ಪ್ಲಾಸ್ಟಿಕ್‌ ಸಂಗ್ರಹಿಸಿದರೆ ಇಲ್ಲಿ ಊಟ, ಬ್ರೇಕ್‌ ಫಾಸ್ಟ್‌

ಹೊಟ್ಟೆ ತುಂಬಿಸುತ್ತಿದೆ ಯಾರೋ ಬಿಸಾಕಿದ ಪ್ಲಾಸ್ಟಿಕ್‌!

Team Udayavani, Jul 19, 2019, 9:27 PM IST

Meals

ಮಣಿಪಾಲ: ಪ್ಲಾಸ್ಟಿಕ್‌ ಮನೆಗೆ ಬಂತೇನೋ ನಿಜ, ಆದರೆ ಅದನ್ನು ವಿಲೇವಾರಿ ಮಾಡೋದೇ ದೊಡ್ಡ ತಲೆ ನೋವು. ಅಂಗಡಿಗಳಿಗೆ ದಿನಸು ಅಥವ ಇತರ ಸಾಮಗ್ರಿಗಳ ಅಗತ್ಯಕ್ಕೆ ತೆರಳಿದಾಗ‌ ಬಹುತೇಕರು ಕೈ ಚೀಲ ತೆಗೆದುಕೊಂಡು ಹೋಗಲು ಮರೆತು ಬಿಡುತ್ತಾರೆ. ಇದರಿಂದ ಅಂಗಡಿಯಾತನೇ ಪ್ಲಾಸ್ಟಿಕ್‌ ಚೀಲವನ್ನು ಕೈಗಿತ್ತು ಅದರಲ್ಲಿ ಸಾಮಗ್ರಿ ತುಂಬಿಸಿ ಕೊಡುತ್ತಾನೆ, ಅಂಗಡಿಯಾತನಿಗೂ, ಗ್ರಾಹನಿಗೂ ಇಲ್ಲಿ ಬೇರೆ ಆಯ್ಕೆ ಇಲ್ಲ.

ಹೀಗೆ ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಮನೆಯಲ್ಲಿ ಪ್ಲಾಸ್ಟಿಕ್‌ಗಳು ಬಂದು ತುಂಬುತ್ತಲೆ ಇರುತ್ತದೆ. ಹಾಗಾದರೆ ಇವುಗಳನ್ನು ವಿಲೇವಾರಿ ಮಾಡುವುದೇ ಬಹುದೊಡ್ಡ ಪ್ರಶ್ನೆಯಾಗಿದೆ. ಮಲೆಗಾಲದಲ್ಲಿ ನೀರಿಗೆ ಬಿಡುವವರು ಕೆಲವರಾದರೆ, ಬೆಂಕಿಗೆ ಸುಡುವವರು ಹಲವರು. ಇನ್ನು ನಗರ ಪಟ್ಟಣಗಳಲ್ಲಿ ಸ್ಥಳೀಯಾಡಳಿತಗಳ ವಾಹನಗಳು ಬಂದು ತುಂಬಿಸಿಕೊಂಡು ಹೋಗುತ್ತದೆ. ನಾವು ಅದಕ್ಕೆ ನಿಗದಿ ಹಣವನ್ನು ನೀಡಿದರೆ ಆಯ್ತು. ಇಷ್ಟಕ್ಕೆ ಮನೆಯವರ ಪಾತ್ರ ಮುಗಿಯಿತು.

ಇನ್ನು ಪ್ರತಿ ಮನೆ, ನಗರಗಳಿಂದ ತ್ಯಾಜ್ಯ ರೂಪದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿದ ಸ್ಥಳೀಯಾಡಳಿತ ಅದನ್ನು ಕೊಂಡು ಹೋಗಿ ಒಂದು ಕಡೆ ಡಂಪ್‌ ಮಾಡಿ ಬಿಡುತ್ತಾರೆ. ಇದರಿಂದ ತ್ಯಾಜ್ಯರೂಪದ ಪ್ಲಾಸ್ಟಿಕ್‌ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರವಾಯಿತೇ ಹೊರತು ವಿಲೇವಾರಿ ಮಾತ್ರ ಆಗಿಲ್ಲ.

ಇದಿಷ್ಟು ಒಂದು ಕಥೆ…
ಇನ್ನು ಒಂದು ಕಡೆ ಬಡವರು ಊಟಕ್ಕೆ ಹರಸಾಹಸಪಡಬೇಕಾದ ಸನ್ನಿವೇಶ ದೇಶದ ಕೆಲವು ಕಡೆಗಳಲ್ಲಿ ಇನ್ನೂ ಇದೆ. ಒಂದು ವೇಳೆ ಪ್ಲಾಸ್ಟಿಕ್‌ ತಿಂದು ಹೊಟ್ಟೆ ತುಂಬಿಸಿಕೊಳ್ಳಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಪ್ರಶ್ನೆ ಕೆಲವರಿಗಾದರೂ ಕಾಡಬಹುದು.

ಉತ್ತರ ಭಾರತದ ಈ ಒಂದು ರಾಜ್ಯ ಪ್ಲಾಸ್ಟಿಕ್‌ ಮತ್ತು ಬಡತನದ ಸಮಸ್ಯೆಯನ್ನು ಒಂದೇ ಕಲ್ಲಿನಿಂದ ಹೊರೆದುರುಳಿಸುವ ಯೋಜನೆ ಹಾಕಿಕೊಂಡಿದ್ದು, ಕಾರ್ಯಗತವೂ ಆಗಿದೆ. ಹಸಿದವರಿಗೆ ಅನುಕೂಲ ಮಾಡಿಕೊಡುವ ಯೋಜನೆಯೊಂದನ್ನು ಪರಿಚಯಿಸಿದೆ. ಹಾಗಾದರೆ ಪ್ಲಾಸ್ಟಿಕ್‌ ತಿಂದು ಬದುಕಬಹುದಾ? ಅಲ್ಲ. ಛತ್ತೀಘಡ್‌ ನ‌ ಸರ್ಗುಜಾ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿಕೊಟ್ಟರೆ ಊಟ ಉಚಿತವಾಗಿ ದೊರೆಯಲಿದೆ. ಜಿಲ್ಲೆಯ ಅಂಬಿಕಾಪುರ್‌ ನಗರದಲ್ಲಿ ವಿಶೇಷ ಕಾರ್ಯವೊಂದು ನಡೆಯುತ್ತಿದೆ.

ಏನದು ಯೋಜನೆ?
ಜಿಲ್ಲೆಯ ಮಹಾನಗರ ಪಾಲಿಕೆ ಅಧಿಕಾರಿಗಳು ಹೊಸ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಚಿಂದಿ ಹಾಯುವವರು, ನಿರ್ಗತಿಕರು ಅಂಬಿಕಾಪುರ ನಗರದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿಕೊಟ್ಟರೆ ಅದಕ್ಕೆ ಪ್ರತಿಯಾಗಿ ಉಚಿತ ಆಹಾರವನ್ನು ನೀಡಲಾಗುತ್ತದೆ. 1 ಕೆ.ಜಿ. ಪ್ಲಾಸ್ಟಿಕ್‌ ಸಂಗ್ರಹ ಮಾಡಿದರೆ ಊಟ, ಅರ್ಧ ಕೇಜಿ ಪ್ಲಾಸ್ಟಿಕ್‌ ಸಂಗ್ರಹಿಸಿದವರಿಗೆ ಉಪಹಾರವನ್ನು ಉಚಿತವಾಗಿ ಪೂರೈಸಲಾಗುತ್ತದೆ.

ಇದಕ್ಕಾಗಿ ಸಿಟಿ ಬಸ್‌ ಸ್ಟಾಂಡ್‌ ಪಕ್ಕದಲ್ಲೇ ಕ್ಯಾಂಟೀನ್‌ ತೆರೆಯಲಾಗಿದೆ. ಈ ರೀತಿಯಾಗಿ ಸಂಗ್ರಹಿಸಿದ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಿಸಲಾಗುತ್ತದೆ. ಈಗಾಘಲೆ ಗಾಡ್‌ಪುರ್‌ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಮರು ಬಳಸಿ ರಸ್ತೆಯನ್ನು ನಿರ್ಮಿಸಿತ್ತು.

ಪಾಲಿಕೆ ಆಹಾರದ ಜತೆಗೆ 100 ನಿರ್ಗತಿಕರಿಗೆ ವಸತಿಯನ್ನೂ ನಿರ್ಮಿಸಿಕೊಡುವ ಯೋಜನೆ ಹಾಕಿಕೊಂಡಿದೆ. ಆಹಾರ ಪೂರೈಕೆಗಾಗಿ ಪಾಲಿಕೆ 5.5 ಲಕ್ಷ ರೂ. ಅನ್ನು ತನ್ನ ಬಜೆಟ್‌ ನಲ್ಲಿ ಮೀಸಲಿಟ್ಟಿದೆ. ಈ ಪ್ಲಾಸ್ಟಿಕ್‌ ನಿಂದ ನಗರವನ್ನು ಮುಕ್ತಗೊಳಿಸುವ ಯೋಜನೆ ಇದಾಗಿದ್ದು, ಸ್ವಚ್ಛ ಭಾರತ ಮಿಶನ್‌ನಲ್ಲಿ ಇದು ಸೇರಿಕೊಂಡಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.