ಜನರ ರಾಷ್ಟ್ರಪ್ರೇಮ ಪರೀಕ್ಷೆ ಬೇಡ: ಕಮಲ್
Team Udayavani, Oct 26, 2017, 6:35 AM IST
ಚೆನ್ನೈ: ಅನಗತ್ಯ ಸಂದರ್ಭಗಳಲ್ಲಿ ಮತ್ತು ಇಷ್ಟ ಬಂದ ಸ್ಥಳಗಳಲ್ಲಿ ಜನರ ರಾಷ್ಟ್ರಪ್ರೇಮವನ್ನು ಪರೀಕ್ಷಿಸುವ ಪದ್ಧತಿ ಸಲ್ಲದು. ಹೀಗೆಂದು ಬಹುಭಾಷಾ ತಾರೆ ಕಮಲ್ಹಾಸನ್ ಟ್ವೀಟ್ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸ ಬೇಕೆಂದು ಆದೇಶ ಮರು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಅವರು ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ. “ಕೇಂದ್ರ ಸರಕಾರ ರಾಷ್ಟ್ರಗೀತೆಯನ್ನು ತನ್ನ ವಾಹಿನಿ ಯಾದ ದೂರದರ್ಶನದಲ್ಲಿ ಮೊಳಗಿಸಲಿ. ಆದರೆ, ಅದನ್ನು ನಾಗರಿಕರ ಮೇಲೆ ಬಲ ವಂತವಾಗಿ ಹೊರಿಸುವುದು ತಪ್ಪು. ತನ್ನ ಮಟ್ಟಿಗೆ ಹೇಳುವುದಾದರೆ ನನ್ನ ದೇಶಭಕ್ತಿಯನ್ನು ಎಲ್ಲೆಂದರಲ್ಲಿ ಪರೀಕ್ಷೆಗೊಳಪಡಿಸುವುದನ್ನು ನಾನು ಒಪ್ಪುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಸ್ವಯಂಪ್ರೇರಿತ ದೂರು: ಡೆಂ à ಜ್ವರಕ್ಕೆ ಮದ್ದು ಎಂದು ಹೇಳಲಾಗಿರುವ ನಿಳವೆಂಬು ಕುಡಿನೀರ್ (ಸಿದೌœಷಧ) ಅನ್ನು ಯಾರಿಗೂ ಸಲಹೆ ನೀಡಬೇಡಿ ಎಂದು ಟ್ವೀಟ್ ಮಾಡಿದ ಕಮಲ್ ವಿರುದ್ಧ ದೂರು ದಾಖಲಿಸಲು ಮದ್ರಾಸ್ ಹೈಕೋರ್ಟ್ ಚೆನ್ನೈ ಪೊಲೀಸರಿಗೆ ಆದೇಶ ನೀಡಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಹೈಕೋರ್ಟ್ಗೆ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್