ಎಸ್ಎಸ್ಸಿ ಹಗರಣ: ಬಗೆದಷ್ಟೂ ಸಿಗುತ್ತಿದೆ ಸಂಪತ್ತು
ಮತ್ತೊಂದು ಫ್ಲಾಟ್ನಲ್ಲಿ 28 ಕೋಟಿ ರೂ. ನಗದು: ಮಾಜಿ ಸಚಿವ ಪಾರ್ಥ ಚಟರ್ಜಿ ನಿಕಟವರ್ತಿ ಅರ್ಪಿತಾಗೆ ಸೇರಿದ ಫ್ಲಾಟ್
Team Udayavani, Jul 29, 2022, 8:24 PM IST
ಕೋಲ್ಕತಾ: ಶಿಕ್ಷಕರ ನೇಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಟಿಎಂಸಿ ಮುಖಂಡ ಪಾರ್ಥ ಚಟರ್ಜಿಯ ನಿಕಟವರ್ತಿ ಅರ್ಪಿತಾ ಮುಖರ್ಜಿಯ ಮತ್ತೂಂದು ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದೆ. ಅಲ್ಲಿಯೂ ಕೂಡ 28 ಕೋಟಿ ರೂ.ನಗದು, ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫ್ಲಾಟ್ನ ಬಾಗಿಲಿಗೆ ಬೀಗ ಹಾಕಿದ್ದರಿಂದ ಹಾಗೂ ಅದರ ಕೀಲಿ ಕೈ ಸಿಗದೇ ಇದ್ದುದರಿಂದ ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ.
ಕೋಲ್ಕತಾದ ಚಿನಾರ್ ಪಾರ್ಕ್ ಎಂಬಲ್ಲಿ ಈ ಫ್ಲಾಟ್ ಇದೆ. ಗುರುವಾರ ರಾತ್ರಿಯೇ ದಾಳಿ ಮತ್ತು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.
ನಾನು ಬಲಿಪಶು:
ಈ ನಡುವೆ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಮಾತನಾಡಿದ ಅವರು, “ಟಿಎಂಸಿ ನನ್ನ ವಿರುದ್ಧ ಕೈಗೊಂಡ ಕ್ರಮ ಸರಿಯೋ ತಪ್ಪೋ ಎನ್ನುವುದನ್ನು ಸಮಯವೇ ನಿರ್ಧರಿಸಲಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇ.ಡಿ.ತನಿಖೆ ಶುರು
ಅರ್ಪಿತಾ ಮುಖರ್ಜಿಗೆ ಸೇರಿದ ಮೂರು ಕಂಪನಿಗಳು ಮತ್ತು ಅವುಗಳ ಮೂಲಕ ನಡೆಸಲಾಗಿದೆ ಎಂದು ಹೇಳಲಾಗಿರುವ ವಹಿವಾಟಿನ ಬಗ್ಗೆ ಇ.ಡಿ.ತನಿಖೆ ಶುರು ಮಾಡಿದೆ. ಅರ್ಪಿತಾ ಮುಖರ್ಜಿಯನ್ನು 2011ರ ಮಾ.21ರಂದು ಕಂಪನಿಯ ನಿರ್ದೇಶಕಿಯನ್ನಾಗಿ ನೇಮಕ ಮಾಡಲಾಗಿತ್ತು. ಅದೇ ವರ್ಷದ ಜು.1ರಂದು ನಟಿಯ ಸಹೋದರನನ್ನೂ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ದಾಖಲೆಗಳಲ್ಲಿ ಉಲ್ಲೇಖಗೊಂಡ ಮಾಹಿತಿಯಂತೆ ಆ ಕಂಪನಿ ವಿವಿಧ ರೀತಿಯ ಸರಕುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ.
ಬಲವಂತದಿಂದ ವೈದ್ಯಕೀಯ ಪರೀಕ್ಷೆ
ಟಿಎಂಸಿ ಶಾಸಕ ಪಾರ್ಥ ಚಟರ್ಜಿ ನಿಕಟವರ್ತಿ ಅರ್ಪಿತಾ ಮುಖರ್ಜಿ ಕೋರ್ಟ್ ಆದೇಶದಂತೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿದ ಘಟನೆ ನಡೆದಿದೆ. ಕೋಲ್ಕತಾದ ಜೋಕಾ ಎಂಬಲ್ಲಿರುವ ಆಸ್ಪತೆಗೆ ಕಾರ್ನಲ್ಲಿ ಮುಖರ್ಜಿಯನ್ನು ಇ.ಡಿ.ಅಧಿಕಾರಿಗಳು ಕರೆ ತಂದಾಗ ಇಳಿಯಲು ನಿರಾಕರಿಸಿದರು. ಎಷ್ಟೇ ಮನವೊಲಿಸಿದರೂ, ಆಕೆ ಅತ್ತು ರಂಪ ಮಾಡಿ, ಕಾರಿನಲ್ಲೇ ಕೈ ಕಾಲುಗಳನ್ನು ಬಡಿದಿದ್ದಾರೆ. ಭದ್ರತಾ ಸಿಬ್ಬಂದಿ ಎತ್ತಿಕೊಂಡು ಹೋಗಲು ಪ್ರಯತ್ನಿಸಿದಾಗ ಆಕೆ ರಸ್ತೆಯಲ್ಲೇ ಕುಳಿತಳು. ಇದರ ಹೊರತಾಗಿಯೂ ಕೋರ್ಟ್ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಮುಖರ್ಜಿಯನ್ನು ಬಲವಂತವಾಗಿ ಆಸ್ಪತ್ರೆಯ ಒಳಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಈವರೆಗೆ ರೈಡ್ನಲ್ಲಿ ಸಿಕ್ಕಿದ್ದೇನು?
ಮೊದಲ ದಾಳಿ- 21.90 ಕೋಟಿ ರೂ. (56 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ, 76 ಲಕ್ಷ ರೂ. ಮೌಲ್ಯದ ಚಿನ್ನ) ಒಟ್ಟು 23.22 ಕೋಟಿ ರೂ.
ಎರಡನೇ ದಾಳಿ- 27.9 ಕೋಟಿ ರೂ. 5 ಕೆಜಿ ಚಿನ್ನ (4.3 ಕೋಟಿ ರೂ. ಮೌಲ್ಯ)
ಮೂರನೇ ದಾಳಿ – 28 ಕೋಟಿ ರೂ. ಪತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ