ಶಿರಾಡಿ ಘಾಟಲ್ಲಿ ಡಬಲ್ ಡೆಕ್ಕರ್
Team Udayavani, Sep 21, 2017, 9:07 AM IST
ಹೊಸದಿಲ್ಲಿ: ದಶಕಗಳ ಹಿಂದೆ ಬೆಂಗಳೂರು ನಗರದಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ವಿತ್ತು. ಅದೇ ಮಾದರಿಯ ಬಸ್ ಸಂಚಾರ ಮಂಗಳೂರಿನಿಂದ ಬೆಂಗಳೂರಿಗೆ ಶಿರಾಡಿ ಘಾಟ್ ಮೂಲಕ ಸಂಚರಿಸಿದರೆ ಹೇಗೆ ಇರುತ್ತದೆ? ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಅದೇ ಮಾದರಿಯ ಐಷಾರಾಮಿ ಬಸ್ಗಳನ್ನು ಓಡಿಸಲು ಕೇಂದ್ರ ಚಿಂತನೆ ನಡೆಸುತ್ತಿದೆ. ಕರ್ನಾಟಕ ಸೇರಿದಂತೆ ಎಂಟಕ್ಕೂ ಹೆಚ್ಚು ರಾಜ್ಯಗಳಲ್ಲಿ ಇಂಥ ಸೇವೆ ಜಾರಿಯಾಗಲಿದೆ.
ಅತಿ ದೂರದ ಪ್ರಮುಖ ನಗರಗಳಿಗೆ ಈ ಸೇವೆ ಒದಗಿಸುವುದು ಇದರ ಉದ್ದೇಶ. ದೇಶದಲ್ಲಿ ಒಟ್ಟು 75 ಮಾರ್ಗಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಬೆಂಗಳೂರು- ಮಂಗಳೂರು, ದಿಲ್ಲಿ-ಆಗ್ರಾ, ದಿಲ್ಲಿ- ಜೈಪುರ, ಲಕ್ನೋ-ಗೋರಖ್ಪುರ, ವಡೋದರ- ಮುಂಬೈ, ಶ್ರೀನಗರ- ಜಲಂದರ್, ಕಲ್ಲಿಕೋಟೆ-ಕೊಚ್ಚಿ ಹಾಗೂ ವಿಶಾಖಪಟ್ಟಣ -ಭುವನೇಶ್ವರ ಮಹತ್ವದ್ದಾಗಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ. ಅಲ್ಲದೆ, ಈ ಯೋಜನೆಗಾಗಿ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಕೇಂದ್ರ ಹಣಕಾಸಿನ ನೆರವನ್ನೂ ನೀಡಲಿದೆ. ಮೂಲಗಳ ಪ್ರಕಾರ ಮೊದಲ ಮೂರು ವರ್ಷ ಪ್ರತಿ ಕಿಲೋಮೀಟರ್ಗೆ 10 ರೂ.ನಂತೆ ಟಿಕೆಟ್ ದರ ನಿಗದಿಪಡಿಸಲಿದೆ.
ಪ್ರಯಾಣಿಕರ ಪ್ರಮಾಣ ಕುಸಿತ: ರಾಷ್ಟ್ರೀಯ ಹೆದ್ದಾರಿಯಲ್ಲಿ 30,000 ಕಿಲೋಮೀಟರ್ನಲ್ಲಿ ನಡೆಸಲಾದ ಟ್ರಾಫಿಕ್ ಸರ್ವೆಯೊಂದರ ಪ್ರಕಾರ ಸರಕಾರಿ ಬಸ್ಗಳಲ್ಲಿ ಓಡಾಡುವವರ ಸಂಖ್ಯೆ ಕುಸಿತ ಕಂಡಿದೆ. 2016ರಲ್ಲಿ 45%ರಷ್ಟಿತ್ತು. 2017ರಲ್ಲಿ 40%ಕ್ಕೆ ಕುಸಿದಿದೆ. ಕಾರಿನಲ್ಲಿ ಓಡಾಡುವವರ ಸಂಖ್ಯೆ 55%ರಿಂದ 60%ಕ್ಕೆ ಏರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ