ತಜ್ಞರ ಸಮಿತಿ ಸದಸ್ಯರ ಅನರ್ಹತೆ ಅಸಾಧ್ಯ
Team Udayavani, Jan 20, 2021, 6:19 AM IST
ಹೊಸದಿಲ್ಲಿ: ಒಬ್ಬ ವ್ಯಕ್ತಿ ಒಂದು ವಿಚಾರದ ಬಗ್ಗೆ ಈ ಹಿಂದೆ ಯಾವುದೋ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂಬ ಕಾರಣಕ್ಕಾಗಿ ಆ ವ್ಯಕ್ತಿಯನ್ನು ತಜ್ಞರ ಸಮಿತಿಯಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ. ಏಕೆಂದರೆ, ಆ ವ್ಯಕ್ತಿಯ ಅಭಿಪ್ರಾಯವು ಮುಂದೆ ಬದಲಾಗಲೂಬಹುದು.
ಹೀಗೆಂದು ಹೇಳಿರುವುದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ. ಕೃಷಿ ಕಾಯ್ದೆ ಬಿಕ್ಕಟ್ಟು ಪರಿಹರಿಸಲೆಂದು ರಚಿಸಲಾದ ಸಮಿತಿಯ ಎಲ್ಲ ನಾಲ್ವರು ಸದಸ್ಯರೂ ಸರಕಾರದ ಕೃಷಿ ಕಾಯ್ದೆ ಪರವಾಗಿಯೇ ಮಾತನಾಡಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಜೆಐ ಈ ಸ್ಪಷ್ಟನೆ ನೀಡಿದ್ದಾರೆ. ಸಮಿತಿಯಲ್ಲಿ ಸ್ಥಾನ ಪಡೆಯುವ ಮುನ್ನ ಸದಸ್ಯರು ಒಂದು ಅಭಿಪ್ರಾಯ ಹೊಂದಿದ್ದು, ಅನಂತ ರದಲ್ಲಿ ಅದು ಬದಲಾಗಬಹುದು. ನೇಮ ಕಕ್ಕೆ ಮುನ್ನ ಇದ್ದ ಅಭಿಪ್ರಾಯವೇ ಅನಂತ ರವೂ ಇರುತ್ತದೆಂದು ಹೇಳಲಾಗದು ಎಂದೂ ನ್ಯಾಯಪೀಠ ಹೇಳಿದೆ.
ಕಾಯ್ದೆ ರದ್ದು ಸರಿಯಲ್ಲ: ಮಂಗಳವಾರ ತಜ್ಞರ ಸಮಿತಿಯ ಮೊದಲ ಸಭೆ ನಡೆದಿದ್ದು, ನಾವೆಲ್ಲರೂ ಕೃಷಿ ಕಾಯ್ದೆ ಕುರಿತ ನಮ್ಮ ವೈಯಕ್ತಿಕ ಅಭಿಪ್ರಾಯ ಮತ್ತು ಸಿದ್ಧಾಂತಗಳನ್ನು ಬದಿಗಿರಿಸಿ ಕರ್ತವ್ಯ ಪೂರೈಸುತ್ತೇವೆ ಎಂದು ಸದಸ್ಯರು ಹೇಳಿದ್ದಾರೆ. ಇದರ ಜತೆಗೇ, ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಮಾಡುವುದು ಸರಿಯಲ್ಲ. ಹಾಗೆ ಮಾಡಿದರೆ ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ಸುಧಾರಣೆ ತರಲು ಸಾಧ್ಯವಾಗದು ಎಂದೂ ಸಮಿತಿ ಸದಸ್ಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ