ಡಿಎಂಕೆ ಹಿಂದೂ ವಿರೋಧಿ ಪಕ್ಷ, ಮತದಾರರು ತಕ್ಕ ಪಾಠ ಕಲಿಸಬೇಕು: ತೇಜಸ್ವಿ ಸೂರ್ಯ
ಭಾರತೀಯ ಜನತಾ ಪಕ್ಷ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತದೆ
Team Udayavani, Feb 22, 2021, 10:32 AM IST
ಚೆನ್ನೈ: ತಮಿಳುನಾಡಿನ ದ್ರಾವಿಡ್ ಮುನ್ನೇತ್ರ ಕಳಗಂ ಹಿಂದೂ ವಿರೋಧಿ ಪಕ್ಷ ಎಂದು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದು, ರಾಜ್ಯದ ಮತದಾರರು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸುವಂತೆ ಕರೆ ನೀಡಿದರು.
ಭಾನುವಾರ (ಫೆ.21,2021, ಬಿಜೆಪಿ ಯುವ ಮೋರ್ಚಾದ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ತೇಜಸ್ವಿ, ಡಿಎಂಕೆ ತನ್ನ ಹಗೆತನ ಸಿದ್ಧಾಂತದೊಂದಿಗೆ ಹಿಂದೂ ವಿರೋಧಿಯಾಗಿದೆ. ಪ್ರತಿಯೊಬ್ಬ ತಮಿಳರು ಹೆಮ್ಮೆಯ ಹಿಂದೂವಾಗಿದ್ದಾರೆ. ದೇಶದಲ್ಲಿಯೇ ಅತೀ ಹೆಚ್ಚು ದೇವಾಲಯಗಳನ್ನು ಹೊಂದಿರುವ ತಮಿಳುನಾಡು ಪವಿತ್ರಭೂಮಿಯಾಗಿದೆ. ತಮಿಳುನಾಡಿನ ಪ್ರತಿ ಇಂಚೂ ಪವಿತ್ರವಾಗಿದೆ, ಆದರೆ ಡಿಎಂಕೆ ಹಿಂದೂ ವಿರೋಧಿಯಾಗಿದೆ, ಹೀಗಾಗಿ ನಾವು ಡಿಎಂಕೆ ಪಕ್ಷವನ್ನು ಸೋಲಿಸಲೇಬೇಕಾಗಿದೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತದೆ ಎಂದು ತೇಜಸ್ವಿ ಸೂರ್ಯ, ತಮಿಳುನಾಡು ಮತ್ತು ತಮಿಳು ಭಾಷೆ ಬಗ್ಗೆಯೂ ಬಿಜೆಪಿ ಗೌರವ ಹೊಂದಿರುವುದಾಗಿ ತಿಳಿಸಿದರು.
ಭಾರತೀಯ ಜನತಾ ಪಕ್ಷ ಮಾತ್ರ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗೆ ಪ್ರೋತ್ಸಾಹ ನೀಡಲಿದೆ. ಒಂದು ವೇಳೆ ತಮಿಳು ಬದುಕುಳಿದರೆ, ಹಿಂದುತ್ವ ಜಯಸಾಧಿಸಿದಂತೆ. ಕನ್ನಡ ಗೆದ್ದರೆ, ಹಿಂದುತ್ವ ಜಯಗಳಿಸಿದಂತೆ ಎಂದು ತೇಜಸ್ವಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್