ಪೆರಿಯಾರ್ ಅವಹೇಳನ: ರಜನಿಕಾಂತ್ ವಿರುದ್ಧ ಕೇಸ್
Team Udayavani, Jan 17, 2020, 11:46 PM IST
ಚೆನ್ನೈ: ಸಮಾಜ ಸುಧಾರಕ ಪೆರಿಯಾರ್ ರಾಮಸ್ವಾಮಿ ಅಯ್ಯಂಗಾರ್ ನೇತೃತ್ವದಲ್ಲಿ 1971ರಲ್ಲಿ ನಡೆದ ಜಾಥಾ ಕುರಿತು ನಟ ರಜನಿಕಾಂತ್ ಹಸಿ ಸುಳ್ಳುಗಳನ್ನು ಹೇಳಿದ್ದು, ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ದ್ರಾವಿಡರ್ ವಿಧು ತಲೈ ಕಳಗಂ ಸಂಘಟನೆ ಆಗ್ರಹಿಸಿದೆ. ಜತೆಗೆ, ಅವರ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಿದೆ.
ಪೆರಿಯಾರ್ ಮೌಡ್ಯ ನಿರ್ಮೂಲನೆ ಜಾಥಾದಲ್ಲಿ ಸೀತೆ ಮತ್ತು ಶ್ರೀರಾಮನ ವಿಗ್ರಹಗಳನ್ನು ಬೆತ್ತಲಾಗಿ ಪ್ರದರ್ಶಿಸಿ ಮೆರವಣಿಗೆ ಮಾಡಿದ್ದರು ಎಂದು ಕಾರ್ಯಕ್ರಮವೊಂದರಲ್ಲಿ ರಜನಿಕಾಂತ್ ಹೇಳಿದ್ದರು. ಈ ರೀತಿಯ ಘಟನೆ ಜರಗಿಲ್ಲ. ಸುಳ್ಳು ಹೇಳಿ ರಜನಿ ಅವರು ಪೆರಿಯಾರ್ರನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದೆ.