರು, ದೇಶಿ ಹಸುಗಳ ಹಾಲಿನಲ್ಲಿ ಚಿನ್ನವಿದೆ. ಅದನ್ನು ಕುಡಿದರೆ ಆರೋಗ್ಯ ಚೆನ್ನಾಗಿರುತ್ತೆ.
ವಿದೇಶದ ಹಸುಗಳು ನಮ್ಮ ಗೋಮಾತೆ (ತಾಯಿ) ಅಲ್ಲ, ಚಿಕ್ಕಮ್ಮ ಇದ್ದಂತೆ ಎಂದಿದ್ದಾರೆ. ಭಾರತದ ಪವಿತ್ರ ನೆಲದಲ್ಲಿ, ಗೋಮಾಂಸ ಸೇವನೆ ಗಂಭೀರ ಅಪರಾಧ ಎಂದಿದ್ದಾರೆ. ರಸ್ತೆಗಳಲ್ಲಿ ಗೋಮಾಂಸ ಸೇವಿಸುವ ಕೆಲ ಬುದ್ಧಿಜೀವಿಗಳು ನಾಯಿ ಮಾಂಸವನ್ನೂ ಸೇವಿಸಲಿ. ಅವರು ಯಾವ ಪ್ರಾಣಿ ಸೇವಿಸಿದ್ರೂ ಆರೋಗ್ಯ ಚೆನ್ನಾಗಿರುತ್ತೆ. ಆದರೆ ರಸ್ತೆಗಳಲ್ಲಿ ಏಕೆ? ನಿಮ್ಮ ಮನೆಯೊಳಗೆ ತಿನ್ನಿರಿ ಎಂದು ಹೇಳಿದ್ದಾರೆ.