ಪ್ಲಾಸ್ಟಿಕ್‌ ಸಂಗ್ರಹಿಸಿದರೆ ಇಲ್ಲಿ ಊಟ, ಬ್ರೇಕ್‌ ಫಾಸ್ಟ್‌

ಹೊಟ್ಟೆ ತುಂಬಿಸುತ್ತಿದೆ ಯಾರೋ ಬಿಸಾಕಿದ ಪ್ಲಾಸ್ಟಿಕ್‌!

Team Udayavani, Jul 19, 2019, 9:27 PM IST

Meals

ಮಣಿಪಾಲ: ಪ್ಲಾಸ್ಟಿಕ್‌ ಮನೆಗೆ ಬಂತೇನೋ ನಿಜ, ಆದರೆ ಅದನ್ನು ವಿಲೇವಾರಿ ಮಾಡೋದೇ ದೊಡ್ಡ ತಲೆ ನೋವು. ಅಂಗಡಿಗಳಿಗೆ ದಿನಸು ಅಥವ ಇತರ ಸಾಮಗ್ರಿಗಳ ಅಗತ್ಯಕ್ಕೆ ತೆರಳಿದಾಗ‌ ಬಹುತೇಕರು ಕೈ ಚೀಲ ತೆಗೆದುಕೊಂಡು ಹೋಗಲು ಮರೆತು ಬಿಡುತ್ತಾರೆ. ಇದರಿಂದ ಅಂಗಡಿಯಾತನೇ ಪ್ಲಾಸ್ಟಿಕ್‌ ಚೀಲವನ್ನು ಕೈಗಿತ್ತು ಅದರಲ್ಲಿ ಸಾಮಗ್ರಿ ತುಂಬಿಸಿ ಕೊಡುತ್ತಾನೆ, ಅಂಗಡಿಯಾತನಿಗೂ, ಗ್ರಾಹನಿಗೂ ಇಲ್ಲಿ ಬೇರೆ ಆಯ್ಕೆ ಇಲ್ಲ.

ಹೀಗೆ ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಮನೆಯಲ್ಲಿ ಪ್ಲಾಸ್ಟಿಕ್‌ಗಳು ಬಂದು ತುಂಬುತ್ತಲೆ ಇರುತ್ತದೆ. ಹಾಗಾದರೆ ಇವುಗಳನ್ನು ವಿಲೇವಾರಿ ಮಾಡುವುದೇ ಬಹುದೊಡ್ಡ ಪ್ರಶ್ನೆಯಾಗಿದೆ. ಮಲೆಗಾಲದಲ್ಲಿ ನೀರಿಗೆ ಬಿಡುವವರು ಕೆಲವರಾದರೆ, ಬೆಂಕಿಗೆ ಸುಡುವವರು ಹಲವರು. ಇನ್ನು ನಗರ ಪಟ್ಟಣಗಳಲ್ಲಿ ಸ್ಥಳೀಯಾಡಳಿತಗಳ ವಾಹನಗಳು ಬಂದು ತುಂಬಿಸಿಕೊಂಡು ಹೋಗುತ್ತದೆ. ನಾವು ಅದಕ್ಕೆ ನಿಗದಿ ಹಣವನ್ನು ನೀಡಿದರೆ ಆಯ್ತು. ಇಷ್ಟಕ್ಕೆ ಮನೆಯವರ ಪಾತ್ರ ಮುಗಿಯಿತು.

ಇನ್ನು ಪ್ರತಿ ಮನೆ, ನಗರಗಳಿಂದ ತ್ಯಾಜ್ಯ ರೂಪದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿದ ಸ್ಥಳೀಯಾಡಳಿತ ಅದನ್ನು ಕೊಂಡು ಹೋಗಿ ಒಂದು ಕಡೆ ಡಂಪ್‌ ಮಾಡಿ ಬಿಡುತ್ತಾರೆ. ಇದರಿಂದ ತ್ಯಾಜ್ಯರೂಪದ ಪ್ಲಾಸ್ಟಿಕ್‌ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರವಾಯಿತೇ ಹೊರತು ವಿಲೇವಾರಿ ಮಾತ್ರ ಆಗಿಲ್ಲ.

ಇದಿಷ್ಟು ಒಂದು ಕಥೆ…
ಇನ್ನು ಒಂದು ಕಡೆ ಬಡವರು ಊಟಕ್ಕೆ ಹರಸಾಹಸಪಡಬೇಕಾದ ಸನ್ನಿವೇಶ ದೇಶದ ಕೆಲವು ಕಡೆಗಳಲ್ಲಿ ಇನ್ನೂ ಇದೆ. ಒಂದು ವೇಳೆ ಪ್ಲಾಸ್ಟಿಕ್‌ ತಿಂದು ಹೊಟ್ಟೆ ತುಂಬಿಸಿಕೊಳ್ಳಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಪ್ರಶ್ನೆ ಕೆಲವರಿಗಾದರೂ ಕಾಡಬಹುದು.

ಉತ್ತರ ಭಾರತದ ಈ ಒಂದು ರಾಜ್ಯ ಪ್ಲಾಸ್ಟಿಕ್‌ ಮತ್ತು ಬಡತನದ ಸಮಸ್ಯೆಯನ್ನು ಒಂದೇ ಕಲ್ಲಿನಿಂದ ಹೊರೆದುರುಳಿಸುವ ಯೋಜನೆ ಹಾಕಿಕೊಂಡಿದ್ದು, ಕಾರ್ಯಗತವೂ ಆಗಿದೆ. ಹಸಿದವರಿಗೆ ಅನುಕೂಲ ಮಾಡಿಕೊಡುವ ಯೋಜನೆಯೊಂದನ್ನು ಪರಿಚಯಿಸಿದೆ. ಹಾಗಾದರೆ ಪ್ಲಾಸ್ಟಿಕ್‌ ತಿಂದು ಬದುಕಬಹುದಾ? ಅಲ್ಲ. ಛತ್ತೀಘಡ್‌ ನ‌ ಸರ್ಗುಜಾ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿಕೊಟ್ಟರೆ ಊಟ ಉಚಿತವಾಗಿ ದೊರೆಯಲಿದೆ. ಜಿಲ್ಲೆಯ ಅಂಬಿಕಾಪುರ್‌ ನಗರದಲ್ಲಿ ವಿಶೇಷ ಕಾರ್ಯವೊಂದು ನಡೆಯುತ್ತಿದೆ.

ಏನದು ಯೋಜನೆ?
ಜಿಲ್ಲೆಯ ಮಹಾನಗರ ಪಾಲಿಕೆ ಅಧಿಕಾರಿಗಳು ಹೊಸ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಚಿಂದಿ ಹಾಯುವವರು, ನಿರ್ಗತಿಕರು ಅಂಬಿಕಾಪುರ ನಗರದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿಕೊಟ್ಟರೆ ಅದಕ್ಕೆ ಪ್ರತಿಯಾಗಿ ಉಚಿತ ಆಹಾರವನ್ನು ನೀಡಲಾಗುತ್ತದೆ. 1 ಕೆ.ಜಿ. ಪ್ಲಾಸ್ಟಿಕ್‌ ಸಂಗ್ರಹ ಮಾಡಿದರೆ ಊಟ, ಅರ್ಧ ಕೇಜಿ ಪ್ಲಾಸ್ಟಿಕ್‌ ಸಂಗ್ರಹಿಸಿದವರಿಗೆ ಉಪಹಾರವನ್ನು ಉಚಿತವಾಗಿ ಪೂರೈಸಲಾಗುತ್ತದೆ.

ಇದಕ್ಕಾಗಿ ಸಿಟಿ ಬಸ್‌ ಸ್ಟಾಂಡ್‌ ಪಕ್ಕದಲ್ಲೇ ಕ್ಯಾಂಟೀನ್‌ ತೆರೆಯಲಾಗಿದೆ. ಈ ರೀತಿಯಾಗಿ ಸಂಗ್ರಹಿಸಿದ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಿಸಲಾಗುತ್ತದೆ. ಈಗಾಘಲೆ ಗಾಡ್‌ಪುರ್‌ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಮರು ಬಳಸಿ ರಸ್ತೆಯನ್ನು ನಿರ್ಮಿಸಿತ್ತು.

ಪಾಲಿಕೆ ಆಹಾರದ ಜತೆಗೆ 100 ನಿರ್ಗತಿಕರಿಗೆ ವಸತಿಯನ್ನೂ ನಿರ್ಮಿಸಿಕೊಡುವ ಯೋಜನೆ ಹಾಕಿಕೊಂಡಿದೆ. ಆಹಾರ ಪೂರೈಕೆಗಾಗಿ ಪಾಲಿಕೆ 5.5 ಲಕ್ಷ ರೂ. ಅನ್ನು ತನ್ನ ಬಜೆಟ್‌ ನಲ್ಲಿ ಮೀಸಲಿಟ್ಟಿದೆ. ಈ ಪ್ಲಾಸ್ಟಿಕ್‌ ನಿಂದ ನಗರವನ್ನು ಮುಕ್ತಗೊಳಿಸುವ ಯೋಜನೆ ಇದಾಗಿದ್ದು, ಸ್ವಚ್ಛ ಭಾರತ ಮಿಶನ್‌ನಲ್ಲಿ ಇದು ಸೇರಿಕೊಂಡಿದೆ.

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

1-wwewqe

Lok Sabha ಅಖಾಡಕ್ಕೆ ಲಾಲು ಪ್ರಸಾದ್‌ ಪುತ್ರಿ ಡಾ| ರೋಹಿಣಿ ಹೆಜ್ಜೆ

RBI

Cyber ​​attack: ಭದ್ರತೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

K-Kavitha

ED; ದಿಲ್ಲಿ ಲಿಕ್ಕರ್‌ ಕೇಸ್‌ ಡೀಲ್‌ಗೆ ಕೆಸಿಆರ್‌ ಪುತ್ರಿ ಕವಿತಾ ಸಂಚು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.