ಘಾಟ್ ರಸ್ತೆಯಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ : ಪ್ರವಾಸಿಗರಲ್ಲಿ ಗೋವಾ ಸಿಎಂ ಮನವಿ
ಸಹ್ಯಾದ್ರಿ ಘಾಟ್ ಅನ್ನು ನಾವೆಲ್ಲರೂ ರಕ್ಷಿಸಬೇಕು....
Team Udayavani, Oct 15, 2022, 4:45 PM IST
ಪಣಜಿ: ಗೋವಾಕ್ಕೆ ಬರುವ ಪ್ರವಾಸಿಗರು ಹಾಗೂ ಗೋವಾ ನಾಗರಿಕರು ಘಾಟ್ ರಸ್ತೆ ಮತ್ತು ಇತರ ಯಾವುದೇ ರಸ್ತೆಗಳಲ್ಲಿ ಪ್ಲಾಸ್ಟಿಕ್ ಅಥವಾ ಯಾವುದೇ ರೀತಿಯ ಕಸವನ್ನು ಎಸೆಯಬೇಡಿ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಹಿಂದಿ ಹೇರಿಕೆ ವಿವಾದ: ಪ್ರಧಾನಿ ಮೋದಿ ಮಧ್ಯ ಪ್ರವೇಶಕ್ಕೆ ಹೆಚ್ ಡಿಕೆ ಆಗ್ರಹ
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಗಡಿ ಭಾಗದಿಂದ ಬರುವಾಗ ಕೇರಿ-ಚೋರ್ಲಾ ಘಾಟ್ ನ ಸೊಬಗನ್ನು ಕಣ್ತುಂಬಿಕೊಂಡು ಅಂಜುಜುಣ ಅಣೆಕಟ್ಟಿನ ಬಳಿಯಿಂದ ವಾಪಸ್ಸಾಗುವಾಗ ರಸ್ತೆಗಳ ತುಂಬೆಲ್ಲಾ ಪ್ಲಾಸ್ಟಿಕ್ ಮತ್ತಿತರ ಕಸದ ರಾಶಿ ಬಿದ್ದಿದೆ. ಈ ರೀತಿಯ ಕಸದಿಂದ ಪರಿಸರ ಮಾಲಿನ್ಯವಾಗುತ್ತದೆ. ಅಲ್ಲದೆ, ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ಎಸೆದರೆ ಅದನ್ನು ಸ್ವಚ್ಛಗೊಳಿಸಲು ಸಹ ಸಾಕಷ್ಟು ಶ್ರಮ ಬೇಕಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದ್ದಾರೆ.
ಗೋವಾಕ್ಕೆ ಬರುವ ಎಲ್ಲಾ ಜನರು ಮತ್ತು ಪ್ರವಾಸಿಗರು ಯಾವುದೇ ರೀತಿಯ ಕಸವನ್ನು ರಸ್ತೆಗಳಲ್ಲಿ ಎಸೆಯದಂತೆ ನಾನು ಮನವಿ ಮಾಡುತ್ತೇನೆ. ನಮ್ಮ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮನವಿ ಮಾಡಿದ್ದಾರೆ.
ಸಹ್ಯಾದ್ರಿ ಘಾಟ್ ಅನ್ನು ನಾವೆಲ್ಲರೂ ರಕ್ಷಿಸಬೇಕು. ವೈವಿಧ್ಯಮಯ ಸಹ್ಯಾದ್ರಿ ಘಾಟ್ಗಳು ನಾವು ಅನುಭವಿಸುವ ಅನೇಕ ದೃಶ್ಯ ಸೌಂದರ್ಯ ಮತ್ತು ಪ್ರಾಣಿಗಳ ಆವಾಸಸ್ಥಾನಗಳನ್ನು ಹೊಂದಿವೆ. ಹೀಗಾಗಿ ಈ ಪ್ರಕೃತಿಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಾವೇ ಹೊರಬೇಕು ಎಂದು ಮುಖ್ಯಮಂತ್ರಿ ಸಾವಂತ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ