ಅಖೀಲೇಶ್ ಬಳಿಕ ಮಾಯಾಗೆ ತಟ್ಟಿದ ಇ.ಡಿ.ದಾಳಿಯ ಬಿಸಿ
Team Udayavani, Feb 1, 2019, 12:30 AM IST
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಗಣಿಗಾರಿಕೆ ಪ್ರಕರಣವು ಎಸ್ಪಿ ನಾಯಕ ಅಖೀಲೇಶ್ ಯಾದವ್ರನ್ನು ಸಂಕಷ್ಟಕ್ಕೆ ಸಿಲುಸಿಕಿದ ಬೆನ್ನಲ್ಲೇ ಈಗ ಬಿಎಸ್ಪಿ ನಾಯಕಿ ಮಾಯಾವತಿ ಅವರಿಗೂ ಬಿಸಿ ತಟ್ಟಿದೆ. ಸ್ಮಾರಕ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಗುರುವಾರ ಉ.ಪ್ರದೇಶದ 6 ಪ್ರದೇಶಗಳಲ್ಲಿ ದಾಳಿ ನಡೆಸಿದೆ.
ಮಾಯಾವತಿ ಅಧಿಕಾರಾವಧಿಯಲ್ಲಿ ಅಂದರೆ 2007ರಿಂದ 2012ರ ಅವಧಿಯಲ್ಲಿ ಬಿಎಸ್ಪಿ ಸ್ಥಾಪಕ ಕಾನ್ಶಿàರಾಮ್, ಬಿಎಸ್ಪಿ ಚಿಹ್ನೆ ಆನೆ ಮತ್ತಿತರ ಸ್ಮಾರಕಗಳನ್ನು ನಿರ್ಮಾಣ ವೇಳೆ 111 ಕೋಟಿ ರೂ.ಗಳ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಗುರುವಾರ ಯುಪಿ ನಿರ್ಮಾಣ ನಿಗಮದ ಎಂಡಿ ಸಿಪಿ ಸಿಂಗ್ ಲಕ್ನೋ ನಿವಾಸ, ಹಗರಣದಲ್ಲಿ ಪಾಲ್ಗೊಂಡ ಗುತ್ತಿಗೆದಾ ರರ ಕಚೇರಿಗಳು, ಮನೆಗಳಲ್ಲೂ ಶೋಧ ಕಾರ್ಯ ನಡೆಸಿದೆ. ಈ ಹಿಂದೆ ಯುಪಿ ಲೋಕಾಯುಕ್ತ ಕೂಡ ಸ್ಮಾರಕ ಹಗರಣ ಸಂಬಂಧ ಮಾಯಾವತಿ ಅವರ ಸಂಪುಟ ಸಹೋದ್ಯೋಗಿಗಳಾಗಿದ್ದ ನಸೀಮುದ್ದೀನ್ ಸಿದ್ದಿಕಿ, ಬಾಬು ಸಿಂಗ್ ಕುಶ್ವಾಹಾ ಮತ್ತು 12 ಬಿಎಸ್ಪಿ ಶಾಸಕರ ವಿರುದ್ಧ ಆರೋಪ ಹೊರಿಸಿತ್ತು.