
ಶಿಕ್ಷಣ ನಾಲ್ಕು ಗೋಡೆ ಮಧ್ಯೆ ಸೀಮಿತಗೊಳಿಸಬೇಡಿ; ಪ್ರಧಾನಿ ಹೇಳಿದ 5 E ಸೂತ್ರ ಯಾವುದು?
ನಾವು ನೂತನ ಶಿಕ್ಷಣ ಪದ್ಧತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಹೇಳಿದರು.
Team Udayavani, Sep 11, 2020, 3:34 PM IST

ನವದೆಹಲಿ:ಶಾಲೆಗಳು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣವನ್ನು ಕೇವಲ ನಾಲ್ಕು ಗೋಡೆ ಮಧ್ಯೆ ಸೀಮಿತಗೊಳಿಸದೇ ಅದನ್ನು ಹೊರಜಗತ್ತಿನ ಜತೆ ಸಂಪರ್ಕಿಸುವ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶುಕ್ರವಾರ (ಸೆಪ್ಟೆಂಬರ್ 11, 2020) ಶಾಲಾ ಶಿಕ್ಷಣ ಕುರಿತ ಶಿಕ್ಷಾ ಪರ್ವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಪಠ್ಯಪುಸ್ತಕದ ಹೊರೆಯನ್ನು ಕಡಿಮೆ ಮಾಡಲಿದೆ ಮತ್ತು ವಿನೋಧಾರಿತ ಕಲಿಕೆಯ, ಸಂಪೂರ್ಣ ಅನುಭವ ನೀಡುವ ಶಿಕ್ಷಣವಾಗಲಿದೆ. ನಾವು ನೂತನ ಶಿಕ್ಷಣ ಪದ್ಧತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಹೇಳಿದರು.
2022ರ ಹೊತ್ತಿಗೆ ನಮ್ಮ ವಿದ್ಯಾರ್ಥಿಗಳು ನೂತನ ವಿದ್ಯಾಭ್ಯಾಸ ಕ್ರಮಕ್ಕೆ ಕೈಜೋಡಿಸುವ ಮೂಲಕ ಹೊಸ ಶಿಕ್ಷಣದತ್ತ ಹೆಜ್ಜೆ ಇಡಬೇಕಾಗಿದೆ. ಇದೊಂದು ಭವಿಷ್ಯದ ತಯಾರಿ ಮತ್ತು ವೈಜ್ಞಾನಿಕ ವ್ಯಾಸಂಗ ಕ್ರಮವಾಗಿದೆ. ಇನ್ಮುಂದೆ ಶಿಕ್ಷಣ ಭವಿಷ್ಯದಲ್ಲಿ ಕ್ಲಿಷ್ಟಕರ ಚಿಂತನೆ, ಕ್ರಿಯೇಟಿವಿಟಿ, ಸಂವಹನ ಮತ್ತು ಕುತೂಹಲವನ್ನೊಳಗೊಂಡ ನೂತನ ಕೌಶಲವನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡಿದ ಸಿಸಿಬಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು 5Eಗಳ ಸೂತ್ರವನ್ನು ನೀಡಿದ್ದಾರೆ. ಅವುಗಳೆಂದರೆ ಎಂಗೇಜ್ (ತೊಡಗಿಸಿಕೊಳ್ಳುವಿಕೆ), ಎಕ್ಸ್ ಪ್ಲೋರ್ (ಶೋಧನೆ), ಎಕ್ಸ್ ಪಿರಿಯನ್ಸ್ (ಅನುಭವ), ಎಕ್ಸ್ ಪ್ರೆಸ್ (ಅಭಿವ್ಯಕ್ತಿ) ಮತ್ತು ಎಕ್ಸೆಲ್ (ಶ್ರೇಷ್ಠತೆ)…ಇವು ಮಕ್ಕಳಿಗೆ ನೂತನ ಕಲಿಕೆಯ ವಿಧಾನಗಳಾಗಿವೆ. ಎನ್ ಇಪಿಯನ್ನು ಮುಖ್ಯವಾಗಿ ಮಕ್ಕಳನ್ನು ದೃಷ್ಟಿಕೋನದಲ್ಲಿರಿಸಿಕೊಂಡು ಅಭಿವೃದ್ದಿಪಡಿಸಲಾಗಿದ್ದು, ಒತ್ತಡದ ಪಠ್ಯಕ್ರಮದಿಂದ ವಿನೋದ, ಹುಡುಕಾಟ ಮತ್ತು ಚಟುವಟಿಕೆಗೆ ಪೂರಕವಾಗಿರುವಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Chandigarh; ತಡರಾತ್ರಿ ಕಾರ್ಯಾಚರಣೆ: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಆರೋಪಿಗಳ ಬಂಧನ

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

Aadhaar: ಬೆರಳಿಲ್ಲವೇ? ಕಣ್ಣಿಂದಲೇ ಆಧಾರ್ ನೋಂದಣಿ

ತಾಂಜೇನಿಯಾ-ಭಾರತದ ಕುಟುಂಬದ ನಡುವೆ ಹೊಸ ಬಂಧ: ಇಬ್ಬರ ಜೀವ ಉಳಿಸಿದ ಕಿಡ್ನಿ ಸ್ವ್ಯಾಪಿಂಗ್!
MUST WATCH
ಹೊಸ ಸೇರ್ಪಡೆ

KSRTC: ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ; ರಾ. ಹೆದ್ದಾರಿ ತಡೆದು ಪ್ರತಿಭಟನೆ

KAIVA movie review; ಮುಗ್ಧ ಪ್ರೇಮಿಯ ರೆಡ್ ಅಲರ್ಟ್

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

Surathkal: ಟೋಲ್ ಗೇಟ್ ಗೆ ಟ್ರಕ್ ಡಿಕ್ಕಿ