ಖಾಕಿ ಗೌರವಿಸಿ, ಯೋಗ, ಪ್ರಾಣಾಯಾಮ ಮಾಡಿ
ಯುವ ಐಪಿಎಸ್ ಅಧಿಕಾರಿಗಳಿಗೆ ಮೋದಿ ಕಿವಿಮಾತು
Team Udayavani, Sep 5, 2020, 6:30 AM IST
ಹೊಸದಿಲ್ಲಿ: ನಿಮ್ಮ ವೃತ್ತಿಯನ್ನು, ಸಮವಸ್ತ್ರವನ್ನು ಗೌರವಿಸಿ. ಕೆಲಸದ ಒತ್ತಡ ಹೆಚ್ಚಿದರೆ ಯೋಗ, ಪ್ರಾಣಾಯಾಮ ಮಾಡಿ. ದೇಶದ ಯುವ ಐಪಿಎಸ್ ಅಧಿಕಾರಿಗಳಿಗೆ ಈ ರೀತಿಯ ಸಲಹೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ. ಶುಕ್ರವಾರ ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯ ದೀಕ್ಷಂತ್ ಪರೇಡ್ ಕಾರ್ಯಕ್ರಮದಲ್ಲಿ ಐಪಿಎಸ್ ಪ್ರೊಬೆಷನರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವ ಅಧಿಕಾರಿಗಳಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ.
ಅನಿರೀಕ್ಷಿತವಾದದ್ದನ್ನು ಎದುರಿಸಬೇಕಾದಂತಹ ವೃತ್ತಿ ನಿಮ್ಮದು. ಯಾವಾಗಲೂ ನೀವು ಅಲರ್ಟ್ ಆಗಿರಬೇಕಾಗುತ್ತದೆ. ಒತ್ತಡವೂ ಹೆಚ್ಚಿರುತ್ತದೆ. ಹಾಗಾಗಿ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರೆ ಒಳ್ಳೆಯದು ಎಂದು ಮೋದಿ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಯುವಕರು ತಪ್ಪು ಹಾದಿ ಹಿಡಿಯುವುದನ್ನು ಆರಂಭಿಕ ಹಂತದಲ್ಲೇ ನಾವು ತಡೆಯಬೇಕು. ಈ ಉದ್ದೇಶಕ್ಕಾಗಿಯೇ ಆ ಪ್ರದೇಶದಲ್ಲಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಅಲ್ಲಿನ ಮಹಿಳೆಯರನ್ನು ಸೇರಿಸಿಕೊಂಡು ಇಂತಹ ಕೆಲಸ ಮಾಡಲು ಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.
ಸಿಂಗಂ ಆಗಬೇಕಾಗಿಲ್ಲ
“ಸಿಂಗಂ’ನಂಥ ಸಿನಿಮಾಗಳನ್ನು ನೋಡಿದ ಮೇಲೆ ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಬಗ್ಗೆಯೇ ಬೇರೆ ರೀತಿ ಯೋಚಿಸಲು ಆರಂಭಿಸು ತ್ತಾರೆ. ಅಂಥದ್ದನ್ನು ದಯವಿಟ್ಟು ಮಾಡಬೇಡಿ. ಅದರಿಂದ ಉತ್ತಮ ಕೆಲಸಗಳೂ ನಿರ್ಲಕ್ಷ್ಯಕ್ಕೊಳಗಾಬಹುದು ಎಂದು ಮೋದಿ ಹೇಳಿದ್ದಾರೆ.
ಸಲಹೆಗಳೇನು?
ಹೆಚ್ಚು ಒತ್ತಡದಲ್ಲಿ ಕಾರ್ಯನಿರ್ವಹಿಸು ವವರು ಯೋಗ ಮತ್ತು ಪ್ರಾಣಾಯಾಮದ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು.
ಕೊರೊನಾ ಲಾಕ್ಡೌನ್ನ ಸಮಯದಲ್ಲಿ ಪೊಲೀಸ್ ಪಡೆ ಮಾಡಿ ರುವ ಉತ್ತಮ ಕಾರ್ಯಗಳಿಂದಾಗಿ ಖಾಕಿ ಸಮವಸ್ತ್ರದ ಮಾನವೀಯ ಮುಖವು ಬಹಿರಂಗಗೊಂಡಿದೆ. ಅದು ಜನರ ಸ್ಮರಣೆಯಲ್ಲಿ ಸದಾ ಉಳಿಯಲಿದೆ.
ಯುವ ಅಧಿಕಾರಿಗಳಾದ ನೀವು ನಿಮ್ಮ ಸಮವಸ್ತ್ರಕ್ಕಿರುವ ಅಧಿಕಾರವನ್ನು ನೋಡುವ ಬದಲು, ಆ ಖಾಕಿ ಸಮವಸ್ತ್ರವನ್ನು ಗೌರವಿಸಿ. ಅದರ ಬಗ್ಗೆ ಹೆಮ್ಮೆಪಡಿ. ಯಾವತ್ತೂ ಆ ಖಾಕಿ ಮೇಲಿನ ಗೌರವ ಕಳೆದುಕೊಳ್ಳಬೇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!