ಹಾದಿಯಾ ಮದುವೆ ಬಗ್ಗೆ ಎನ್ಐಎ ತನಿಖೆ ಬೇಕಿಲ್ಲ
Team Udayavani, Jan 24, 2018, 6:50 AM IST
ನವದೆಹಲಿ: “ವಿವಾಹ ಎಂಬುದನ್ನು ಯಾವುದೇ ಕ್ರಿಮಿನಲ್ ಕೃತ್ಯ ಅಥವಾ ಸಂಚಿನ ವ್ಯಾಪ್ತಿಯಿಂದ ಹೊರಗಿಡಬೇಕು. ಒಬ್ಬ ಪುರುಷ ಮತ್ತು ಮಹಿಳೆ ತಮ್ಮಿಚ್ಛೆಯಂತೆ ಮದುವೆಯಾಗಿರುವಾಗ ಅದರ ಬಗ್ಗೆ ತನಿಖೆ ನಡೆಸಲು ಹೋಗಬಾರದು. ಹೋದರೆ, ಇಡೀ ದೇಶಕ್ಕೇ ಕೆಟ್ಟ ಸಂದೇಶ ನೀಡಿದಂತಾಗುತ್ತದೆ.’
ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಕೇರಳದ ಹಾದಿಯಾ- ಶಫೀನ್ ಜಹಾನ್ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿ ಪ್ರಾಯವಿದು. ಮಂಗಳವಾರ ವಿಚಾರಣೆ ನಡೆ ಸಿದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ, “ಹಾದಿಯಾ ತನ್ನಿಚ್ಛೆಯಂತೆಯೇ ಶಫೀನ್ ಜಹಾನ್ನನ್ನು ಮದುವೆಯಾಗಿ ದ್ದಾಳೆ. ಹೀಗಾಗಿ ಇವರ ವಿವಾಹಕ್ಕೆ ಸಂಬಂ ಧಿಸಿ ಎನ್ಐಎ ತನಿಖೆ ಅಗತ್ಯವಿಲ್ಲ’ ಎಂದಿದೆ. ಕೇರಳದಲ್ಲಿ ನಡೆಯುತ್ತಿದೆ ಎನ್ನಲಾದ ಲವ್ ಜಿಹಾದ್ ಪ್ರಕರಣಗಳಿಗೆ ಸಂಬಂ ಧಿಸಿ ಎನ್ಐಎ ತನಿಖೆ ಮುಂದುವರಿಸಲಿ ಎಂದಿದೆ.
ವಿಚಾರಣೆ ವೇಳೆ, “ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ’ ಎಂದು ಎನ್ಐಎ ಮಾಹಿತಿ ನೀಡಿತು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, “ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಬ್ಬ ಪುರುಷ- ಮಹಿಳೆಯ ವೈವಾಹಿಕ ಸ್ಥಿತಿ ಕುರಿತು ತನಿಖೆ ನಡೆಸಬೇಡಿ. ಹಾದಿಯಾಳೇ ತನ್ನಿಚ್ಛೆಯಂ ತೆಯೇ ಜಹಾನ್ನ ಕೈಹಿಡಿದಿರುವಾಗ ವಿವಾಹದ ನ್ಯಾಯಸಮ್ಮತತೆಯನ್ನು ಪ್ರಶ್ನಿಸಬಾರದು’ ಎಂದು ಹೇಳಿತು. ಜತೆಗೆ, ವಿವಾಹ ಅನೂರ್ಜಿತಗೊಳಿಸಿದ ಹೈಕೋರ್ಟ್ ನಿರ್ಧಾರ ಸರಿಯೇ, ತಪ್ಪೇ ಎಂದು ನಾವು ನಿರ್ಧರಿಸುತ್ತೇವೆ ಎಂದೂ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ