ಮಗನ ಕುಡಿತ ನಿಲ್ಲಿಸಿದ ವೃದ್ಧ ಅಪ್ಪ, ಕಡಿದು ಕೊಂದು ಪರಾರಿಯಾದ ಮಗ
Team Udayavani, Jun 18, 2019, 12:23 PM IST
ಬಂಡಾ, ಉತ್ತರ ಪ್ರದೇಶ : ತನ್ನ ಶರಾಬು ಕುಡಿತವನ್ನು ಬಲವಂತದಿಂದ ನಿಲ್ಲಿಸಿದ 70ರ ಹರೆಯದ ಅಪ್ಪನನ್ನು ಕಡಿದು ಕೊಂದ ಮಗ ಪರಾರಿಯಾಗಿದ್ದು ಪೊಲೀಸರೀಗ ಆತನ ಶೋಧದಲ್ಲಿದ್ದಾರೆ.
ಮಹೋಬಾ ಜಿಲ್ಲೆಯ ಗುಡಾ ಗ್ರಾಮದಲ್ಲಿ ನಿನ್ನೆ ಸೋಮವಾರ ತಡ ರಾತ್ರಿ ಈ ಘಟನೆ ನಡೆಯಿತೆಂದು ಸರ್ಕಲ್ ಆಫೀಸರ್ ಅವಧ್ ಸಿಂಗ್ ತಿಳಿಸಿದರು.
ಮೃತ ವ್ಯಕ್ತಿಯನ್ನು ಧರಮ್ಜಿತ್ ಎಂದು ಗುರುತಿಸಲಾಗಿದೆ. ಈತನನ್ನು ಕಡಿದು ಕೊಲ್ಲಲು ಪುತ್ರ ಕರಣ್ ಸಿಂಗ್ ಬಳಸಿದ್ದ ಕೈಕೊಡಲಿ ಪೊಲೀಸರಿಗೆ ಸಿಕ್ಕಿದೆ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ.