ಹದಿಯಾ ಮಾತಿಗೆ ಬೆಲೆ ಕೊಡಬೇಕಾಗಿಲ್ಲ: ವಕೀಲ
Team Udayavani, Nov 27, 2017, 6:30 AM IST
ಹೊಸದಿಲ್ಲಿ: “ಹದಿಯಾ ಮಾನಸಿಕವಾಗಿ ಅಪಹರಣಕ್ಕೀಡಾಗಿದ್ದಾಳೆ. ಹಾಗಾಗಿ, ಅವಳ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿಲ್ಲ.’
ಹೀಗೆಂದು ಹೇಳಿದ್ದು ಕೇರಳದ ಲವ್ ಜಿಹಾದ್ ಸಂತ್ರಸ್ತೆ ಎನ್ನಲಾದ ಅಖೀಲಾ ಅಲಿಯಾಸ್ ಹದಿಯಾಳ ಅಪ್ಪ ಅಶೋಕನ್ ಪರ ವಕೀಲ ರಘುನಾಥ್. ಶನಿವಾರ ವಷ್ಟೇ ಕೊಚ್ಚಿಯಿಂದ ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದ ಹದಿಯಾ ಸುದ್ದಿಗಾರರ ಮುಂದೆ ಮಾತನಾಡುತ್ತಾ, “ನಾನು ಈಗ ಮುಸ್ಲಿಂ. ಮತಾಂತರ ಆಗುವಂತೆ ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ.
ನಾನು ನನ್ನ ಪತಿಯೊಂದಿಗೆ ಬಾಳಲು ಇಚ್ಛಿಸುತ್ತೇನೆ’ ಎಂದಿದ್ದಳು. ಅದಕ್ಕೆ ಹೊಸದಿಲ್ಲಿಯಲ್ಲಿ ರವಿವಾರ ಪ್ರತಿಕ್ರಿಯಿಸಿದ ವಕೀಲ ರಘುನಾಥ್, “ಆಕೆ ಒತ್ತಾಯಪೂರ್ವಕ ಮತಾಂತರದ ಬಲಿಪಶು. ಆಕೆಯನ್ನು ಕಾನೂನಿನಾಚೆ ಕರೆದೊಯ್ಯಲು ಮದುವೆ ಎಂಬ ಅಸ್ತ್ರವನ್ನು ಬಳಸಲಾಗಿದೆ. ಅವಳನ್ನು ಎಷ್ಟು ಬ್ರೈನ್ ವಾಷ್ ಮಾಡಲಾಗಿದೆ ಎಂದರೆ, ಹದಿಯಾ ಈಗ ಮಾನಸಿಕವಾಗಿ ಅಪಹರಣಕ್ಕೀಡಾ ಗಿದ್ದಾಳೆ. ಅವಳ ಮಾತಿಗೆ ಬೆಲೆ ಕೊಡಬೇಕಾಗಿಲ್ಲ’ ಎಂದಿ ದ್ದಾರೆ. ಇದೇ ವೇಳೆ, ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಹದಿಯಾಳ ಅಪ್ಪ ಏನು ಹೇಳುತ್ತಾರೆ ಎಂಬ ಪ್ರಶ್ನೆಗೆ, “ಅವರೇನು ಹೇಳುತ್ತಾರೆಂದು ಕೋರ್ಟ್ ನಲ್ಲೇ ಗೊತ್ತಾಗುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ