ದ್ರೋಣಾಚಾರ್ಯರಿಗಾಗಿ ಹುಡುಕಾಟ ಶುರು!
Team Udayavani, Oct 29, 2018, 8:40 AM IST
ಹೊಸದಿಲ್ಲಿ: ಭಾರತೀಯ ವಾಯುಪಡೆ ವಿಶಿಷ್ಟ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದು, ಇದರಲ್ಲಿ ಗೆದ್ದವರಿಗೆ 100 ಕೋಟಿ ರೂ. ಮೌಲ್ಯದ ಒಪ್ಪಂದ ನೀಡಲಿದೆ! ಇದು ಮಹಾಭಾರತ ಕಾಲದ ದ್ರೋಣಾಚಾರ್ಯರನ್ನು ಹುಡುಕುವ ಕೆಲಸವಲ್ಲ. ಬದಲಿಗೆ ಡ್ರೋನ್ಗಳ ಸಮೂಹ ಸೃಷ್ಟಿಸಿ, ಅವುಗಳನ್ನು ಒಂದೇ ಬಾರಿಗೆ ನಿಯಂತ್ರಿಸುವ ವಿಶಿಷ್ಟ ಡ್ರೋನ್ ಸ್ವಾರ್ಮ್ಗಳ ಸ್ಪರ್ಧೆಯಾಗಿದೆ.
ದೇಶೀ ಕಂಪೆನಿಗಳು ಅಭಿವೃದ್ಧಿಪಡಿಸಿದ ಡ್ರೋನ್ ಸ್ವಾರ್ಮ್ಗಳನ್ನು ವಾಯುಪಡೆಯ ಈ ಸ್ಪರ್ಧೆಗೆ ಒಡ್ಡಬಹುದಾಗಿದೆ. ನ.14ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.28 ರಂದು ಪ್ರಸೆಂಟೇಶನ್ ನೀಡಬಹುದು. ಅನಂತರ 2 ಹಂತದಲ್ಲಿ ಡ್ರೋನ್ಗಳ ಪರೀಕ್ಷೆ ನಡೆಯಲಿದೆ.
ಏನಿದು ಡ್ರೋನ್ ಸ್ವಾರ್ಮ್?: ಡ್ರೋನ್ ಸ್ವಾರ್ಮ್ ಎಂದರೆ ಹಕ್ಕಿಗಳ ಗುಂಪು ಆಕಾಶದಲ್ಲಿ ಹಾರಾಡಿದಂತೆ. ಅಂದರೆ ಹತ್ತಾರು ಸಣ್ಣ ಡ್ರೋನ್ಗಳು ಒಟ್ಟಿಗೆ ಹಾರಾಟ ನಡೆಸುತ್ತವೆ. ವಿವಿಧ ದೇಶಗಳು ಈಗಾಗಲೇ ಈ ಡ್ರೋನ್ ಸ್ವಾರ್ಮ್ಗಳನ್ನು ಹೊಂದಿದ್ದು, ಸಣ್ಣ ಶಸ್ತ್ರಗಳಿಂದ ಶತ್ರುಗಳನ್ನು ಹೊಡೆದುರುಳಿಸಲು ಅತ್ಯಂತ ಪರಿಣಾಮಕಾರಿ. ಅಷ್ಟೇ ಅಲ್ಲ, ಇವುಗಳ ವೆಚ್ಚವೂ ಕಡಿಮೆ. ಫೆಬ್ರವರಿಯಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ವಿಂಟರ್ ಒಲಿಂಪಿಕ್ಸ್ನಲ್ಲಿ 1,218 ಡ್ರೋನ್ಗಳು ಹಾರಾಟ ನಡೆಸಿ ಒಲಿಂಪಿಕ್ ರಿಂಗ್ ರಚಿಸಿದ್ದವು.
ರಕ್ಷಣೆಗೆ ಬಳಕೆ
ಸೇನೆ ಈ ಡ್ರೋನ್ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಲು ನಿರ್ಧರಿಸಿದೆ. ಅಂದರೆ ಪರಿಹಾರ ಸಾಮಗ್ರಿಗಳು ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ನೈಸರ್ಗಿಕ ವಿಪತ್ತಿನ ಸನ್ನಿವೇಶದಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ಜನರನ್ನು ಸ್ಥಳಾಂತರಿಸುವತ್ತ ಹೆಲಿಕಾಪ್ಟರುಗಳು ಹೆಚ್ಚಿನ ಗಮನ ಹರಿಸಬಹುದಾಗಿರುತ್ತದೆ. ಈ ಡ್ರೋನ್ಗಳು ಸಾಮಾನ್ಯವಾಗಿ 100 ಕಿ.ಮೀ.ವರೆಗೆ ಸಾಗುವ ಸಾಮರ್ಥ್ಯವನ್ನು ಹೊಂದಿರುತ್ತವೆ. 1 ಕಿಲೋ ತೂಕದ ಆಹಾರ ಪೊಟ್ಟಣಗಳನ್ನು 50ರಿಂದ 100 ಸಣ್ಣ ಡ್ರೋನ್ಗಳು ಎತ್ತಿಕೊಂಡು ಹೋಗಿ ಸಂತ್ರಸ್ತರಿಗೆ ಹಂಚಿ ಬರುತ್ತವೆ. ಈ ಎಲ್ಲ ಡ್ರೋನ್ಗಳನ್ನೂ ಒಂದೇ ಕೇಂದ್ರದಿಂದ ನಿಯಂತ್ರಿಸಬಹುದಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್