ನೀತಿ ಒಪ್ಪದಿದ್ರೆ ವಾಟ್ಸ್ಆ್ಯಪ್ ಸೇರಬೇಡಿ: ಹೈಕೋರ್ಟ್
Team Udayavani, Jan 19, 2021, 6:55 AM IST
ಹೊಸದಿಲ್ಲಿ: ಹೊಸ ನೀತಿಯನ್ನು ಒಪ್ಪಿಕೊಳ್ಳದ ಪಕ್ಷದಲ್ಲಿ ಯಾವುದೇ ಕಾರಣ ಕ್ಕೂ ವಾಟ್ಸ್ಆ್ಯಪ್ಗೆ ಸೇರುವುದು ಬೇಡ ಎಂದು ದಿಲ್ಲಿ ಹೈಕೋರ್ಟ್ ಸೂಚಿಸಿದೆ.
ವಾಟ್ಸ್ಆ್ಯಪ್ ಡೇಟಾ ಅಸುರಕ್ಷತೆ ಸಂಬಂಧ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಪೀಠ, “ಅದೊಂದು ಖಾಸಗಿ ಆ್ಯಪ್. ಅದರ ನೀತಿಗಳನ್ನು ಒಪ್ಪುವುದು- ಬಿಡುವುದು ಸ್ವಯಂಪ್ರೇರಣೆಗೆ ಬಿಟ್ಟ ವಿಚಾರ. ವಾಟ್ಸ್ ಆ್ಯಪ್ನ ಹೊಸ ನೀತಿಯನ್ನು ನೀವು ಒಪ್ಪಿ ಕೊಳ್ಳದೆ ಇದ್ದರೆ, ಅದರಲ್ಲಿ ಖಾತೆ ಹೊಂದುವ ಅಗತ್ಯವಿಲ್ಲ’ ಎಂದು ತಿಳಿಸಿದೆ.
ಬಹುತೇಕ ಆ್ಯಪ್ಗ್ಳ ನೀತಿ- ನಿಬಂಧನೆಗ ಳನ್ನು ಓದಿದರೆ, ನೀವು ಯಾವ್ಯಾವ ಸಂಗತಿ ಗಳನ್ನು ಒಪ್ಪಿಕೊಂಡಿದ್ದೀರಿ ಎಂದು ಭಾರೀ ಆಶ್ಚರ್ಯವಾಗುತ್ತದೆ. ಗೂಗಲ್ ಮ್ಯಾಪ್ ಕೂಡ ನಿಮ್ಮ ಡೇಟಾಗಳನ್ನು ಕಲೆಹಾಕಿ, ಸಂಗ್ರಹಿಸಿಟ್ಟುಕೊಂಡಿದೆ ಎಂದು ಆತಂಕ ಸೂಚಿಸಿದೆ. ಆನ್ಲೈನ್ ಡೇಟಾ ಸೋರಿಕೆ ಸಂಬಂಧ ಪರಿಶೀಲನೆ ಕೈಗೊಳ್ಳುವಂತೆ ಹೈಕೋರ್ಟ್ ನೀಡಿರುವ ಸಲಹೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ.
ವಾಟ್ಸ್ ಆ್ಯಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಗೂಗಲ್ನಂಥ ಸರ್ಚ್ ಎಂಜಿನ್ಗಳಲ್ಲಿ ಸಿಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಬೆಳಕಿಗೆ ಬಂದಿದೆ. ಸೈಬರ್ ಸುರಕ್ಷತೆ ಕುರಿತು ನಡೆಸಿದ ಸಂಶೋಧನೆಯಲ್ಲಿ ವಿಚಾರ ಗೊತ್ತಾಗಿದೆ. ಈ ನಡುವೆ ಕೇವಿನ್ ಭಾರ್ತಿ ಮಿತ್ತಲ್ ತಯಾರಿಸಿದ್ದ ಹೈಕ್ ಅನ್ನು ಕಾರಣವಿಲ್ಲದೆ ಗೂಗಲ್ ಪ್ಲೇಸ್ಟೋರ್ನಿಂದ ಕಿತ್ತೂಗೆದಿರು ವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ