ದಿಗ್ವಿಜಯ್ ಗೆಲುವಿಗೆ ಕಂಪ್ಯೂಟರ್ ಬಾಬಾ ಹಠಯೋಗ; ಆಯೋಗದ ತನಿಖೆ
ಮೂರು ವಿಚಾರಗಳಿಗೆ ಸಂಬಂಧಿಸಿ ತನಿಖೆ
Team Udayavani, May 9, 2019, 10:48 AM IST
ಭೋಪಾಲ್ : ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ಗೆಲುವಿಗಾಗಿ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಸಾಧುಗಳು ನಡೆಸಿರುವ ‘ಹಠಯೋಗ’ದ ಕುರಿತು ಚುನಾವಣಾ ಆಯೋಗ ತನಿಖೆ ನಡೆಸುತ್ತಿದೆ.
ಮಂಗಳವಾರ ಕಂಪ್ಯೂಟರ್ ಬಾಬಾ ಅವರು ದಿಗ್ವಿಜಯ್ ಸಿಂಗ್ ಅವರ ಸಮ್ಮುಖದಲ್ಲಿ ಹಠಯೋಗ ಪೂಜಾ ವಿಧಿಗಳನ್ನು ಇತರ ಸಾವಿರಾರು ಸಾಧುಗಳೊಂದಿಗೆ ಆರಂಭಿಸಿದ್ದರು.
ಬಿಜೆಪಿ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಜಿಲ್ಲಾ ಚುನಾವಣಾ ಅಧಿಕಾರಿ ಸುಧಾಮ ಖಡೆ ಅವರು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.
ಮೂರು ವಿಚಾರಗಳಿಗೆ ಸಂಬಂಧಿಸಿ ಆಯೋಗ ತನಿಖೆ ನಡೆಸುತ್ತಿದ್ದು, ಯಾರ ಅನುಮತಿ ಪಡೆದು ಕಂಪ್ಯೂಟರ್ ಬಾಬಾ ಹಠಯೋಗ ಆರಂಭಿಸಿದರು. 2.ದಿಗ್ವಿಜಯ್ ಸಿಂಗ್ ಅವರು ಸಾಧುಗಳಿಗೆ ಆಹ್ವಾನ ನೀಡಿದ್ದರೇ 3. ಕಂಪ್ಯೂಟರ್ ಬಾಬಾ ಯಾವ ಪಕ್ಷಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ಅವರ ಕಾರ್ಯಕ್ರಮಗಳಿಗಾಗಿ ಎಷ್ಟು ಹಣ ವ್ಯಯಿಸಲಾಗಿದೆ ಎನ್ನುವುದನ್ನು ತನಿಖೆ ನಡೆಸಲಾಗುತ್ತಿದೆ.
ಕಂಪ್ಯೂಟರ್ ಬಾಬಾ ಈ ಹಿಂದೆ ಬಿಜೆಪಿ ಬೆಂಬಲಿಸುತ್ತಿದ್ದು, ‘ರಾಮ ಮಂದಿರ ಕಟ್ಟಿಲ್ಲ ಹಾಗಾಗಿ ನಾನು ನರೇಂದ್ರ ಮೋದಿಯನ್ನು ಬೆಂಬಲಿಸುವುದಿಲ್ಲ’ ಎಂದಿದ್ದರು.
ಬಾಬಾಗೆ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವ ದರ್ಜೆಯ ಸ್ಥಾನ ಮಾನಗಳನ್ನು ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ