ಬಾನಲ್ಲಿನ್ನು ಸಿಗದು “ಹಾರುವ ಸಂತಸ’
Team Udayavani, Apr 18, 2019, 6:00 AM IST
ಮುಂಬಯಿ: “ದ ಜಾಯ್ ಆಫ್ ಫ್ಲೈಯಿಂಗ್’ ಎಂಬ ಘೋಷವಾಕ್ಯ ಹೊಂದಿರುವ ದೇಶದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಬುಧವಾರದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಅಮೃತಸರದಿಂದ ಮುಂಬಯಿಗೆ ಕೊನೆಯ ವಿಮಾನ ಟೇಕಾಫ್ ಆಗುತ್ತಿದ್ದಂತೆಯೆ ತಾತ್ಕಾಲಿಕವಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಹಾರಾಟ ರದ್ದು ಮಾಡಲಾಗಿದೆ ಎಂದು ಪ್ರಕಟಿಸಲಾಯಿತು. ಎಸ್ಬಿಐ ಸೇರಿದಂತೆ ಬ್ಯಾಂಕ್ಗಳ ಒಕ್ಕೂಟದಿಂದ ತಕ್ಷಣವೇ 980 ಕೋಟಿ ರೂ. ಸಾಲ ಪಡೆಯಲು ವಿಫಲಗೊಂಡಿದ್ದರಿಂದ ವಿಮಾನಯಾನ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.
ಇದರಿಂದಾಗಿ ಒಟ್ಟು 20 ಸಾವಿರ ಪೈಲಟ್ಗಳು ಸೇರಿದಂತೆ ಹಲವು ಸ್ತರದ ಉದ್ಯೋಗಿಗಳಿಗೆ ತೊಂದರೆಯಾಗಿದೆ. ತೈಲ ಕಂಪೆನಿಗಳಿಗೆ, ಉದ್ಯೋಗಿಗಳಿಗೆ ಕಂಪೆನಿ ಈಗಾಗಲೇ ಬಾಕಿ ಪಾವತಿ ಮಾಡಬೇಕಾಗಿದೆ. 120ಕ್ಕೂ ಅಧಿಕ ವಿಮಾನಗಳನ್ನು ಹೊಂದಿರುವ ಸಂಪೂರ್ಣ ದೇಶಿಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜೆಟ್ ಏರ್ವೇಸ್ ಮಂಗಳವಾರದ ಹೊತ್ತಿಗೆ ಕೇವಲ 5 ವಿಮಾನಗಳ ಹಾರಾಟ ನಡೆಸುವಂತಾಗಿತ್ತು. ಸಂಸ್ಥೆಯ ಮೊದಲ ವಿಮಾನ 1993ರ ಮೇ 5ರಂದು ಮುಂಬಯಿ- ಅಹಮದಾಬಾದ್ ನಡುವೆ ಹಾರಾಟ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ