ಅಸುನೀಗಿದ ವ್ಯಕ್ತಿಯ ಶವ ಅಧ್ಯಯನ
Team Udayavani, May 23, 2020, 8:16 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್ ದಿಂದಾಗಿ ಸತ್ತ ವ್ಯಕ್ತಿಯ ಶವದ ಒಳಗೆ ಎಷ್ಟು ಸಮಯದ ತನಕ ವೈರಸ್ ಜೀವಂತವಾಗಿರುತ್ತದೆ ಹಾಗೂ ವೈರಸ್ ಅಂಗಾಂಗದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಕಂಡು ಹಿಡಿಯುವುದಕ್ಕಾಗಿ ಅಧ್ಯಯನ ನಡೆಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಧಿ ವಿಜ್ಞಾನ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ತಿಳಿಸಿದ್ದಾರೆ. “ಅಧ್ಯಯನ ನಡೆಸುವ ಮೊದಲು ಕಾನೂನಾತ್ಮಕ ಸಮ್ಮತಿಯನ್ನು ಪಡೆಯಲಾಗುತ್ತದೆ, ರೋಗ ಶಾಸ್ತ್ರ ಹಾಗೂ ಸೂಕ್ಷ್ಮ ಜೀವ ವಿಜ್ಞಾನದಂತಹ ಇನ್ನೂ ಅನೇಕ ವಿಜ್ಞಾನ ವಿಭಾಗಗಳು ಅಧ್ಯಯನದಲ್ಲಿ ಭಾಗಿಯಾಗಲಿವೆ. ಕೋವಿಡ್ ರೋಗಿಯ ದೇಹವನ್ನು ಪ್ರವೇಶಿಸಿದ ಬಳಿಕ ಏನು ಮಾಡುತ್ತದೆ, ದೇಹ ದೊಳಗೆ ಹೇಗೆಲ್ಲ ವರ್ತಿಸುತ್ತದೆ, ಯಾವ ರೀತಿಯಲ್ಲಿ ಅಂಗಾಂಗ ಹಾನಿ ಮಾಡುತ್ತದೆ, ರೋಗಿ ಸತ್ತ ನಂತರವೂ ಎಷ್ಟು ಸಮಯ ವೈರಸ್ ಜೀವಂತವಾಗಿರುತ್ತದೆ ಎನ್ನುವಂತಹ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಿದೆ’ ಎಂದು ಗುಪ್ತಾ ವಿವರಿಸಿದರು.
ಶವಗಳಿಂದ ಸೋಂಕು ಹರಡಲ್ಲ
ಮೃತದೇಹಗಳಿಂದ ಕೋವಿಡ್ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಹೀಗಾಗಿ ಮುಂಬೈ ನಗರ ಪಾಲಿಕೆಗೆ (ಬಿಎಂಸಿ) ಕೋವಿಡ್ ದಿಂದ ಸಾವನ್ನಪ್ಪುವ ರೋಗಿಗಳ ಶವಗಳನ್ನು ಯಾವುದೇ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿ ಸುವ ಅಧಿಕಾರ ಇದೆ ಎಂದು ಬಾಂಬೆ ಹೈ ಕೋರ್ಟ್ ತಿಳಿಸಿದೆ. ಕೋವಿಡ್ ಸೋಂಕಿನಿಂದ ಮೃತಪಡುವ ರೋಗಿಗಳ ಶವಗಳನ್ನು ಅಂತ್ಯಕ್ರಿಯೆ ನಡೆಸಲು ಮುಂಬೈ ನಗರ ಪಾಲಿಕೆಯು, 20 ಸ್ಮಶಾನ ಭೂಮಿಗಳನ್ನು ಗುರುತಿಸಿತ್ತು. ಈ ಕ್ರಮದಿಂದ ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಈ ಸ್ಮಶಾನ ಭೂಮಿಗಳಲ್ಲಿ ಶವಗಳ ಅಂತ್ಯಕ್ರಿಯೆಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ